Categories: Shivamogga

ಅ.14, 15ರಂದು ಶಿವಮೊಗ್ಗದಲ್ಲಿ ಕನ್ಯಾದಾನ


ಶಿವಮೊಗ್ಗ: ಶಿವಮೊಗ್ಗದ ಹೆಸರಾಂತ ಸಹ್ಯಾದ್ರಿ ರಂಗತರಂಗ ತಂಡವು ಕನ್ಯಾದಾನ ನಾಟಕ ಪ್ರದರ್ಶನ ಮಾಡಲಿದೆ. ನಾಟಕ ಅ. 14, 15ರಂದು ಡಿವಿಎಸ್ ರಂಗಮಂದಿರದಲ್ಲಿ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ.
ಆಪ್ತರಂಗ ಸಜ್ಜಿಕೆಯಲ್ಲಿ ಪ್ರದರ್ಶನಗೊಳ್ಳಲಿರುವ ಈ ನಾಟಕಕ್ಕೆ ಉಚಿತ ಪ್ರವೇಶವಿದೆ. ಆದರೆ ಪಾಸ್ ಕಡ್ಡಾಯವಾಗಿದೆ. ಪಾಸ್‌ಗಳಿಗಾಗಿ ಸಂಪರ್ಕಿಸಿ: +91 94499 25746
ವಿಜಯ ದೋಂಡೋಪಂತ್ ತೆಂಡೂಲ್ಕರ್ ಖ್ಯಾತ ಮರಾಠಿ ಚಿಂತಕ, ನಾಟಕಕಾರನ  ಕೃತಿ ಕನ್ಯಾದಾನವಾಗಿದ್ದು, ತೆಂಡೂಲ್ಕರರ ನಾಟಕಗಳು ಸಮಾಜದ ಆಗುಹೋಗುಗಳಿಗೆ ತೀವ್ರವಾಗಿ ಸ್ಪಂದಿಸುವ ಕಾರಣಕ್ಕಾಗಿ ಅನೇಕ ಚರ್ಚೆಗಳಿಗೆ ಅವಕಾಶ ನೀಡುತ್ತವೆ. 1983ರಲ್ಲಿ ಪ್ರಕಟವಾದ ‘ಕನ್ಯಾದಾನ’ ಗಂಡು ಹೆಣ್ಣಿನ ಸಂಬಂಧ ಹಾಗು ಭಾರತೀಯ ಸಮಾಜದ ಜಾತಿ ಪದ್ಧತಿ ಬಗ್ಗೆ ವಿಶೇಷ ಬೆಳಕು ಚೆಲ್ಲುವಂತದ್ದಾಗಿದೆ.


ನಾಟಕದ ನಿರ್ದೇಶವನ್ನು ನಮ್ಮ ನಡುವೆ ಇರುವ ಹಾಲಸ್ವಾಮಿ ಆರ್. ಎಸ್. ಮಾಡಿದ್ದು, ಇವರು
ಸಮಾಜ ಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಮೂರು ದಶಕಗಳಿಂದ ಶಿವಮೊಗ್ಗ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಇವರ ನಿರ್ದೇಶನದ ಪ್ರಮುಖ ನಾಟಕಗಳೆಂದರೆ ಗಾಂಧಿ ವರ್ಸಸ್ ಗೋಡ್ಸೆ, ದ್ವಂದ್ವ ದ್ವಾಪರ, ಯಾಪಿಲ್ಲು, ಕುದುರೆ ಮೊಟ್ಟೆ. ನೀರೆಲ್ಲವೂ ತೀರ್ಥ(ಕುವೆಂಪು ನಾಟಕಗಳ ಕೊಲಾಜ್). ಇದಲ್ಲದೇ ಗಂಗಾಲಹರಿ ಹಾಗೂ ಓ. ಲಕ್ಷ್ಮಣ, ಹೆಳವನಕಟ್ಟೆ ಗಿರಿಯಮ್ಮ ನಾಟಕಗಳಿಗೆ ಸಹ ನಿರ್ದೇಶನ ಮಾಡಿದ್ದಾರೆ.


ಕನ್ಯಾದಾನ ನಾಟಕ ಪಾತ್ರವರ್ಗದಲ್ಲಿ ಡಾ. ಎಚ್.ಎಸ್. ನಾಗಭೂಷಣ, ಮಧುರ ಬಿ.ಎಸ್., ಚೇತನ್ ಯನಹಳ್ಳಿ, ದೀಪಿಕ ಎಸ್., ಅರ್ಜುನ್ ಎಂ., ಶ್ರೀಕಂಠಪ್ರಸಾದ್, ಶ್ರೀನಿಧಿ ದೇಶಪಾಂಡೆ, ನಿರ್ಮಾಣ ನಿರ್ವಹಣೆ- ಶಂಕರ್ ಬೆಳಲಕಟ್ಟೆ, ಸಂಗೀತ: ರವಿ ಶಂಕರ್ ಹಚ್.ಕೆ., ಮೃದಂಗ: ಕೃಷ್ಣಮೂರ್ತಿ, ಬೆಳಕು: ಮಂಜುನಾಥ ಕೂದುವಳ್ಳಿ (ಮಂಕು) ಇದ್ದಾರೆ.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

1 day ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

1 day ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

1 day ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

1 day ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

1 day ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

2 days ago