ಬಿಹಾರಿ ಕೂಲಿ ಕಾರ್ಮಿಕರನ್ನು ಬಳಸಿ ಹರಿದ್ರಾವತಿ ನದಿ ಒಡಲು ಬಗೆದ ಮರಳು ದಂಧೆಕೋರರು, ಅಕ್ರಮ ತಡೆಗೆ ಗ್ರಾಮಸ್ಥರ ಆಗ್ರಹ

ಹೊಸನಗರ : ಹವಾಮಾನ ವೈಫರಿತ್ಯ ಕಾಣಲು ಪ್ರಕೃತಿ ಮೇಲೆ ನಡೆಯುತ್ತಿರುವ ನಿತ್ಯ ಹಲವು ಅನಾಚಾರಗಳೇ ಕಾರಣ ಆಗಿದೆ. ಮುಖ್ಯವಾಗಿ ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಅಹೋರಾತ್ರಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆ ದಂಧೆ ಮಾಫಿಯ ಎಂಬಂತೆ ಪರಿಣಿಮಿಸುತ್ತಿದೆ. ತಾಲೂಕಿನ ಶರಾವತಿ ನದಿಯ ಹಿನ್ನೀರ ಪ್ರದೇಶವಾದ ಈಚಲಕೊಪ್ಪ, ಹರಿದ್ರಾವತಿ, ಹಳೇ ಬಾಣಿಗ, ಮುತ್ತಲ ಸೇರಿದಂತೆ ವಿವಿಧೆಡೆ ನದಿಯ ಒಡಲನ್ನು ಬಗೆದು ಮರಳು ಸಂಗ್ರಹಿಸುವ ಕಾರ್ಯಕ್ಕೆ ಬಹುದೊಡ್ಡ ತಂಡವೊಂದು ಕಾರ್ಯೋನ್ಮುಖವಾಗಿದೆ.

ಉತ್ತರ ಭಾರತದ ಉಳುಗುತಜ್ಞರನ್ನು ಕರೆತಂದು ನದಿಯ ಆಳವಾದ ನೀರಿನಿಂದ ಮರಳನ್ನು ಮೇಲಕ್ಕೆತ್ತುವ ಕಾರ್ಯ ಭರದಿಂದ ಸಾಗಿದೆ. ಶರಾವತಿ ನದಿಯ ಉಪನದಿಗಳಲ್ಲಿ ಒಂದಾದ ಹರಿದ್ರಾವತಿ ನದಿಯ ಒಡಲನ್ನು ಸೀಳಿ, ಇಡೀ ನದಿ ಪಾತ್ರವನ್ನು ಬೃಹದಾಕಾರವನ್ನಾಗಿಸುವ ಕೆಲಸ ಅಕ್ರಮ ಮರಳು ಸಂಗ್ರಹಕಾರರ ತಂಡದಿಂದ ನಡೆದಿದೆ.

ಮುಂಜಾನೆ ಹೊತ್ತಿನಲ್ಲೆ ನದಿಯ ಆಳಕ್ಕಿಳಿದು ಮರಳನ್ನು ಮೇಲಕ್ಕೆತ್ತವ ಕೆಲಸಕ್ಕೆ ಮುಂದಾಗುವ ಈ ಬಿಹಾರಿ, ಉತ್ತರ ಪ್ರದೇಶದ ಕೂಲಿ ಕಾರ್ಮಿಕರು, ಸೂರ್ಯ ನೆತ್ತಿಗೇರುವ ಮೊದಲು ನಾಲ್ಕಾರು ಲೋಡಿನಷ್ಟು ಮರಳು ಸಂಗ್ರಹ ಮಾಡಿ ಅಲ್ಲಿಂದ ಕಾಲ್ಕಿಳುವುದು ಅವರಿಗೆ ಅಭ್ಯಾಸದಂದಾಗಿದೆ. ಆ ಭಾಗದ ಅರಣ್ಯ ಪ್ರದೇಶಗಳಲ್ಲಿ ಮರಳು ಸಂಗ್ರಹ ಮಾಡುವುದು, ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳ ಕೈಬಿಸಿ ಮಾಡಿ, ಸಂಜೆ ವೇಳೆಗೆ ಸಾಗರ, ಶಿಕಾರಿಪುರ, ಶಿವಮೊಗ್ಗ, ಸೊರಬ ಕಡೆಗೆ ಸಾಗಿಸುವುದು ಇವರಿಗೆ ನೀರು ಕುಡಿದಷ್ಟೇ ಸುಲಭವಾಗಿದೆ.

ಹೊಸನಗರ ತಾಲೂಕಿನ ಹರಿದ್ರಾವತಿ ನದಿಯ ಒಡಲು ಬಗೆದು ಅಕ್ರಮ ಮರಳು ಸಂಗ್ರಹಣೆಗೆ ಮುಂದಾಗಿರುವ ಬಿಹಾರಿಗಳ ತಂಡ.

ಬೇಸಿಗೆ ಸಮೀಪಿಸುತ್ತಿರುವ ಕಾರಣ ಸುತ್ತಲ ಕೃಷಿ ಚಟುವಟಿಕೆಗಳಿಗೆ ನೀರಿನ ಅಗತ್ಯ ಇರುವ ಹಿನ್ನಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ಅಕ್ರಮ ಮರಳು ಸಂಗ್ರಹಣೆ ಹಾಗೂ ಸಾಗಾಣಿಕೆಗೆ ಸೂಕ್ತ ಕ್ರಮವಹಿಸ ಬೇಕೆಂಬುದು ಗ್ರಾಮಸ್ಥರ ಅಹವಾಲು ಆಗಿದೆ.

Malnad Times

Recent Posts

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

7 mins ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

26 mins ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

3 hours ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

3 hours ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

10 hours ago

Rain Alert | ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Heavy Rain) ಸಾಧ್ಯತೆ…

11 hours ago