ವಿಜೃಂಭಣೆಯೊಂದಿಗೆ ನಡೆದ ಗೋಪೂಜೆ

ರಿಪ್ಪನ್‌ಪೇಟೆ: ಹಿಂದೂ ವಿಶೇಷ ಹಬ್ಬವಾದ (Festival) ದೀಪಾವಳಿಯಲ್ಲಿ (Deepavali) ಲಕ್ಷ್ಮಿ ಪೂಜೆಯೊಂದಿಗೆ ಗೋಪೂಜೆಯನ್ನು (GoPooje) ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ರಿಪ್ಪನ್‌ಪೇಟೆಯ (Ripponpet) ವಿವಿಧೆಡೆಯಲ್ಲಿ ಆಚರಿಸಲಾಯಿತು.

ದೀಪಾವಳಿ ಅಮಾವಾಸ್ಯೆಯಂದು ಜಾನುವಾರುಗಳ ಮೈ ತೊಳೆದು ಕೊಟ್ಟಿಗೆಯನ್ನು ಸ್ವಚ್ಚಗೊಳಿಸಿ ತಳಿರು-ತೋರಣಗಳೊಂದಿಗೆ ರಂಗೋಲಿ ಹಾಕಿ ಶೃಂಗರಿಸಲಾಗಿತ್ತು‌.

ಮಂಗಳವಾರ ಗೋ ಪೂಜೆಯ ದಿನ ಹಾಲು ಕರೆಯುವ ಆಕಳು, ಕರುವನ್ನು ಹೊಸದಾದ ಕಣ್ಣಿ (ಹಸು ಕಟ್ಟುವ ಹಗ್ಗ) ತೊಡಿಸಿ ಮನೆಯ ಜಗಲಿಯ ಮೇಲೆ ಜೇಡಿಮಣ್ಣು ಮತ್ತು ಕೆಮ್ಮಣ್ಣಿನ ತಂಬೊಟ್ಟು ಬರೆದು ರಂಗೋಲಿಯಿಂದ ಅಲಂಕರಿಸಿ ಮನೆಮಂದಿಯಲ್ಲ ಗೋ ಮಾತೆಗೆ ಪೂಜೆ ಸಲ್ಲಿಸುವುರೊಂದಿಗೆ ಪೂಜೆಯ ನಂತರ ಕೊಟ್ಟೆ ಕಡಬು ಮತ್ತು ಚಪ್ಪೆರೆಟ್ಟಿ ಹಾಗೂ ಚೆಂಡುಹೂವಿನ ಹಾರವನ್ನು ಗೋವಿಗಳ ಕೊರಳಿಗೆ ಕಟ್ಟಿ ಹೊರ ಬಿಡುವುದು ವಿಶೇಷವಾಗಿತ್ತು.

ಎತ್ತಿನ ಕೊಂಬಿಗೆ ಬಣ್ಣ ಹಚ್ಚಿ ರಿಬ್ಬನ್ ಕಟ್ಟಿ ಬಣ್ಣ-ಬಣ್ಣ ಜೋಲ್‌ನೊಂದಿಗೆ ಎತ್ತಿನ ಕೊರಳಿಗೆ ಗಗ್ಗರ, ಘಂಟೆ, ಬಣ್ಣ-ಬಣ್ಣದ ಹಗ್ಗದಿಂದ ಅಲಂಕರಿಸಿ ದೇವಸ್ಥಾನಕ್ಕೆ ರೈತಾಪಿ ವರ್ಗ ಬರುವುದೇ ಒಂದು ವಿಶೇಷವಾಗಿದೆ. ಕೊಟ್ಟಿಗೆಯಿಂದ ಹೊರಬಿಡುವಾಗ ಪಟಾಕಿ ಸಿಡಿಸುತ್ತಿದ್ದಂತೆ ಜಾನುವಾರುಗಳು ಓಡುಸುವುದನ್ನು ಕಂಡು ಸಂತೋಷಪಡುತ್ತಾರೆ.

