ಹೊಸನಗರ ; ಇಲ್ಲಿನ ಯುವಕರ ತಂಡವೊಂದು ನಂದಗೋಕುಲ ಸೇವಾ ಟ್ರಸ್ಟ್ ಮೂಲಕ ಗಾಯಗೊಂಡ ಗೋವುಗಳ ರಕ್ಷಣೆ ಮತ್ತು ಸೇವೆಗೆ ಮುಂದಾಗಿದೆ.
ನಂದ ಗೋಕುಲ ಸೇವಾ ಟ್ರಸ್ಟ್ ಗೋವುಗಳಿಗೆ ನೂತನ ಶೆಡ್ ನಿರ್ಮಾಣ ಮಾಡಿದೆ. ಮನೆ ಕೆಲಸವನ್ನ ಬಿಟ್ಟು ಹಸುಗಳ ಸೇವೆಗೆ ಮುಂದಾಗಿದೆ. ಇದಕ್ಕೆ ಸರ್ಕಾರದಿಂದ ಸಹಾಯಧನ ಸಿಗುವ ನಿರೀಕ್ಷೆಯಂತೂ ಇಲ್ಲ. ಕೇವಲ ಸೇವೆಗೆ ಬೇಕಾದ ಅಗತ್ಯವಾಗಿರುವ ಧನ ಸಹಾಯಕ್ಕೆ ಮತ್ತೆ ಆಕಾಶ ನೋಡುವ ಸ್ಥಿತಿಯಾಗಿದೆ. ಮೇವು, ಚಿಕಿತ್ಸೆಗೆ ಬೇಕಾದ ಔಷಧಗಳು, ವೈದ್ಯರನ್ನ ಕರೆತಲು ಬೇಕಾದ ಸೌಕರ್ಯಕ್ಕೆ ಬೇರೆಯವರ ಬಳಿ ಮತ್ತೆ ಕೈಚಾಚುವ ಸ್ಥಿತಿ ನಿರ್ಮಾಣವಾಗಿದೆ.
ಆದರೆ ಪೂರ್ಣೇಶ್ ಮಲೇಬೈಲ್ ಇವರ ಬಳಿ ಯುವಕರು ಪ್ರಸ್ತಾಪವನ್ನು ಮಾಡಿದ್ದಾರೆ. ಶಿವಮೊಗ್ಗದ ಗಾಂಧಿಬಜಾರ್ ನ ವ್ಯಾಪಾರಿ ಮಿತ್ರರಲ್ಲಿ ಸಹಾಯ ಮಾಡುವಂತೆ ಮನವಿ ಸಲ್ಲಿಸಿದ್ದರ ಪರಿಣಾಮ ಕೇವಲ 24 ಗಂಟೆ ಒಳಗೆ 1,01,401 ರೂ. ಹಣ ದೇಣಿಗೆ ರೂಪದಲ್ಲಿ ಹರಿದು ಬಂದಿದೆ.
ಹವ್ಯಾಸಿ ಯುವಕರ ಶ್ರಮಕ್ಕೆ ಒಂದು ಭರವಸೆ ಮೂಡಿದೆ. ಅದು ಪೂರ್ಣೇಶ್ ಮಲೇಬೈಲಿನ ರೂಪದಲ್ಲಿ ದೊರೆತಿದೆ. ಆ ಹಣವನ್ನು ನಂದಗೋಕುಲ ಸೇವಾ ಟ್ರಸ್ಟ್ಗೆ ನೀಡಲಾಗಿದೆ.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…