Categories: Shivamogga

ಅತ್ಯಾಧುನಿಕ ಚಿಕಿತ್ಸೆ ಮೂಲಕ ಹೃದಯ ಕಾಯಿಲೆ ಗುಣ ಮಾಡಬಹುದು ; ಡಾ. ಶ್ರೀವತ್ಸ ನಾಡಿಗ

ಶಿವಮೊಗ್ಗ: ಹೃದಯದ ರಕ್ತನಾಳಗಳ ಬ್ಲಾಕೇಜ್ ಗಳು ವಯಸ್ಸು ಹೆಚ್ಚಿದಂತೆಲ್ಲಾ ಜಾಸ್ತಿಯಾಗುತ್ತಿದ್ದು, ಇಂತಹ ರೋಗಿಗಳಿಗೆ ಬೈಪಾಸ್ ಆಪರೇಷನ್ ಮಾಡುವುದು ಹಲವು ಬಾರಿ ಅಸಾಧ್ಯವಾಗಿರುವುದರಿಂದ ಇಂತಹ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆ ಮೂಲಕ ಗುಣಮುಖರನ್ನಾಗಿ ಮಾಡಬಹುದು ಎಂದು ಸಹ್ಯಾದ್ರಿ ನಾರಾಯಣ ಹೃದಯಾಲಯದ ಹೃದ್ರೋಗ ತಜ್ಞ ವೈದ್ಯರಾದ ಡಾ. ಶ್ರೀ ವತ್ಸ ನಾಡಿಗ ಹೇಳಿದ್ದಾರೆ.


ಅವರು ಗುರುವಾರ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಹೃದಯಾಘಾತ ಹಾಗೂ ಹೃದಯಕ್ಕೆ ಸಂಬAಧಿಸಿದ ಕಾಯಿಲೆಗಳೆಂದರೆ ಎಲ್ಲರೂ ಭಯಭೀತರಾಗುತ್ತಿದ್ದಾರೆ. ಆಹಾರ ಪದ್ಧತಿ ಬದಲಾವಣೆ, ಜಡಜೀವನ ಶೈಲಿ, ದುಶ್ಚಟಗಳಿಗೆ ಬಲಿಯಾಗಿತ್ತಿರುವ ನಮ್ಮ ಯುವ ಪೀಳಿಗೆ, ಕೆಲಸದಲ್ಲಿನ ಒತ್ತಡ, ಹೆಚ್ಚುತ್ತಿರುವ ವಯೋಮಾನ, ಹಲವಾರು ಕಾರಣಗಳಿಂದ ಹೃದಯದ ರಕ್ತನಾಳಗಳಲ್ಲಿ ರಕ್ತ ಸಂಚಾರಕ್ಕೆ ಅಡಚಣೆ ಉಂಟು ಮಾಡುವ ಕೊಲೆಸ್ಟಾçಲ್ ತುಂಬಿದ ಬ್ಲಾಕೇಜ್ ಗಳಾಗಿರುತ್ತವೆ. ಇದರಿಂದ ಎದೆನೋವು, ಹೃದಯಾಘಾತ, ಹೃದಯ ವೈಫಲ್ಯಕ್ಕೆ ಎಡೆ ಮಾಡಿಕೊಡುತ್ತದೆ ಎಂದರು.


ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಿರುವುದರಿಂದ ಹೃದಯದ ಕಾಯಿಲೆಗಳು ಚಿಕ್ಕ ವಯಸ್ಸಿನಲ್ಲೇ ತೀವ್ರವಾಗಿ ಕಾಣಿಸಿಕೊಳ್ಳುತ್ತಿವೆ. ಈ ರೀತಿಯ ರಕ್ತನಾಳಗಳ ಬ್ಲಾಕೇಜ್ ಗಳು ಕಂಡು ಬಂದಾಗ ರೋಗಿಗೆ ಔಷಧಿಗಳು ಪ್ರಯೋಜನವಾಗದಿದ್ದಾಗ ಆಂಜಿಯೋಪ್ಲಾಸ್ಟಿ ಅಥವಾ ಬೈಪಾಸ್ ಆಪರೇಷನ್ ಗಳನ್ನು ಮಾಡುತ್ತೇವೆ ಎಂದರು.
ವಯಸ್ಸು ಹೆಚ್ಚಿದಂತೆ ಕೊಲೆಸ್ಟಾçಲ್ ಅಂಶದ ಜೊತೆಗೆ ಕ್ಯಾಲ್ಸಿಯಂ ಅಂಶವೂ ತುಂಬಿದಾಗ ಬ್ಲಾಕೇಜ್ ಗಳು ಗಟ್ಟಿಯಾಗಿ ಅಸ್ಥಿಯಷ್ಟು ಕಠಿಣವಾಗುತ್ತದೆ. ಇಂತಹ ಬ್ಲಾಕೇಜ್ ಗಳಿಗೆ ಆಂಜಿಯೋಪ್ಲಾಸ್ಟಿ ಅಥವಾ ಸ್ಟೆಂಟ್ ಅಳವಡಿಸುವುದರಿಂದ ಕೆಲವೊಮ್ಮೆ ಸ್ಟೆಂಟ್ ಗಳು ಹಠಾತ್ ಆಗಿ ಬಂದ್ ಆದರೆ ಹೃದಯಾಘಾತವಾಗುವ ಸಂಭವ ಇರುತ್ತದೆ. ಅದಕ್ಕಾಗಿ ಈ ಕ್ಯಾಲ್ಸಿಯಂಭರಿತ ಬ್ಲಾಕೇಜ್ ಗಳಿಗೆ ವಜ್ರದಿಂದ ಮಾಡಿದ ರೊಟೇಷನಲ್ ಅಥೆರೆಕ್ಟಮಿ ಹಾಗೂ ಇತ್ತೀಚೆಗೆ ಇಂಟರ್ ವ್ಯಾಸ್ಕುö್ಯಲರ್ ಲಿಥೋಟ್ರಿಪ್ಸಿ(ಐವಿಎಲ್) ಎಂಬ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ತಿಳಿಸಿದರು.


ಈ ಕ್ಯಾಲ್ಸಿಯಂ ತುಂಬಿದ ಬ್ಲಾಕೇಜ್ ಗಳನ್ನು ಸುಸೂತ್ರವಾಗಿ ಈ ಚಿಕಿತ್ಸೆಯಿಂದ ಸರಿಪಡಿಸಬಹುದು. ಗಟ್ಟಿಯಾದ ಜಾಗದಲ್ಲಿ ಒಂದು ಚಿಕ್ಕ ಬಲೂನ್ ಇರಿಸಿ ಶಾಕ ವೇವ್ ಗಳು 10 ಸೆಕೆಂಡ್ ವರೆಗೆ 6-8 ಬಾರಿ ನೀಡಲಾಗುತ್ತದೆ. ಇದರಿಂದ ಈ ಕ್ಯಾಲ್ಸಿಯಂ ಸುರಳಿ ಭೇದಿಸಬಹುದು. ಇದಾದ ನಂತರ ಸ್ಟೆಂಟ್ ಅಳವಡಿಸಿದರೆ ರೋಗಿಗೆ ಎದೆ ನೋವು ಇರುವುದಿಲ್ಲ ಎಂದರು.
ಈ ಚಿಕಿತ್ಸೆಯಿಂದ ಎರಡು ದಿನದಲ್ಲೇ ರಕ್ತನಾಳದಲ್ಲಿ ಶೇ. 90 ರಷ್ಟು ಬ್ಲಾಕೇಜ್ ಇದ್ದರೂ ಸಂಪೂರ್ಣ ಗುಣಮುಖರಾಗಬಹುದು ಎಂದರು.


ಗೋಷ್ಠಿಯಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ಚಕ್ರವರ್ತಿ ಸಂಡೂರ, ವ್ಯವಸ್ಥಾಪಕ ನಿರ್ದೇಶಕ ವರ್ಗಿಸ್ ಪಿ. ಜಾನ್, ಅರಿವಳಿಕೆ ತಜ್ಞ ವೈದ್ಯ ಡಾ. ರಾಮಸುಂದರ್, ಡಾ. ಸಂದೀಪ್ ಕೋಠಿ, ಶೈಲೇಶ್ ಎಸ್.ಎನ್. ಉಪಸ್ಥಿತರಿದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

13 hours ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

16 hours ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

17 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

19 hours ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

19 hours ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

1 day ago