Categories: Ripponpete

ಹುಯ್ಯೋ ಹುಯ್ಯೋ ಮಳೆರಾಯ ಇಲ್ಲಿ ಯಾವ್ ಬೆಳೆಗೂ ನೀರಿಲ್ಲ ! ಅನ್ನದಾತನಿಂದ ವರುಣನಿಗಾಗಿ ಪ್ರಾರ್ಥನೆ

ರಿಪ್ಪನ್‌ಪೇಟೆ : ಈ ಬಾರಿ ಕೈಕೊಟ್ಟ ಆಶ್ಲೇಷ, ಮಘಾ ಮಳೆಯಿಂದಾಗಿ ಮಲೆನಾಡಿನ ನಡುಮನೆಯಾದ ಹೊಸನಗರ ತಾಲೂಕಿನ ರೈತ ಸಮೂಹದಲ್ಲಿ ಆತಂಕ ಮನೆ ಮಾಡಿದ್ದು ತಾಲ್ಲೂಕಿನಾದ್ಯಂತ ಬರದ ಛಾಯೆ ಆವರಿಸಿದೆ.

ಮುಂದೇನು ಎಂಬ ಚಿಂತೆ :

ಒಂದು ತಿಂಗಳಿನಿಂದ ಬೇಸಿಗೆಯಂಥ ಸುಡು ಬಿಸಿಲಿನ ವಾತಾರಣ ಇರುವುದರಿಂದ ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ. ಹಳ್ಳ ತೊರೆಗಳು ಬತ್ತಿ ಹೋಗಿವೆ. ಕೆರೆಗಳಲ್ಲೂ ನೀರು ಖಾಲಿಯಾಗುತ್ತಿದೆ. ಆಗಸ್ಟ್‌ನಲ್ಲೇ ಈ ಸ್ಥಿತಿಯಾದರೆ ಮುಂದೇನು ಎಂಬ ಚಿಂತೆ ಕೃಷಿಕರಲ್ಲಿ ಕಾಡುವಂತಾಗಿದೆ.

ನೀರಿಲ್ಲದೆ ಬಿರುಕು ಬಿಟ್ಟಿರುವ ನಾಟಿ ಮಾಡಿದ ಭತ್ತದ ಗದ್ದೆಗಳು.

ಕಾಡು ಪ್ರಾಣಿಗಳ ಕಾಟ :

ಈಗಾಗಲೇ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಬೆನವಳ್ಳಿ ಗ್ರಾಮದ ಬೈರಾಪುರ ಮಜರೆ ಗ್ರಾಮದ ಮಂಜುನಾಥ ಭಂಡಾರಿ ಎಂಬ ರೈತ ನಾಟಿ ಮಾಡಿದ ಭತ್ತದ ಗದ್ದೆಗೆ ಜಿಂಕೆಗಳೊಂದಿಗೆ ಕಾಡು ಪ್ರಾಣಿಗಳ ಕಾಟದಿಂದಾಗಿ ಭತ್ತದ ನಾಟಿಗದ್ದೆ ಆಹುತಿಯಾಗುತ್ತಿದ್ದರೆ ಮಳೆ ಬಾರದ ಕಾರಣ ಭತ್ತ, ಮುಸುಕಿನಜೋಳ, ಅಡಿಕೆ, ಶುಂಠಿ, ಕಬ್ಬು, ಬಾಳೆ, ಕಾಳುಮೆಣಸು ಇನ್ನಿತರ ಬೆಳೆಗಳು ಒಣಗುವಂತಾಗಿದ್ದು ರೈತರಲ್ಲಿ ಮತ್ತಷ್ಟು ಆತಂಕ ಮನೆಮಾಡಿದೆ.