ಸಂಜೆ ಜಾನುವಾರುಗಳು ಮನೆಗೆ ಮರಳುವಾಗ ಕೊಟ್ಟಿಗೆ ಬಾಗಿಲಿನ ಬಳಿ ಒನಕೆ ಮತ್ತು ಕಸಗುಡಿಸುವ ಪೊರಕೆ ಅಡ್ಡಲಾಗಿ ಹಾಕಿ ಓಕುಳಿ ಸಿಂಪಡಿಸಿ ಕೊಟ್ಟಿಗೆಗೆ ಬಿಡುವುದು ಈ ಹಿಂದಿನಿಂದಲೂ ಆಚರಿಸಿಕೊಂಡು ಬಂದ ಪದ್ದತಿಯನ್ನು ಈಗಲೂ ಆಚರಿಸಿಕೊಂಡು ಬರಲಾಗುತ್ತಿದ್ದೆ.

ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮಮಠದಲ್ಲಿ ಅಭಿನವ ಚನ್ನಬಸವ ಮಹಾಸ್ವಾಮೀಜಿಯವರು, ರಿಪ್ಪನ್‌ಪೇಟೆಯ ಸಿದ್ದಿವಿನಾಯಕ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವೇ. ಚಂದ್ರಶೇಖರ್‌ ಭಟ್ ಮತ್ತು ಗುರುರಾಜ ಭಟ್ ಅರಸಾಳು ಇವರು ದೇವಸ್ಥಾನ ಧರ್ಮದರ್ಶಿ ಸಮ್ಮುಖದಲ್ಲಿ ಹಾಗೂ ಹಾರೋಹಿತ್ತಲು ರೈತ ಕುಟುಂಬ ನಾಗರತ್ನಮ್ಮ ಸಿದ್ದಪ್ಪಗೌಡ ಮತ್ತು ಮಕ್ಕಳು, ಎಲ್.ವೈ.ದಾನೇಶಪ್ಪ ಕುಟುಂಬವರ್ಗ, ಕೋಡೂರು ಗ್ರಾಮದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಜ್ಯೋತಿ ಚಂದ್ರಮೌಳಿ ಹಾಗೂ ತಾಪಂ ಮಾಜಿ ಸದಸ್ಯ ಚಂದ್ರಮೌಳಿಗೌಡ ಕುಟುಂಬವರ್ಗ ಹಾಗೂ ಆಲವಳ್ಳಿ ಗ್ರಾಮದ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಇವರು ಗೋ ಪೂಜೆಯನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಿದರು.

Malnad Times

Recent Posts

ಏ.30 ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ ನಡ್ಡಾ ; ಬಿವೈಆರ್

ಶಿವಮೊಗ್ಗ : ಏ.30ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶಿವಮೊಗ್ಗ ಆಗಮಿಸಲಿದ್ದು ರಾಷ್ಟ್ರೀಯತೆಯ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು…

12 mins ago

10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರು ಬಿ.ವೈ.ರಾಘವೇಂದ್ರ ಗೆಲುವು ತಡೆಯಲು ಸಾಧ್ಯವಿಲ್ಲ

ರಿಪ್ಪನ್‌ಪೇಟೆ: ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ…

6 hours ago

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ..... ಶೃಂಗೇರಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ…

15 hours ago

Arecanut Today Price | ಏಪ್ರಿಲ್ 26ರ ಅಡಿಕೆ ರೇಟ್

ಹೊಸನಗರ : ಏ. 26 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

1 day ago

ಮೇ 02 ರಂದು ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಆಗಮನ

ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗೀತಾಶಿವರಾಜ್‍ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು…

1 day ago

ಲಕ್ಷಾಂತರ ಮತಗಳ ಅಂತರದಲ್ಲಿ ಗೆಲುವು ನನ್ನದೇ, 2ನೇ ಸ್ಥಾನಕ್ಕಾಗಿ ಬಿಜೆಪಿ, ಕಾಂಗ್ರೆಸ್ ಪೈಪೋಟಿ ಅಂದ್ರು ಈಶ್ವರಪ್ಪ

ರಿಪ್ಪನ್‌ಪೇಟೆ: ನನ್ನ ಪರವಾಗಿ ಹೋದ ಕಡೆಯಲೆಲ್ಲ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಪಕ್ಷದ ಸಾಕಷ್ಟು ಕಾರ್ಯಕರ್ತರು ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿದ್ದು…

1 day ago