ಬಿರುಬೇಸಿಗೆಯಲ್ಲಿಯೂ ತುಂಬಿ ಹರಿಯುವ ಕಳಸೆ ಗೌರಿಹೊಂಡ !

ರಿಪ್ಪನ್‌ಪೇಟೆ: ಕಳೆದ 10 ತಿಂಗಳಿಂದ ಮಳೆಯಿಲ್ಲದೆ ಹಳ್ಳ-ಕೊಳ್ಳಗಳು ಬತ್ತಿ ಅಂತರ್ಜಲ ಸಹ ಇಲ್ಲದೆ ತೆರೆದ, ಕೊಳವೆಗಳಲ್ಲಿ ನೀರಿಲ್ಲದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದರೂ ಕೂಡಾ ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಳಸೆ ಗ್ರಾಮದ ಗೌರಿಹೊಂಡ ಮಾತ್ರ ವರ್ಷದ 365 ದಿನವೂ ನಿರಂತರವಾಗಿ ಹರಿಯುತ್ತಿರುವುದು ವಿಶೇಷವಾಗಿದೆ.

ಮಳೆ, ಚಳಿ, ಬೇಸಿಗೆ ಬರಲಿ ಇಲ್ಲಿನ ಸಹ್ಯಾದ್ರಿಯ ಪರ್ವತ ಶ್ರೇಣಿಯ ಕಳಸೆ ಗ್ರಾಮದ ಗೌರಿ ಹೊಂಡದಲ್ಲಿನ ತಿಳಿ ಸಿಹಿ ನೀರಿಗೆ ಮಾತ್ರ ಬರವಿಲ್ಲ.

ಶ್ರಾವಣ ಮಾಸದಲ್ಲಿ ಗೌರಿಹಬ್ಬದೊಂದು ಮುತ್ತೈದೆಯರು ಈ ಗೌರಿಹೊಂಡದಲ್ಲಿ ಗೌರಿ ಪೂಜೆಯೊಂದಿಗೆ ಬಾಗಿನ ಆರ್ಪಿಸುವುದು ಇಲ್ಲಿನ ವಿಶೇಷ. ಅದರಲ್ಲೂ ಸಂತಾನ ಭಾಗ್ಯವಿಲ್ಲದವರು ಮತ್ತು ವಿವಾಹವಾಗದವರು ಈ ಗೌರಿ ಹೊಂಡದ ಗೌರಮ್ಮಳಿಗೆ ಹರಕೆ ಮಾಡಿಕೊಂಡರೆ ಬರುವ ವರ್ಷದೊಳಗೆ ಇಷ್ಟಾರ್ಥವನ್ನು ಈಡೇರಿಸುವಂತಹ ಕರುಣಾಳು ತಾಯಿ ಗೌರಮ್ಮ‌. ತಾಯಿಗೆ ಬಾಗಿನವೇ ಶ್ರೇಷ್ಟವಾಗಿದ್ದು ಇಷ್ಟಾರ್ಥ ನೆರವೇರಿಸುವಂತೆ ಮೂರು, ಐದು, ಏಳು, ಒಂಬತ್ತು, ಹನ್ನೊಂದು, ಹದಿಮೂರು ಹೀಗೆ ತಮ್ಮ ಆರ್ಥಿಕ ಶಕ್ತಿಗನುಗುಣವಾಗಿ ಹರಕೆ ಮಾಡಿಕೊಳ್ಳುವ ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಕಳಸೆ ಗೌರಿಹೊಂಡದ ಗೌರಮ್ಮ ಪವಾಡವೇ ಸಾಕ್ಷಿಯಾಗಿದೆ.

ಜಾತಿ ಭೇದ ಭಾವನೆಯನ್ನು ತೋರದೆ ಊರಿನವರು ಹೊರ ಊರಿನವರು ಮದುವೆ ಮಾಡಿಕೊಂಡ ನಮ್ಮೂರಿನ ಮಹಿಳೆಯರು ಗೌರಿ ಹಬ್ಬದಲ್ಲಿ ಅಮ್ಮನವರಿಗೆ ಉಡಿ ತುಂಬಿ ಬಾಗಿನ ಸಮರ್ಪಿಸಲು ತವರು ಮನೆಗೆ ಬರುವುದೇ ಇಲ್ಲಿನ ವಿಶೇಷವೆಂದು ಹಲವರು ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದು ಹೀಗೆ.

ಒಟ್ಟಾರೆಯಾಗಿ ಈ ಗೌರಿ ಹೊಂಡದ ಬಳಿಯ ಜಮೀನಿಗೂ ನೀರು ಮಳೆಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ಬೆಳೆಗಳಿಗೆ ನೀರು ನಿರಂತರವಾಗಿ ಹರಿದು ಹೋಗುತ್ತಿದ್ದು ಬೆಳೆಗಳು ಸಹ ಪ್ರಕೃತಿ ಮಾತೆಯ ಇಂತಹ ಶುದ್ದ ನೀರಿನಿಂದ ಸಂವೃದ್ಧವಾಗಿ ಬೆಳೆಯಲು ಸಹಕಾರಿಯಾಗಿದೆ.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

1 day ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

1 day ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

1 day ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

2 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

2 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

2 days ago