ಬತ್ತಿದ ಜಲಮೂಲಗಳು :

ಹೊಸನಗರ ತಾಲ್ಲೂಕಿನಲ್ಲಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಬಿಸಿಲಿನಿಂದ ಜಲ ಮೂಲಗಳು ಬತ್ತಿ ಹೋಗಿರುವುದರಿಂದ ಕುಡಿಯುವ ನೀರಿಗೂ ಸಂಚಕಾರ ಎದುರಾಗಿದೆ. ಮಳೆಯನ್ನೇ ನಂಬಿ ನಾಟಿ ಮಾಡಿದ್ದ ಭತ್ತದ ಗದ್ದೆಗಳು ಸಂಪೂರ್ಣವಾಗಿ ಒಣಗಿ ಹೋಗಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ. ಹಲವು ಪ್ರದೇಶಗಳಲ್ಲಿ ನಾಟಿ ಮಾಡಿದ್ದ ಭತ್ತದ ಗದ್ದೆಗಳನ್ನು ಪಾಳು ಬಿಡಲಾಗಿದೆ. ಕೆಲವೆಡೆ ಸಸಿಮಡಿಗಳು ಹಾಗೆಯೇ ಉಳಿದಿದ್ದು, ನಾಟಿ ಕಾರ್ಯವನ್ನೇ ಕೈ ಬಿಡಲಾಗಿದೆ.

ನೀರಿಲ್ಲದೆ ಒಣಗಿದ ಮುಸುಕಿನ ಜೋಳದ ಬೆಳೆ.

ಹುಂಚ ಮತ್ತು ಕೆರೆಹಳ್ಳಿ ಹೋಬಳಿಯ ಕೋಡೂರು, ಹುಂಚ, ಅಮೃತ, ಹೆದ್ದಾರಿಪುರ, ಕೆರೆಹಳ್ಳಿ, ಗವಟೂರು, ಅರಸಾಳು, ಕೆಂಚನಾಲ, ಬೆಳ್ಳೂರು, ಬಸವಾಪುರ, ಬುಕ್ಕಿವರೆ, ದೋಬೈಲು, ಬರುವೆ, ಮುಡುಬ, ಬೈರಾಪುರ, ತಮ್ಮಡಿಕೊಪ್ಪ, ಆಲವಳ್ಳಿ, ಮಸರೂರು ಬಾಳೂರು, ನೆವಟೂರು, ಚಂದಳ್ಳಿ, ಮಾದಾಪುರ, ಕುಕ್ಕಳಲೇ, ನೇರಲುಮನೆ, ಹರತಾಳು, ಹರಿದ್ರಾವತಿ, ಮಾರುತಿಪುರ ಚಿಕ್ಕಜೇನಿ, ಹಾರೋಹಿತ್ತಲು, ಮಳವಳ್ಳಿ, ಕೊಳವಳ್ಳಿ, ಕೋಟೆತಾರಿಗ, ನಾಗರಹಳ್ಳಿ, ಶೆಟ್ಟಿಬೈಲು, ಆನೆಗದ್ದೆ, ಬಿದರಹಳ್ಳಿ, ಕಮ್ಮಚ್ಚಿ, ಅಮೃತ, ಸೊನಲೆ, ಬೇಹಳ್ಳಿ, ಬೈಂದೂರು, ಸುರಳಿಕೊಪ್ಪ, ಮಳಲಿಕೊಪ್ಪ, ಹುಗುಡಿ, ಹಿಂಡ್ಲೆಮನೆ, ಕರಿಗೆರಸು, ಕಲ್ಲುಕೊಪ್ಪ, ಕೆರಗೋಡು, ಶಿವಪುರ, ಹುಳಿಗದ್ದೆ, ಸಂಪಳ್ಳಿ ಇನ್ನಿತರ ಗ್ರಾಮಗಳಲ್ಲಿ ರೈತರು ಬೋರ್‌ವೆಲ್ ನೀರು ಹರಿಸಿ ಸಕಾಲದಲ್ಲಿ ನಾಟಿ ಮಾಡಿಕೊಂಡು ಮುಗಿಲು ನೋಡುವಂತಾಗಿದ್ದರೆ, ಗದ್ದೆಯಲ್ಲಿ ನಾಟಿ ಮಾಡಿದ ಭತ್ತದ ಸಸಿಯನ್ನು ಜಿಂಕೆ, ಕಾಡುಕೋಣ, ನವಿಲು, ಇನ್ನಿತರ ಕಾಡು ಪ್ರಾಣಿಗಳಿಂದಾಗಿ ಬೆಳೆ ಉಳಿಸಿಕೊಳ್ಳುವುದೇ ಕಷ್ಟಕರವಾಗಿದೆ.

