ವಿಶ್ವ ಶಾಂತಿಗಾಗಿ ಸೈಕಲ್ ಯಾತ್ರೆ | ಪುನೀತ್ ಅಭಿಮಾನಿಯ ವಿನೂತನ ಪ್ರಯತ್ನ, ಮುತ್ತು ಸೆಲ್ವಂಗೆ ಹೊಸನಗರದಲ್ಲಿ ಅದ್ದೂರಿ ಸ್ವಾಗತ

ಹೊಸನಗರ: ಕನ್ನಡದ ಹೆಸರಾಂತ ನಟ ಕರ್ನಾಟಕ ರತ್ನ, ದಿ|| ಡಾ.ಪುನೀತ್ ರಾಜ್‍ಕುಮಾರ್ (Dr. Puneeth Rajkumar) ಅವರ ಅಪ್ಪಟ ಅಭಿಮಾನಿ ಆಗಿರುವ ತಮಿಳನಾಡಿನ ಕೊಯಮತ್ತೂರಿನ ಮುತ್ತು ಸೆಲ್ವಂ (Mutthu Selvam) ಅವರ ವಿಶ್ವಶಾಂತಿ ಕುರಿತಾಗಿ ಕೈಗೊಂಡಿರುವ ಸೈಕಲ್ ಯಾತ್ರೆಗೆ ಇಲ್ಲಿನ ಪಟ್ಟಣ ಪಂಚಾಯತಿ ಆಡಳಿತ ಅದ್ದೂರಿ ಸ್ವಾಗತ ಕೋರಿದೆ.

ಬುಧವಾರ ಕಚೇರಿ ಮುಂಭಾಗದಲ್ಲಿ ಮುಖ್ಯಾಧಿಕಾರಿ ಮುತ್ತು ಸೆಲ್ವಂ ಅವರನ್ನು ಹೂಗುಚ್ಛ ನೀಡುವ ಮೂಲಕ ಪಟ್ಟಣದ ನಾಗರೀಕರ ಪರವಾಗಿ ಭರಮಾಡಿಕೊಂಡರು.

ಈ ಸಂದರ್ಭದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಮೂಲತಃ ಕೊಯಮತ್ತೂರಿನವನಾದ ನಾನು ಈವರೆಗೂ ನಟ ಪುನೀತ್ ರಾಜ್‍ಕುಮಾರ್ ಅವರ ಯಾವುದೇ ಚಲನಚಿತ್ರ ನೋಡಿಲ್ಲ. ಆದರೆ, ಅವರು ತೆರೆಮರೆಯಲ್ಲಿ ಕೈಗೊಂಡಿದ್ದ ಅನೇಕ ಜನಪರ ಸಾಮಾಜಿಕ ಕಾರ್ಯಕ್ರಮಗಳು ಇಂದಿಗೂ ಜೀವಂತವಾಗಿದೆ. ಅನೇಕ ಶಾಲಾ-ಕಾಲೇಜುಗಳು, ಅನಾಥಾಶ್ರಮ ಸೇರಿದಂತೆ ವಿಕಲಚೇತನರಿಗೆ ದಾರಿದೀಪವಾಗಿದ್ದ ನಟ ಪುನೀತ್ ಅವರ ಆದರ್ಶದ ಬದುಕು ಹಲವರಿಗೆ ಮಾದರಿ ಆಗುವಂತದ್ದು. ಈ ಹಿನ್ನಲೆಯಲ್ಲಿ ಅವರ ಜೀವನಾದರ್ಶ ಕುರಿತಂತೆ ಪ್ರಚುರ ಪಡಿಸುವ ಸದ್ದುದ್ದೇಶ ತಮ್ಮದಾಗಿದ್ದು, ಪುನೀತ್ ಅವರ ಪತ್ನಿ ಅಶ್ವಿನಿ ಕೊಡುಗೆಯಾಗಿ ನೀಡಿದ ಸೈಕಲ್‌ನಿಂದಲೇ ದೇಶ ಪರ್ಯಟನೆಗೆ ಮುಂದಾಗಿರುವುದಾಗಿ ಅವರು ತಿಳಿಸಿದರು.

