Categories: Ripponpete

ಸರ್ಕಾರಿ ಶಾಲೆಯ ದುಸ್ಥಿತಿ ; ಗಿಡಗಂಟಿಗಳಿಂದ ಮುಚ್ಚಿಕೊಂಡಿರುವ ಬಾಗಿಲಿಲ್ಲದ ಬಾಲಕಿಯರ ಶೌಚಾಲಯ !

ರಿಪ್ಪನ್‌ಪೇಟೆ: ಸ್ವಚ್ಚ ಭಾರತ ಎಂಬ ಘೋಷಣೆಯಲ್ಲಿ ಅರಸಾಳು ಗ್ರಾಮ ಪಂಚಾಯ್ತಿ ಉದ್ಯೋಗ ಖಾತ್ರಿ ಯೋಜನೆಯಡಿ ತಮ್ಮಡಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಬಳಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಬಾಲಕಿಯರ ಶೌಚಾಲಯಕ್ಕೆ ಬಾಗಿಲಿಲ್ಲದೆ ಗಿಡಗಂಟಿಗಳಿಂದ ಮುಚ್ಚಿಕೊಂಡು ಶೌಚಾಲಯಕ್ಕೆ ದಾರಿಯೂ ಇಲ್ಲದೆ ಹುಡುಕುವ ಸ್ಥಿತಿಯಲ್ಲಿ ಬಾಲಕಿಯರು ಮತ್ತು ಬಾಲಕರ ಶೌಚಾಲಯಕ್ಕೆ ಹೋಗಿ ವಾಪಾಸ್ಸು ಬರುವವರೆಗೂ ಕಾಯುವ ಸ್ಥಿತಿ ಎದುರಾಗಿದೆ ಎಂದು ಪೋಷಕರು ತಮ್ಮ ಮನದ ನೋವನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದರು.

ಕಳೆದ ಐದಾರು ವರ್ಷದ ಹಿಂದೆ ತಮ್ಮಡಿಕೊಪ್ಪ ಗ್ರಾಮದ ಅಕಾಶಮಕ್ಕಿ ಅಂಗನವಾಡಿಯಲ್ಲಿ ಮಗುವೊಂದು ಅಕಸ್ಮಿಕವಾಗಿ ಹಾವು ಕಚ್ಚಿ ಸಾವನ್ನಪ್ಪಿರುವ ವಿಷಯ ಇನ್ನೂ ಜನಮಾನಸದಲ್ಲಿ ಮಾಸುವ ಮುನ್ನವೇ ತಮ್ಮಡಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿಯಲ್ಲಿ ನಿರ್ಮಿಸಲಾಗಿರುವ ಬಾಲಕ-ಬಾಲಕಿಯರ ಶೌಚಾಲಯಕ್ಕೆ ಗುತ್ತಿಗೆದಾರ ಬಾಗಿಲು ಅಳವಡಿಸದೆ ಇದ್ದು ಇನ್ನೂ ಈ ಶೌಚಾಲಯದ ಬಳಿಯಲ್ಲಿ ಗಿಡ-ಗಂಟಿ ಬೆಳೆದು ಸಂಪೂರ್ಣವಾಗಿ ಶೌಚಾಲಯ ಮುಚ್ಚಿಕೊಂಡಿದ್ದು ದಾರಿ ಸಹ ಇಲ್ಲದೆ ಹಾವು ಹುಳ ಹಪ್ಪಡೆಗಳು ಎಲ್ಲಿ ಸೇರಿಕೊಂಡಿವೆಯೋ ಎಂಬ ಭಯದಲ್ಲಿ ಬಾಲಕಿಯರು ಮತ್ತು ಬಾಲಕರು ಶೌಚಾಲಯಕ್ಕೆ ಹೋಗುವಂತಾಗಿದೆ.

ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿ ಸುಸಜ್ಜಿತ ಶೌಚಾಲಯ ನಿರ್ಮಿಸಲಾಗಿದ್ದರೂ ಕೂಡಾ ಪ್ಲಾನ್ ಆಂಡ್ ಎಸ್ಟಿಮೆಂಟ್‌ನಲ್ಲಿ ಈ ಶೌಚಾಲಯಕ್ಕೆ ಬಾಗಿಲು ಅಳವಡಿಸದೇ ಇರುವುದು ನೋಡಿ ಮಕ್ಕಳು ಹಿಡಿಶಾಪ ಹಾಕುವಂತಾಗಿದ್ದರೂ ಕೂಡಾ ಸಂಬಂಧಪಟ್ಟ ಅರಸಾಳು ಗ್ರಾಮ ಪಂಚಾಯ್ತಿಯವರು ತಮಗೇನು ಗೊತ್ತಿಲ್ಲದವರಂತೆ ನಿರ್ಲಕ್ಷ್ಯ ವಹಿಸಿದ್ದಾರೆ ಶಾಲಾ ಮುಖ್ಯೋಪಾಧ್ಯಾಯರು ಸರಿಯಾಗಿ ಶಾಲೆಗೆ ಬರುತ್ತಿಲ್ಲ ಎಂಬ ಉದ್ದೇಶದಿಂದ ಪೋಷಕರು ದಿಢೀರ್ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ವರದಿಗಾಗಿ ತೆರಳಿದ ಮಾಧ್ಯಮದವರಿಗೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮೇಶ್ ಮತ್ತು ಇತರರು ಈ ದುರಾವಸ್ಥೆಯ ಶೌಚಾಲಯದ ಬಳಿ ಪ್ರತ್ಯಕ್ಷವಾಗಿ ತೋರಿಸಿ ಹೀಗೋಂದು ಶೌಚಾಲಯ ನಿರ್ಮಿಸಿದ್ದಾರೆ ನಮ್ಮ ಹೆಣ್ಣುಮಕ್ಕಳು ಹೇಗೆ ಈ ಶೌಚಾಲಯಕ್ಕೆ ಹೋಗಬೇಕು ಸ್ವಾಮಿ ಹೇಳಿ ಎಂದು ತಮ್ಮ ಮಕ್ಕಳ ನೋವಿನ ಕಥೆಯನ್ನು ಬಿಡಿಸಿಟ್ಟರು.

Malnad Times

Recent Posts

ಗೀತಾ ಶಿವರಾಜ್‌ಕುಮಾರ್ ರವರಿಗೆ ಒಂದು ಅವಕಾಶ ಕೊಡಿ ; ಸಾ.ರಾ. ಗೋವಿಂದು

ಶಿವಮೊಗ್ಗ: ಗೀತಾ ಶಿವರಾಜ್‌ಕುಮಾರ್ ಅವರಿಗೆ ಒಂದು ಅವಕಾಶವನ್ನು ನೀಡಬೇಕು ಎಂದು ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ…

2 hours ago

ಗೀತಾ ಗ್ರಾ.ಪಂ. ಚುನಾವಣೆ ಕೂಡ ಗೆಲ್ಲಲ್ಲ ; ಕುಮಾರ್ ಬಂಗಾರಪ್ಪ

ಶಿವಮೊಗ್ಗ : ಬಿ.ವೈ.ರಾಘವೇಂದ್ರ ಅವರು ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ…

3 hours ago

ಮೇ 07 ರಂದು ಮತ ಚಲಾಯಿಸಲು ವೇತನ ಸಹಿತ ರಜೆ

ಶಿವಮೊಗ್ಗ : ಭಾರತ ಚುನಾವಣಾ ಆಯೋಗವು ಕರ್ನಾಟಕದಲ್ಲಿ 02 ಹಂತಗಳಲ್ಲಿ ಲೋಕಸಭಾ ಚುನಾವಣೆಯನ್ನು ಘೋಷಿಸಿದ್ದು, ಶಿವಮೊಗ್ಗ ಜಿಲ್ಲಾದ್ಯಂತ ಮೇ 07…

5 hours ago

ವಕೀಲರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಚಿಕ್ಕಮಗಳೂರು: ಇಲ್ಲಿನ ವಕೀಲರ ಸಂಘದ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಸುಜೇಂದ್ರ, ಉಪಾಧ್ಯಕ್ಷರಾಗಿ ಶರತ್‌ಚಂದ್ರ, ಕಾರ್ಯದರ್ಶಿ ಅನಿಲ್‌ಕುಮಾರ್, ಖಜಾಂಚಿ ದೀಪಕ್,…

5 hours ago

Chikkamagaluru | ಮೇ 1 ರಿಂದ 5ರವರೆಗೆ ಕರಗ ಮಹೋತ್ಸವ

ಚಿಕ್ಕಮಗಳೂರು: ನಗರದ ತಮಿಳು ಕಾಲೋನಿಯ (ಸಂತೆ ಮೈದಾನ) ಶ್ರೀ ಕರುಮಾರಿಯಮ್ಮ ದೇವಾಲಯದಲ್ಲಿ ಮೇ 1 ರಿಂದ 5ರವರೆಗೆ ಕರಗ ಮಹೋತ್ಸವ…

5 hours ago

ಕಾದ ಕಾವಲಿಯಂತಾದ ಮಲೆನಾಡು, ಬಿಸಿಲಿನ ಜಳಕ್ಕೆ ಜನ ಸುಸ್ತೋ ಸುಸ್ತು

ಶಿವಮೊಗ್ಗ : ಮಲೆನಾಡೆಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಕರ್ನಾಟಕ ಮಾತ್ರವಲ್ಲ ಅದರಿಂದಾಚೆಗೂ ಮಲೆನಾಡನ್ನು ಪ್ರೀತಿಸುವವರು, ಇರಲು ಇಚ್ಛಿಸುವವರು ಇದ್ದಾರೆ.…

9 hours ago