ರಾಮಚಂದ್ರಾಪುರ ಮಠದಲ್ಲಿ ಕೃಷ್ಣಾರ್ಪಣಂ | ಗೋವುಗಳು ಬಂಧಮುಕ್ತವಾಗಿರಬೇಕೆನ್ನುವುದು ಮಠದ ಆಶಯ ; ಪೀಠಾಧಿಪತಿ ರಾಘವೇಶ್ವರ ಶ್ರೀಗಳು

ಹೊಸನಗರ : ಗೋಶಾಲೆಗಳನ್ನು ನಿರ್ಮಿಸಿ, ಮುನ್ನಡೆಸುವುದು ಸುಲಭದ ಕೆಲಸವಲ್ಲ. ರಾಮಚಂದ್ರಾಪುರ ಮಠದಲ್ಲಿನ ಗೋಶಾಲೆಗಳು ಹಲವು ವರ್ಷಗಳಿಂದ ದೇಸೀ ಗೋವುಗಳ ಸಂರಕ್ಷಣೆಯ ಪುಣ್ಯದ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಮಠದ ಗೋಶಾಲೆಯಲ್ಲಿರುವ ಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೃಷ್ಣಾರ್ಪಣಂ ಕಾರ್ಯಕ್ರಮದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ದೇಸೀ ಸಂಕರ, ವಿದೇಶಿ ಗೋವುಗಳ ತಳಿಗಳು ಎಲ್ಲವೂ ಇದ್ದು, ಜನರಿಗೆ ಇದರ ಮಹತ್ವದ ಅರಿವು ಅಷ್ಟಾಗಿ ಇಲ್ಲದ ಕಾಲದಲ್ಲಿ ಶ್ರೀಮಠವು ಗೋಶಾಲೆ ಆರಂಭಿಸಿತು. ಈಗ ಜನತೆಗೆ ದೇಸೀಗೋತಳಿಗಳ ಸಂರಕ್ಷಣೆಗೆ ಈಗ ಅದೆಷ್ಟೋ ಜನರು ಮುಂದಾಗಿದ್ದಾರೆ. ಮಠದಲ್ಲಿ ಇಂದು ಗೋಶಾಲೆ ಯಶಸ್ವಿಯಾಗಿ ನಡೆಯುತ್ತಿದೆ. ಮಠದ ಭಕ್ತರು, ಸಮರ್ಥ ಕರ‍್ಯಕರ್ತರ ಶ್ರಮದಿಂದ ಇದು ಸಾಧ್ಯವಾಗಿದೆ ಎಂದರು.

ವಿದೇಶಗಳಲ್ಲಿ ಗೋವುಗಳನ್ನು ದಾರುಣವಾಗಿ ವಧೆ ಮಾಡಲಾಗುತ್ತದೆ. ಗೋವುಗಳನ್ನು ಸಾಕುವ ಸ್ಥಳಗಳಲ್ಲಿಯೇ ಕಸಾಯಿಖಾನೆ ಸಹಾ ನಿರ್ಮಿಸಲಾಗುತ್ತದೆ. ಅವುಗಳನ್ನು ಕ್ರೂರವಾಗಿ ಸಾಕಲಾಗುತ್ತದೆ. ಭಾರತದಲ್ಲಿಯೂ ಗೋವುಗಳನ್ನು ಹಿಂಸಿಸುವ ಪ್ರಕರಣಗಳು ಆಗಾಗ್ಗೆ ಕೇಳಿಬರುತ್ತಿರುವುದು ದುರಂತ ಎಂದರು.

ಒಳ್ಳೆಯ ಕೆಲಸಗಳಿಗೆ ಶುಭಾರಂಭ ಕಷ್ಟ. ಆರಂಭವಾದ ಬಳಿಕ ಅದನ್ನು ಸರಿಯಾದ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗುವುದು ಇನ್ನೂ ಕಠಿಣ ಕೆಲಸ. ದೃಢ ಸಂಕಲ್ಪವಿದ್ದಲ್ಲಿ ಮಾತ್ರ ಅಂದುಕೊಂಡ ಕಾರ್ಯ ಯಶಸ್ವಿಯಾಗಿ ನೆರವೇರಲು ಸಾಧ್ಯ ಎಂದರು.

