ಸಾಗರ : ಇಲ್ಲಿನ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಅಕ್ಟೋಬರ್ 15 ರಿಂದ 24 ರವರೆಗೆ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ಪ್ರತಿ ದಿನವೂ ವಿಶೇಷ ಪೂಜೆ, ವಿಶೇಷ ಅಲಂಕಾರ, ಸಪ್ತಶತಿ ಪಾರಾಯಣ, ವಿವಿಧ ಹವನಗಳು, ಕುಂಕುಮಾರ್ಚನೆ, ಅಷ್ಟಾವಧಾನಸೇವೆ ಮುಂತಾದ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ 6 ಗಂಟೆಗೆ ವಿವಿಧ ಭಜನಾ ಮಂಡಳಿಯವರಿಂದ ಭಜನೆ ಹಾಗೂ ಶಾಂಕರ ಸ್ತೋತ್ರ ಪಠಣವಿರುತ್ತದೆ.
9 ದಿನಗಳ ಪರ್ಯಂತ ಪ್ರತಿದಿನ ಒಂದೊಂದರಂತೆ ಶ್ರೀ ದಕ್ಷಿಣಾಮೂರ್ತಿ ಹವನ, ಶೀ ದುರ್ಗ ಸೂಕ್ತ ಹವನ, ಶ್ರೀ ಲಕ್ಷ್ಮೀನಾರಾಯಣ ಹೃದಯ ಹವನ, ಶ್ರೀ ಮಹಾಗಣಪತಿ ಉಪನಿಷತ್ ಹವನ, ಶ್ರೀ ಲಲಿತಾ ಸಹಸ್ರನಾಮ ಹವನ, ಶ್ರೀ ಧನ್ವಂತರಿ ಹವನ, ಶ್ರೀ ಸರಸ್ವತೀ ಮೂಲಮಂತ್ರ ಹವನ, ಶ್ರೀ ನವಗ್ರಹಪೂರ್ವಕ ಶ್ರೀ ನವಚಂಡಿಕಾ ಹವನ, ಶ್ರೀ ಸೂಕ್ತ ಹವನ, ಅ. 24 ರಂದು ವಿಜಯದಶಮಿ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 22 ಭಾನುವಾರದಂದು ನವಚಂಡಿಯಾಗ, 12 ಗಂಟೆಗೆ ಪೂರ್ಣಾಹುತಿ, 1 ಗಂಟೆಗೆ ಪ್ರಸಾದ ವಿನಿಯೋಗ ಇರುತ್ತದೆ. ಅಕ್ಟೋಬರ್ 22 ರಂದು ಮಧ್ಯಾಹ್ನ 12 ಕ್ಕೆ ಶ್ರೀ ಶಾರದಾ ಪ್ರಸಾದ ಪುರಸ್ಕಾರ ನಡೆಯಲಿದ್ದು, ವಿದ್ವಾನ್ ಗಣಪತಿ ಭಟ್, ಟಿ.ವಿ.ಪಾಂಡುರಂಗ, ಪ್ರಕಾಶ್ ವಿ.ಸಿ.ವರದಾಮೂಲ ಇವರಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು.
ಅಕ್ಟೋಬರ್ 23 ರಂದು ಬೆಳಿಗ್ಗೆ 11-30 ಕ್ಕೆ ಗಮಕ ಕಾರ್ಯಕ್ರಮ ನಡೆಯಲಿದ್ದು, ಅಶೋಕ್ ಕುಮಾರ್ ಹೆಗ್ಗೋಡು ನವದುರ್ಗಾ ವೈಭವ ವಾಚನ ಮಾಡಲಿದ್ದು, ಹೊಸಕೊಪ್ಪ ಶಂಕರನಾರಾಯಣ ವ್ಯಾಖ್ಯಾನ ಮಾಡುವರು.
ಶರನ್ನವರಾತ್ರಿ ಈ ಕಾರ್ಯಕ್ರಮಗಳಿಗೆ ಸದ್ಭಕ್ತರು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸೇವಾ ವಿವರಗಳಿಗೆ ಮೊ. 9449049484, 87621608880 ನ್ನು ಸಂಪರ್ಕಿಸಬಹುದು.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…