ರಾಮಚಂದ್ರಪುರ ಮಠದಲ್ಲಿ ವಿಶೇಷ ಅಲಂಕಾರವಿಲ್ಲದೆ ಎಂದಿನಂತೆ ನಡೆದ ಪೂಜೆ !

ಹೊಸನಗರ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನ ನಡೆಸುತ್ತಿರುವುದು ಹಿಂದುಗಳಿಗೆ ಹರ್ಷದಾಯಕವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ದೇಶದ ಪ್ರತೀ ದೇವಾಲಯ ಹಾಗೂ ಪ್ರತೀ ಮನೆಮನೆಯಲ್ಲಿ ರಾಮ‌ನಾಮ ಜಪ ಹಾಗೂ ದೀಪ ಬೆಳಗಿಸುವ ಮೂಲಕ ರಾಮನನ್ನು ಕೊಂಡಾಡುತ್ತಿರುವುದು ಸಂತೋಷದಾಯಕವಾಗಿದೆ. 

ಇದಕ್ಕಾಗಿ ಅನೇಕ ವಿದ್ಯಾಸಂಸ್ಥೆಗಳು ರಜೆ ಘೋಷಿಸಿ ವಿದ್ಯಾರ್ಥಿಗಳಿಗೆ ದೇವಸ್ಥಾನಗಳ ಮಠ ಮಂದಿರಗಳಿಗೆ ಹೋಗಲು ಅನುಕೂಲವಾಗುವಂತೆ ರಜೆ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ದೇವಸ್ಥಾನಗಳಲ್ಲಿ ತಳಿರು ತೋರಣ, ಹೂವಿನ‌ ಅಲಂಕಾರದಿಂದ ದೇವಾಲಯವನ್ನು ಕಂಗೊಳಿಸುವಂತೆ ಮಾಡಿರುವುದು ದೃಶ್ಯ ಕಂಡು ಬರುತ್ತಿದೆ. ಅದೇ ರೀತಿ ಹೊಸನಗರ ಪಟ್ಟಣದ  ಗಣಪತಿ ಮಹೇಶ್ವರ ದೇವಸ್ಥಾನ, ಮಾವಿನಕೊಪ್ಪದ ಗವಿಗಂಗಾಧರೇಶ್ವರ ದೇವಸ್ಥಾನ, ಕೆ ಇ ಬಿ ಹತ್ತಿರದ ಆಂಜನೇಯ ದೇವಸ್ಥಾನ ಸೇರಿದಂತೆ ಜಯನಗರದ ಆಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳಲ್ಲಿ ತಳಿರು ತೋರಣ, ಹೂವಿನ‌ ಅಲಂಕಾರದಿಂದ ಕಂಗೊಳಿಸುತ್ತಿದ್ದವು, ಅನೇಕ ದೇವಾಲಯಗಳಲ್ಲಿ ಆಗಮಿಸಿದಂತಹಾ ಭಕ್ತರಿಗೆ  ಪಾನಕ ಕೋಸಂಬರಿ ವಿತರಿಸಿರುವುದು ಭಕ್ತರಲ್ಲಿ ಹರ್ಷದಾಯಕವಾಗಿತ್ತು. 

ಆದರೆ ಅಂತರರಾಜ್ಯ ಮಟ್ಟದಲ್ಲಿ ಹೆಸರಿರುವ ಹೊಸನಗರ ತಾಲ್ಲೂಕಿನ ಶ್ರೀರಾಮಚಂದ್ರಾಪುರ ಮಠದಲ್ಲಿ ಎಂದಿನಂತೆ ಪೂಜೆ ನಡೆಸುತ್ತಿರುವುದು  ಭಕ್ತರಿಗೆ ಅಸಮಾಧಾನ ಉಂಟಾಗಿರುವುದರಲ್ಲಿ ಎರಡು ಮಾತಿಲ್ಲ‌. ಈ ಮಠದ ಧೈವ ಸಂಭೂತ ಗುರುಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಅಯೋಧ್ಯೆಗೆ ಹೋಗಿರುವುದು ಸಂತಸದ ವಿಷಯವಾದರೂ ಶ್ರೀ ರಾಮಚಂದ್ರಾಪುರ ಮಠದಲ್ಲಿ ಸಾಂಪ್ರದಾಯಕ ಪೂಜೆ ಹೊರತು ಪಡಿಸಿ ಯಾವುದೇ ರೀತಿಯ ತಳಿರು ತೋರಣಗಳ ಹೂವಿನ ಅಲಂಕಾರಗಳಿಲ್ಲದೆ ಪೂಜೆ ನಡೆದಿದೆ.

ತಾಲ್ಲೂಕು‌ ಸೇರಿದಂತೆ ರಾಜ್ಯಾದ್ಯಂತ ಅನೇಕ ಭಕ್ತರ ಸಮೂಹವನ್ನು‌ ಹೊಂದಿರುವ ಈ ಮಠಕ್ಕೆ ಇಂದು ಹಿಂದೂ ಧರ್ಮದ ಅನೇಕ ರಾಮ ಭಕ್ತರು ಆಗಮಿಸಿ ಅಲಂಕಾರವಿಲ್ಲದ ದೇವಾಲಯವನ್ನು‌ ವೀಕ್ಷಣೆ ಮಾಡಿ ದೇವರಲ್ಲಿ ಕೈ ಮುಗಿದು ಅಸಮಾಧಾನದಿಂದ ವಾಪಾಸ್ ಆಗುತ್ತಿರುವ ದೃಶ್ಯ ಕಂಡು ಬಂದಿದೆ.

ಇಲ್ಲಿ ಎಂದಿನಂತೆ ದೇವರ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದದ ರೀತಿಯಲ್ಲಿ ಅನ್ನದಾನ ನಡೆಯಿತಾದರೂ ಭಕ್ತರಲ್ಲಿ ಅಲಂಕಾರವಿಲ್ಲದ ದೇವಾಲಯವನ್ನು ವೀಕ್ಷಿಸುತ್ತಿರುವುದು ಬೇಸರದ ಸಂಗತಿಯಾಗಿತ್ತು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

2 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

2 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

2 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

2 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

2 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

2 days ago