ಹೊಸನಗರ : 100 ಹಾಸಿಗೆ ಸಾಮರ್ಥ್ಯದ ಹೊಸನಗರದ ಸಾರ್ವಜನಿಕ ಆಸ್ಪತ್ರೆ ಯಾವತ್ತು ಪೂರ್ಣ ಪ್ರಮಾಣವಾದ ದಾಖಲೆ ಇಲ್ಲ. ಸರ್ಕಾರದಿಂದ ಆಸ್ಪತ್ರೆ ಎಂದು ಮಂಜೂರಾದ ದಿನದಿಂದ ಇಲ್ಲಿಯವರೆಗೂ ಕೊರತೆಗಳನ್ನೇ ಎದುರಿಸುತ್ತ ಬಂದಿದೆ.
ಈ ಆಸ್ಪತ್ರೆಯ ಸಮಸ್ಯೆಗಳು 108. ಆಸ್ಪತ್ರೆಗೆ ಮಂಜೂರಾದ ವಾಹನದ ಸಮಸ್ಯೆ 108 ಕ್ಕಿಂತಲೂ ಜಾಸ್ತಿ ಇದೆ. ಈ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರವೇ ಇಲ್ಲ. ಇಲ್ಲಿರುವ ನಾಲ್ವರು ವೈದ್ಯರಲ್ಲಿ ಯಾರಿಗೂ ಬಿಡುವೇ ಇಲ್ಲ. ಒಬ್ಬರು ಸರ್ಜನ್ ಒಬ್ಬರು, ಅರವಳಿಕೆ ತಜ್ಞ, ಮಕ್ಕಳ ತಜ್ಞ ಒಬ್ಬರು. ನಾಲ್ವರು ಮಾತ್ರ ನೂರು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರಣ ಕೂಲಿ ಕೃಷಿ ಕಾರ್ಮಿಕರ ಹೆಚ್ಚಿರುವ ತಾಲೂಕಿನ ಜನರು ವೈದ್ಯಕೀಯ ಸೇವೆಗಾಗಿ ಸಾಗರ, ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಮಣಿಪಾಲಗಳಿಗೆ ತೆರಳಬೇಕಾದ ಪರಿಸ್ಥಿತಿ ಒದಗಿಬಂದಿದೆ.
ಗುತ್ತಿಗೆ ಆಧಾರದ ಮೇಲೆ ಪ್ರಸೂತಿ ತಜ್ಞರಾದ ಡಾ. ಶರ್ಮಿತ ಹಾಗೂ ಕೀಲು ಮೂಳೆತಜ್ಞ ಡಾ. ರಾಹುಲ್ ಹೊಸನಗರ ಆಸ್ಪತ್ರೆಗೆ ನೇಮಕಗೊಂಡಿದ್ದು ಅವರು ಈಗ ಸಾಗರ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಸಂಬಳ ಪಡೆಯಲು ಮಾತ್ರ ಹೊಸನಗರ ಆಸ್ಪತ್ರೆಗೆ ಬರುತ್ತಿದ್ದಾರೆ. ನೇತ್ರ ತಜ್ಞರಾದ ಡಾ. ಶಂಶಾದ್ ಬೇಗಂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರುಗಳಿಗೆ ಹೊಸನಗರ ಆಸ್ಪತ್ರೆಯಿಂದ ಸಂಬಳ ಆಗುತ್ತಿದ್ದು ಕರ್ತವ್ಯ ಮಾತ್ರ ಸಾಗರ, ಶಿವಮೊಗ್ಗ ಆಸ್ಪತ್ರೆಗಳಲ್ಲಿ ಲಭ್ಯವಾಗುತ್ತಿದೆ.
ತತ್ಕ್ಷಣ ಶಾಸಕರು, ಲೋಕಸಭಾ ಸದಸ್ಯರು, ಆರೋಗ್ಯ ಸಚಿವರು ಈ ಆಸ್ಪತ್ರೆಗೆ ಕಾಯಕಲ್ಪ ಕಲ್ಪಿಸಬೇಕೆಂದು ಈ ಭಾಗದ ಜನರ ಆಗ್ರಹವಾಗಿದೆ.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…