ಶಿವಮೊಗ್ಗ : ಚುನಾವಣೆಯ ಈ ಹೊತ್ತಿನಲ್ಲಿ ತಮಿಳು ಸಮಾಜದ ಜನರ ಮನವೊಲಿಸಲು ಬಿಜೆಪಿ ಪ್ರಮುಖರು ಆಡಿದ ಆಟಕ್ಕೆ ಮಾಜಿ ಉಪಮುಖ್ಯಮಂತ್ರಿ ಹಿಗ್ಗಾಮುಗ್ಗಾ ಜಾಡಿಸಿದ ಘಟನೆ ಇಂದಿಲ್ಲಿ ನಡೆದಿದೆ.
ನಗರ ಬಿಜೆಪಿಯವರು ಇಲ್ಲಿನ ಎನ್ ಇ ಎಸ್ ಮೈದಾನದಲ್ಲಿ ಏರ್ಪಡಿಸಿದ್ದ ತಮಿಳು ಬಾಂಧವರ ಸಮಾವೇಶದಲ್ಲಿ ಕನ್ನಡ ನಾಡಗೀತೆ ಬದಲು ತಮಿಳು ನಾಡಗೀತೆ ಹಾಕಿ ಎಡವಟ್ಟು ಮಾಡಿದ ಘಟನೆ ಸಂಭವಿಸಿದೆ.
ಈ ಗೀತೆ ಕೇಳಿದಾಕ್ಷಣ ಆಕ್ರೋಶಗೊಂಡ ಶಾಸಕ ಈಶ್ವರಪ್ಪ ಆಸನದಿಂದ ಎದ್ದು ಬಂದು ಅದನ್ನು ನಿಲ್ಲಿಸುವಂತೆ ಸೂಚಿಸಿದರಲ್ಲದೆ, ಸಂಘಟಕರನ್ನು ಸಿಟ್ಟಿನಿಂದ ಕಣ್ಣಿನಿಂದಲೇ ಬೆದರಿಸಿದರು.
ಕನ್ನಡ ನಾಡಗೀತೆ ಇಲ್ವಾ ? ಎಂದು ಪ್ರಶ್ನಿಸಿದರು. ಚುನಾವಣೆ ಹೊತ್ತಿನಲ್ಲಿ ಇದು ಬೇಕಿತ್ತಾ ? ಎಂದು ಮೆಲ್ಲಗೆ ಹೇಳುತ್ತಾ ನಂತರ ಮೈಕ್ ಹಿಡಿದು ಕನ್ನಡ ನಾಡಗೀತೆ ಹಾಡಲು ಮಹಿಳೆಯರಿಗೆ ಕೇಳಿದರು. ಯಾರಾದರೂ ಹಾಡುವವರಿದ್ದರೆ ಬನ್ನಿ ಎಂದು ಆಹ್ವಾನಿಸಿದರು.
ಕೆಲವು ಮಹಿಳೆಯರು ಮುಂದೆ ಬಂದರಾದರೂ ಕನ್ನಡ ನಾಡಗೀತೆಯನ್ನು ಸಂಘಟನೆಯವರು ಹಾಕಿದರು. ನಂತರ ಕನ್ನಡ ನಾಡಗೀತೆ ಹಾಡಲಾಯಿತು. ಇದೆಲ್ಲಾ ಬೇಕಿತ್ತಾ ? ತಮಿಳು ಸಮಾಜದವರು ಆ ಹಾಡು ಕೇಳಿದ್ದರಾ ?
ರಿಪ್ಪನ್ಪೇಟೆ : ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಕಾಡಾನೆ ದಾಳಿಗೆ ತುತ್ತಾಗಿದ್ದ ಮೃತಪಟ್ಟ ತಿಮ್ಮಪ್ಪ ನಿವಾಸಕ್ಕೆ…
ಶಿವಮೊಗ್ಗ : ನಮ್ಮನ್ನು ಯಾರು ಆಳಬೇಕೆಂಬ ತೀರ್ಮಾನ ಮತದಾರರ ಕೈಯಲಿದೆ. ಆದ್ದರಿಂದ ಎಲ್ಲ ಮತದಾರರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ…
ಮುಂದುವರೆದ ಕಾಡಾನೆಗಳ ಹಾವಳಿ, ತೋಟದ ಕೆಲಸಕ್ಕೆ ತೆರಳಿದ್ದ ಕಾರ್ಮಿಕ ಆನೆ ದಾಳಿಗೆ ಬಲಿ ! ಚಿಕ್ಕಮಗಳೂರು : ತೋಟದ ಕೆಲಸಕ್ಕೆ…
ಬೆಂಗಳೂರು : ಮೇ 7ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ…
ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ ನದಿಯಲ್ಲಿ ಮುಳುಗಿ ಸಾವು ! ಕಳಸ : ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿಯೊಬ್ಬಳು ಸ್ನಾನ…
ಶಿವಮೊಗ್ಗ : ಗ್ಯಾರಂಟಿ ಯೋಜನೆಯ ಮೂಲಕ ಕೋಟ್ಯಂತರ ಬಡವರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಇದು ಕಾಂಗ್ರೆಸ್ಸಿನ ಐತಿಹಾಸಿಕ ಕೊಡುಗೆಯಾಗಿದೆ. ಈ…