ಗೋಶಾಲೆಯಲ್ಲಿ ನಿರ್ಮಿಸಿರುವ ಗೋವರ್ಧನ ಗಿರಿಧಾರಿ ದೇವಸ್ಥಾನ ವಿಶೇಷತೆಯಿಂದ ಕೂಡಿದೆ. ಇಲ್ಲಿ ಸದಾ ಕೃಷ್ಣನ ಆರಾಧನೆಗೆ ಮಹತ್ವ ನೀಡಲಾಗಿದೆ. ವಿಷ್ಣು ಸಹಸ್ರನಾಮ ಪಠಣದಿಂದ ಸರ್ವ ಸಂಕಷ್ಟಗಳು ದೂರವಾಗುತ್ತವೆ. ಮುಂಬರುವ ದಿನಗಳಲ್ಲಿ ಮಠದಲ್ಲಿ ರಾಷ್ಟ್ರಮಟ್ಟದ ವಿಷ್ಣುಸಹಸ್ರನಾಮ ಸಮ್ಮೇಳನ ನಡೆಸುವ ಚಿಂತನೆ ನಡೆಸಲಾಗಿದೆ. ಸಾಂಕ್ರಾಮಿಕ ರೋಗಗಳ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ. ಒಬ್ಬರಿಂದ ಒಬ್ಬರಿಗೆ, ಒಂದೆಡೆಯಿಂದ ಮತ್ತೊಂದೆಡೆಗೆ ಹರಡುವುದು ಇದರ ಗುಣ ಎಂದರು.

ಕೃಷ್ಣಪ್ರಸಾದ್ ಯಡಪ್ಪಾಡಿ ಪ್ರಾಸ್ತಾವಿಕ ಮಾತನಾಡಿದರು. ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದರು.

ಬೆಳಗಿನಿಂದಲೂ ವಿವಿಧ ಧಾರ್ಮಿಕ ಕರ‍್ಯಕ್ರಮಗಳು ನಡೆಯಿತು. ಶ್ರೀಮದ್ಭಾಗವತ ಪಾರಾಯಣ ಸಮರ್ಪಣೆ, ಸಹಸ್ರಾಧಿಕ ವಿಷ್ಣುಸಹಸ್ರನಾಮ ಸಮರ್ಪಣೆ, ಸಹಸ್ರ ಛತ್ರ ಸಮರ್ಪಣೆ, ಗೋಮಾತೆಗೆ ಗೋಗ್ರಾಸ ಸಮರ್ಪಣೆ, ಪವಿತ್ರ ಶಿಲಾ ಸೋಪಾನಮಾಲೆ ಪೂಜೆ, ಗೋಪಾಲಕೃಷ್ಣ ಹವನ ಸೇರಿದಂತೆ ವಿಶೇಷ ಧಾರ್ಮಿಕ ಆಚರಣೆಗಳು ನೆರವೇರಿದವು.

ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅವರ ನೇತೃತ್ವದಲ್ಲಿ ವಿಷ್ಣುಸಹಸ್ರನಾಮ ಸಮ್ಮೇಳನ ನಡೆಯಿತು. ವಿದ್ವಾಂಸ ಗೋಪಾಲಕೃಷ್ಣ ಭಟ್ ಹಂಡ್ರಮನೆ, ಭಾನುಪ್ರಕಾಶ್, ದಯಾನಂದ ರಾವ್, ಡಾ.ಸೀತಾರಾಮ್, ಡಾ.ಅಲ್ಕಜೆ ಭಾಗವಹಿಸಿದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

3 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

3 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

3 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

3 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

3 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

4 days ago