ತಮ್ಮನ್ನು ಆತ್ಮ ಎಂದು ತಿಳಿದು ಪರಮಾತ್ಮನ ನೆನಪು ಮಾಡುವುದೇ ರಾಜಯೋಗ ಧ್ಯಾನ ; ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕ

ಹೊಸನಗರ : ಆತ್ಮದ ತಂದೆಯಾದ ಪರಮಾತ್ಮನಿಂದ ಶಾಂತಿ ಶಕ್ತಿ ಜ್ಞಾನ ಆನಂದ ಇತ್ಯಾದಿ ಗುಣಗಳ ಆಸ್ತಿ ಸರ್ವಶಕ್ತಿಗಳ ಆಸ್ತಿ ಜ್ಞಾನದ ಆಸ್ತಿ ಲಭ್ಯವಾಗಲಿದೆ. ತಮ್ಮನ್ನು ಆತ್ಮ ಎಂದು ತಿಳಿದು ಪರಮಾತ್ಮನ ನೆನಪು ಮಾಡುವುದೇ ರಾಜಯೋಗ ವಿಶ್ವದ ಏಕೈಕ ಪರಮಾತ್ಮನೇ ಸರ್ವಧರ್ಮದ ಆತ್ಮರಿಗೂ ತಂದೆಯಾಗಿದ್ದಾನೆ ಸರ್ವದೇವಾತ್ಮರು ಧರ್ಮತ್ಮರು ಮಹಾತ್ಮರು ಆ ಪರಮಾತ್ಮನನ್ನ ಧ್ಯಾನಿಸುತ್ತಾರೆ ಎಲ್ಲಾ ವರ್ಗ ವರ್ಣದವರಿಗೂ ಏಕೈಕ ದೇವರೇ ಪರಮಾತ್ಮ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾನಿಲಯದ ಗದಗದ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ತಿಳಿಸಿದರು.

ಅವರು ಇಂದು ಹೊಸನಗರದ ಈಶ್ವರಿಯ ವಿಶ್ವವಿದ್ಯಾನಿಲಯದ ಶಾಖೆಯಲ್ಲಿ ಹೊಸ ವರ್ಷದ ಪಾಕೆಟ್ ಕ್ಯಾಲೆಂಡರ್ ಅನ್ನು ಅನಾವರಣಗೊಳಿಸಿ ಮಾತನಾಡಿ, ಇಂದಿನ ಜಂಜಾಟದ ಬದುಕಿನಲ್ಲಿ ಜೀವನದಲ್ಲಿ ಶಾಂತಿ ಕಾಣಲು ಏಕೈಕ ಮಾರ್ಗ ಧ್ಯಾನ ಒಂದೇ ಆತ್ಮಶುದ್ಧಿ ಹೊಂದಲು ದಿನದ ಕೆಲ ಸಮಯವನ್ನು ಪರಮಾತ್ಮನ ಧ್ಯಾನ ಮಾಡುವ ಮೂಲಕ ತೊಡಗಿಸಿಕೊಂಡು ಮುಕ್ತಿ ಕಾಣುವಂತೆ ಅವರು ಕರೆ ನೀಡಿದರು.

ಆತ್ಮ ನಿರ್ವೀಕಾರ ಪರಂಜೋತಿ ಸ್ವರೂಪ ನಾವು ಭೇದ ಭಾವ ಹೊರತುಪಡಿಸಿ ಎಲ್ಲ ಸಂಸ್ಕೃತಿಯನ್ನು ಪ್ರೀತಿಸಬೇಕು ನಮ್ಮ ಸಂಸ್ಕೃತಿಯನ್ನು ಗೌರವಿಸಬೇಕು ಎಂದರು.

ಈಶ್ವರಿಯ ವಿಶ್ವವಿದ್ಯಾನಿಲಯದ ಹೊಸನಗರ ಶಾಖೆಯ ಸಂಚಾಲಕಿ ಬ್ರಹ್ಮಕುಮಾರಿ ಶೈಲಕ್ಕನವರು ಕಾರ್ಯಕ್ರಮ ನಿರ್ವಹಿಸಿದರು.

ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ಸದಸ್ಯರಾದ ಗುರುರಾಜ್ ಚಂದ್ರಕಲಾ ನಾಗರಾಜ್, ಗಾಯತ್ರಿ ನಾಗರಾಜ್, ಡಿ.ವಿ ರೇವಣಪ್ಪ ಗೌಡ, ಚನ್ನಬಸಪ್ಪಗೌಡ, ರವಿ ಶೇಟ್ ಹಿರಿಯ ಪತ್ರಕರ್ತರಾದ ಉಡುಪಿ ಎಸ್ ಸದಾನಂದ, ಎಚ್.ಆರ್ ಶ್ರೀಕಂಠ ಶರ್ಮ ಮೊದಲಾದವರು ಉಪಸ್ಥಿತರಿದ್ದರು.

Malnad Times

Recent Posts

Rain Alert | ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ…

7 days ago

Shivamogga Loksabha Constituency | ಮತದಾನಕ್ಕೆ ಸಕಲ ಸಿದ್ಧತೆ, ಮತಗಟ್ಟೆ ತಲುಪಿದ ಮತಯಂತ್ರಗಳು

ಶಿವಮೊಗ್ಗ : ಮಂಗಳವಾರ ನಡೆಯುವ ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆಗಳು ನಡೆದಿದ್ದು, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಇಂದು ಮತಗಟ್ಟೆಗಳಿಗೆ ಅಗತ್ಯವಾದ…

1 week ago

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು !

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು ! ಎನ್.ಆರ್.ಪುರ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…

1 week ago

ಮತದಾನಕ್ಕೆ ಕೌಂಟ್‌ಡೌನ್ | ಮತಗಟ್ಟೆಗಳಿಗೆ ಮತಯಂತ್ರ ಇತರ ಪರಿಕರಗಳೊಂದಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

ಶಿವಮೊಗ್ಗ :ನಾಳೆ ನಡೆಯಲಿರುವ ಲೋಕಸಭೆ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇಂದು ನಿಗದಿಪಡಿಸಲಾದ ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಮತಯಂತ್ರ…

1 week ago

Arecanut Today Price | ಮೇ 5ರ ಅಡಿಕೆ ರೇಟ್

ತೀರ್ಥಹಳ್ಳಿ: ಮೇ 5 ಭಾನುವಾರ ನಡೆದ ತೀರ್ಥಹಳ್ಳಿ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

1 week ago

ಕಾಂಗ್ರೆಸ್ ಮೀಸಲಾತಿ ಜಾರಿಗೊಳಿಸಿದ್ದರಿಂದ ಕೆಳ ವರ್ಗದವರಿಗೂ ಸರ್ಕಾರಿ ಉದ್ಯೋಗ ಲಭಿಸಿದೆ ; ಬೇಳೂರು ಗೋಪಾಲಕೃಷ್ಣ

ಹೊಸನಗರ : ಕಾಂಗ್ರೆಸ್ ಪಕ್ಷದೇಶದ ಪ್ರಗತಿಯಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮೀಸಲಾತಿ ಜಾರಿಗೊಳಿಸಿದ ಪರಿಣಾಮ ಇಂದು ಕೆಳಜಾತಿಯವರು ಸರ್ಕಾರಿ ಉದ್ಯೋಗ…

1 week ago