ಒಂದು 1,111 ದಿನಗಳಲ್ಲಿ ಸೈಕಲ್ ಮೂಲಕ ದೇಶದ 34 ರಾಜ್ಯಗಳ 733 ಜಿಲ್ಲೆಗಳ ಒಟ್ಟು 34 ಸಾವಿರ ಕಿ.ಮೀ. ಪ್ರವಾಸ ಮಾಡುವ ಗುರಿ ಹೊಂದಲಾಗಿದ್ದು, 2021ರ ಡಿ.21ರಂದು ಆರಂಭಗೊಂಡ ಈ ಪ್ರಯಾಣದಲ್ಲಿ ಈಗಾಗಲೇ ದೇಶದ 15 ರಾಜ್ಯಗಳ ಒಟ್ಟು 20.250 ಕಿ.ಮೀ ಪ್ರಯಾಣಿಸಿದ್ದು, ಉಳಿದ 14,200 ಕಿ.ಮೀ ತಮ್ಮ ಸೈಕಲ್ ಪಯಣವನ್ನು ಬರುವ 2025ರ ಜ.5ರಂದು ಬೆಂಗಳೂರಿನ ಪುನೀತ್ ಸಮಾಧಿ ಎದುರು ಪೂರ್ಣಗೊಳಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.

ಅಲ್ಲದೆ, ಸೈಕಲ್ ಜಾಥದ ಜೊತೆ ಜೊತೆಯಲ್ಲಿ ಸಾರ್ವಜನಿಕರಿಗೆ ಪರಿಸರ ಕುರಿತು ಜಾಗೃತಿ ಮೂಡಿಸುವ ಕಾರ್ಯಕೈಗೊಂಡಿದ್ದು ಈವರೆಗೂ 2.16 ಲಕ್ಷ ಗಿಡಗಳನ್ನು ನೆಟ್ಟಿದ್ದು, ಮುಂದೆಯೂ ತಮ್ಮ ಪರಿಸರ ಅಭಿಯಾನ ಮುಂದುವರೆಸುವುದಾಗಿ ತಿಳಿಸಿದರು.

ಇದೇ ವೇಳೆ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮುತ್ತು ಸ್ವೆಲಂ ಅವರ ಸೈಕಲ್ ಜಾಥಾ ಯಶಸ್ಸಿಗೆ ಮಾಲಾರ್ಪಣೆಯ ಮೂಲಕ ಶುಭಕೋರಿದರು.

ಈ ಸಂದರ್ಭದಲ್ಲಿ ಪ.ಪಂ. ಸಿಬ್ಬಂದಿಗಳು, ಹಲವು ನಾಗರೀಕರು ಹಾಜರಿದ್ದರು.

Malnad Times

Recent Posts

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

2 hours ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

2 hours ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

9 hours ago

Rain Alert | ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Heavy Rain) ಸಾಧ್ಯತೆ…

10 hours ago

ಕಾಫಿನಾಡಿನಲ್ಲಿ ಆಲಿಕಲ್ಲು ಸಹಿತ ಗುಡುಗು, ಸಿಡಿಲಬ್ಬರದಿಂದ ಸುರಿದ ಭಾರಿ ಮಳೆ

ಚಿಕ್ಕಮಗಳೂರು: ಕಳೆದ ಹಲವು ದಿನಗಳಿಂದ ಬೇಸಿಗೆಯ ಬಿಸಿ ಗಾಳಿಯಿಂದ ಕಂಗೆಟ್ಟಿದ್ದ ಜನರಿಗೆ ಮಂಗಳವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಗುಡುಗು, ಸಿಡಿಲಬ್ಬರದಿಂದ ಭಾರಿ…

11 hours ago

ಪತಿ ಸಾವಿನ ನೋವಿನಲ್ಲೂ ಮತದಾನ ಮಾಡಿದ ಮಹಿಳೆ !

ತೀರ್ಥಹಳ್ಳಿ : ಪತಿ ಸಾವಿನ ನೋವಿನಲ್ಲೂ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮಹಿಳೆ ಮತದಾನ ಮಾಡಿರುವಂತಹ ಘಟನೆ ಗುಡ್ಡೇಕೊಪ್ಪ ಗ್ರಾಪಂ ವ್ಯಾಪ್ತಿಯ…

21 hours ago