ಕಳೂರು ರಾಮೇಶ್ವರ ಸೊಸೈಟಿಯ ವಾರ್ಷಿಕ ಸರ್ವ ಸದಸ್ಯರ ಸಭೆ | ₹ 26 ಲಕ್ಷ ನಿವ್ವಳ ಲಾಭ, ಷೇರುದಾರರಿಗೆ 6% ಡಿವಿಡೆಂಟ್ ಘೋಷಣೆ ; ವಿನಯ್‌ಕುಮಾರ್ ದುಮ್ಮ


ಹೊಸನಗರ: ಪಟ್ಟಣದ ಪ್ರತಿಷ್ಠಿತ ಸೊಸೈಟಿಗಳಲ್ಲಿ ಒಂದಾಗಿರುವ ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ 26,14,234.35 ರೂ. ಲಾಭ ಗಳಿಸಿದ್ದು ಷೇರುದಾರರಿಗೆ 6% ಡಿವಿಡೆಂಟ್ ನೀಡುವುದಾಗಿ ಸೊಸೈಟಿಯ ಅಧ್ಯಕ್ಷ ದುಮ್ಮ ವಿನಯ್‌ಕುಮಾರ್‌ರವರು ಸಭೆಯಲ್ಲಿ ತಿಳಿಸಿದರು.


ಪಟ್ಟಣದ ಗಾಯತ್ರಿ ಮಂದಿರದ ಆವರಣದಲ್ಲಿ ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಆಯೋಜಿಸಲಾಗಿದ್ದು ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಒಟ್ಟು 2723 ಷೇರುದಾರರನ್ನು ಹೊಂದಿದ್ದು ಷೇರು ಮೊಬಲಗು 1,35,09,792 ಹೊಂದಿದ್ದೇವೆ ನಮ್ಮ ಸಂಘವು ಒಟ್ಟು 6,50,38,275 ಠೇವಣಿ ಹೊಂದಿದೆ ಈಗಾಗಲೇ ಬೆಳೆ ಸಾಲವನ್ನು 788 ಜನ ರೈತರಿಗೆ 4,51,35,000 ರೂಪಾಯಿ ನೀಡಲಾಗಿದ್ದು ಸ್ವಂತ ಬಂಡವಾಳ ಬೆಳೆ ಸಾಲ 94 ರೈತರಿಗೆ 1,03,79,000 ನೀಡಲಾಗಿದೆ. ಜಾಮೀನು ಸಾಲ 106 ಸದಸ್ಯರಿಗೆ 97,53,905 ರೂಪಾಯಿ ನೀಡಲಾಗಿದೆ. ಇತರೆ ಸಾಲ 35 ಸದಸ್ಯರಿಗೆ 63,55,713 ರೂಪಾಯಿ ನೀಡಿದ್ದು ಒಟ್ಟು 1023 ಷೇರುದಾರ ಸದಸ್ಯರಿಗೆ 7,16,23,618 ರೂಪಾಯಿಗಳು ಹೊಸಬರು ಬೆಳೆ ಸಾಲ 51 ಜನ ಸದಸ್ಯರಿಗೆ 7100000 ಇತರೆ 2022-23ರ ಸಾಲಿನ ಮಾರಾಟ 8,42,49,109ಗಳಾಗಿದೆ.


ನಮ್ಮ ರೈತರ ಅನುಕೂಲಕ್ಕಾಗಿ ಜಿಲ್ಲಾ ಬ್ಯಾಂಕಿನಿಂದ 9.50% ಬಡ್ಡಿ ಎಸ್.ಎ.ಓ ಸಾಲಕ್ಕೆ ಕಟ್ಟಿ ನಮ್ಮ ಸಂಘದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಲಾಗುತ್ತಿದೆ ನಮ್ಮ ಸಹಕಾರ ಸಂಸ್ಥೆಗೆ 2022-23ನೇ ಸಾಲಿನಲ್ಲಿ ನಮ್ಮ ಆಡಿಟ್ ವರದಿಯಲ್ಲಿ ಎ. ಶ್ರೇಣಿ ಪಡೆದಿದ್ದು ಹೆಮ್ಮೆಯ ವಿಷಯವಾಗಿದ್ದು ರೈತ ಸದಸ್ಯರುಗಳಿಗೆ ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ನಮ್ಮ ಅಡಿಕೆ ಮತ್ತು ಭತ್ತ ಶುಂಠಿ ಬೆಳೆಗಳಿಗೆ ವಿಮೆ ಮಾಡಿಸಿದರೆ ಒಳ್ಳೆಯದು ಎಂದರು.


ನಮ್ಮ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ 100ಕ್ಕೆ 100% ವಸೂಲಾತಿಯಾಗಿದ್ದು ಸಂತೋಷದಾಯಕ ವಿಷಯವಾಗಿದ್ದು ನಮ್ಮ ಸಂಸ್ಥೆಯ ವತಿಯಿಂದ ಕೀಟನಾಶಕ, ರಸ ಗೊಬ್ಬರಗಳನ್ನು ಅತ್ಯಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ ರೈತರು ನಮ್ಮ ಸಂಘದ ಮೂಲಕವೇ ಕ್ರಿಮಿನಾಶಕ ಹಾಗೂ ಗೊಬ್ಬರವನ್ನು ಖರೀದಿಸುವ ಮೂಲಕ ನಮ್ಮ ಸಂಸ್ಥೆ ಬೆಳೆಯಲು ಸಹಕರಿಸಬೇಕೆಂದರು.


ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ನಮ್ಮ ತಾಲ್ಲೂಕಿನ ಸಹಕಾರಿ ಕ್ಷೇತ್ರ ಹಿಂದೆ ಬಿದ್ದಂತೆ ಕಾಣುತ್ತಿದ್ದು ಈ ಸಹಕಾರಿ ಕ್ಷೇತ್ರವನ್ನು ಎಲ್ಲ ತಾಲ್ಲೂಕಿನಂತೆ ಮುಂದೆ ತರಬೇಕಾದರೆ ನಮ್ಮ ತಾಲ್ಲೂಕಿನ ಸಹಕಾರಿಗಳ ಪಾತ್ರ ಪ್ರಮುಖವಾಗಿದ್ದು ಎಲ್ಲರೂ ಒಟ್ಟಾಗಿ ಕೈಜೋಡಿಸಿ ಹೊಸನಗರ ತಾಲ್ಲೂಕು ಕರ್ನಾಟಕದಲ್ಲಿಯೇ ಒಂದು ಸಹಕಾರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದು ಎಲ್ಲರೂ ಕೈ ಜೋಡಿಸಬೇಕೆಂದರು.

ಕಳೂರು ಸೊಸೈಟಿಯ ಸರ್ವ ಸದಸ್ಯರ ಸಭೆಯಲ್ಲಿ ಷೇರುದಾರರ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರ ಪರವಾಗಿ ಮಕ್ಕಳ ಪೋಷಕರಿಗೆ ಸನ್ಮಾನಿಸುತ್ತಿರುವುದು.


ನಮ್ಮ ಸೊಸೈಟಿಯ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕೈ ಹಾಕಲಾಗಿದ್ದು ಶೀಘ್ರದಲ್ಲಿಯೇ ಗುದ್ದಲಿಪೂಜೆ ಮಾಡುತ್ತೇವೆ ಸಹಕಾರಿ ಧುರೀಣ ಮಂಜುನಾಥ ಗೌಡರ ಹಾಗೂ ಸಹಕಾರಿಗಳ ಧುರೀಣರ ಸಹಕಾರದೊಂದಿಗೆ ಒಂದು ವರ್ಷದಲ್ಲಿ ಸೊಸೈಟಿಯ ಕಟ್ಟಡ ಕಾಮಗಾರಿ ಮುಗಿಸುವ ಕಾರ್ಯ ಕೈಗೊಂಡಿದ್ದು ಸೊಸೈಟಿಯ ಎಲ್ಲ ಆಡಳಿತ ಮಂಡಳಿ, ಷೇರುದಾರ ಸದಸ್ಯರುಗಳು ಹಾಗೂ ಸಾರ್ವಜನಿಕರು ನಮ್ಮೊಂದಿಗೆ ಕೈ ಜೋಡಿಸಿ ಕಟ್ಟಡ ಕಾಮಗಾರಿ ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಈ ಸಂದರ್ಭದಲ್ಲಿ ಕೇಳಿಕೊಂಡರು.


ಷೇರುದಾರರ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಈ ಸಂದಭ್ದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಳೂರು ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕೆ.ವಿ, ಸುರೇಶ ಹೆಚ್, ಕೆ.ಸಿ ರೂಪೇಶ, ವಸಂತಿ, ನಾಗರಾಜ ಕೆ.ಎಸ್. ಕೌಶಿಕ್, ಹೆಚ್. ಶ್ರೀನಿವಾಸ್, ಉಪಾದ್ಯಕ್ಷರಾದ ಎಂ.ಆರ್ ಚಂದ್ರಶೇಖರ, ನಿರ್ದೇಶಕರಾದ ಜಿ.ಆರ್ ಚಿನ್ನಪ್ಪ, ಜಿ.ಆರ್. ಮಲ್ಲಿಕಾರ್ಜುನ, ಸಿ.ಎನ್ ಗಂಗಾಧರ ನಾಯಕ್, ಶ್ರೀನಿವಾಸ ಕುಲಾಯಿ, ರವಿ.ಜಿ.ಎಸ್, ಹೂವಪ್ಪ, ಎಸ್.ಕೆ, ಲಲಿತಮ್ಮ, ಪ್ರಮೀಳ, ಜಯಕುಮಾರ್, ರುದ್ರಪ್ಪ, ಗುಬ್ಬಿಗಾ ಅನಂತರಾವ್, ಕಲ್ಯಾಣಪ್ಪ ಗೌಡ, ಪ್ರಭಾಕರ್, ಹೆಚ್. ಶ್ರೀನಿವಾಸ್ ಕಾಮಾತ್, ಜಯರಾಮ್, ಹೆಚ್. ಮಹಾಬಲರಾವ್, ಉಮೇಶ್ ಕಂಚುಗಾರ್, ಯುವರಾಜ್ ಗೌಡ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

3 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

3 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

3 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

3 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

3 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

4 days ago