ಬೈರಾಪುರ ಮಜರೆ ಗ್ರಾಮದ ಮಂಜುನಾಥ ಭಂಡಾರಿ ಎಂಬ ರೈತ ನಾಟಿ ಮಾಡಿದ ಭತ್ತದ ಗದ್ದೆಗಳನ್ನು ಜಿಂಕೆಗಳು ತಿಂದಿರುವುದು.

ಒಂದು ಕಡೆ ಮಳೆಯಿಲ್ಲದೆ ಬೆಳೆಗೆ ನೀರು ಇಲ್ಲದೆ ಒಣಗುವಂತಾಗಿದ್ದು ಇನ್ನೊಂದು ಕಡೆಯಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ರೈತರು ಕಾಲಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ಮಲೆನಾಡಿನಲ್ಲಿ ಜೂನ್ 10 ರಿಂದ ಮಳೆ ಆರಂಭವಾಗಬೇಕಾದ ಮುಂಗಾರು ಮಳೆ ವಿಫಲವಾದರೂ ಜುಲೈ ಆರಂಭದಿಂದ ಮಳೆ ಬಿರುಸು ಕಂಡಿತ್ತು ಆದರೆ ಆಗಸ್ಟ್ ತಿಂಗಳಲ್ಲಿ ಮಳೆ ಮಾಯವಾಗಿ ಬಿಸಿಲ ಝಳ ಜೋರಾಗಿ ಅಂತರ್ಜಲದ ಕೊರತೆ ಭತ್ತದ ಬೆಳೆಯ ಮೇಲೆ ತೀವ್ರ ಪರಿಣಾಮ ಉಂಟು ಮಾಡಿದೆ.

889 ಮಿ.ಮೀ. ಮಳೆ ಕೊರತೆ :

ತಾಲ್ಲೂಕಿನಲ್ಲಿ ವಾಡಿಕೆ ಮಳೆ 2.541 ಮಿ.ಮೀ. ಇದುವರೆಗೆ 1652 ಮಿ.ಮೀ.ಮಳೆಯಾಗಿದ್ದು 889 ಮಿ.ಮೀ. ಮಳೆ ಕೊರತೆ ಕಂಡು ಬಂದಿದೆ. ತಾಲ್ಲೂಕಿನಲ್ಲಿ ಬಿಸಿಲ ಝಳ ಹೆಚ್ಚಾಗಿದ್ದು ರೈತರು ಅಡಿಕೆ, ಶುಂಠಿ, ಭತ್ತ, ಮೆಕ್ಕಜೋಳ ನೀರಿಲ್ಲದೆ ಒಣಗುತ್ತಿದ್ದು ತೆರೆದ ಮತ್ತು ಕೊಳವೆ ಬಾವಿಯಲ್ಲಿ ಸಹ ನೀರು ಇಲ್ಲದೆ ಇದ್ದು ಕೆಲವೇ ದಿನಗಳಲ್ಲಿ ಬಿಸಿಲು ಹೀಗೆ ಮುಂದುವರಿದರೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಎದುರಾಗುವುದೆಂದು ಹಿರಿಯರಾದ ಟಿ.ಆರ್.ಕೃಷ್ಣಪ್ಪ, ರತೇಶ್ವರಪ್ಪಗೌಡ, ಬಿ.ಎಸ್.ಪುರುಷೋತ್ತಮ್‌ರಾವ್, ಜಿ.ಎಂ. ದುಂಡರಾಜ್‌ಗೌಡ, ಕೆ.ಆರ್. ಭೀಮರಾಜ್‌ಗೌಡ, ಡಿ.ಸಿ. ಈಶ್ವರಪ್ಪಗೌಡ, ಎಂ.ಆರ್. ಶಾಂತವೀರಪ್ಪಗೌಡ, ತಾತೇಶ್ವರಪ್ಪಗೌಡ ಬೆಳಂದೂರು, ಪುಟ್ಟಸ್ವಾಮಿಗೌಡರು ಬೆಳಂದೂರು ಇವರು ಮಾಧ್ಯಮದವರ ಬಳಿ ತಮ್ಮ ಕಳವಳ ವ್ಯಕ್ತಪಡಿಸಿದರು.

ವಿಶೇಷ ವರದಿ : ಮಹೇಶ ಹಿಂಡ್ಲೆಮನೆ

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

4 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

4 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

4 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

4 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

4 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

5 days ago