ಹೊಸನಗರದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ | ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ; ಡಾ. ಜಿ.ಡಿ ನಾರಾಯಣಪ್ಪ

ಹೊಸನಗರ: ನಮ್ಮ ಆರೋಗ್ಯ ನಮ್ಮ ಕೈಯಲ್ಲಿದ್ದು ಕೆಟ್ಟ ಚಟಗಳಿಂದ ನಮ್ಮ ಆರೋಗ್ಯ ನಾವು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು ಮಾಜಿ ಶಾಸಕ ಹಾಗೂ ಆರೈಕೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಿ.ಡಿ ನಾರಾಯಣಪ್ಪನವರು ಹೇಳಿದರು.

ಪಟ್ಟಣದ ಸ್ಫೋಟ್ಸ್ ಅಸೋಸಿಯೇಷನ್‌ ಕ್ಲಬ್ ಆವರಣದಲ್ಲಿ ಭಾನುವಾರ ಬೆಳಿಗ್ಗೆ 9ಗಂಟೆಯಿಂದ ಮಧ್ಯಾಹ್ನ 2;30ರ ವರೆಗೆ ಆರೈಕೆ ಆಸ್ವತ್ರೆ ಶಿವಮೊಗ್ಗ, ಸ್ಫೋಟ್ಸ್ ಅಸೋಸಿಯೇಷನ್ ಕ್ಲಬ್ ಹೊಸನಗರ, ಜೆಎಸಿ ಮತ್ತು ಜೇಸಿಐ ಕೊಡಚಾದ್ರಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನವರು ತಮ್ಮ ಆರೋಗ್ಯವನ್ನು ತಾವು ತಿನ್ನುವ ಆಹಾರದಲ್ಲಿ ಹುಡುಕಿ ತಿನ್ನುವುದರ ಜೊತೆಗೆ ಮಿತಿಯಾಗಿ ಸೇವಿಸುತ್ತಿದ್ದರು. ಆದರೆ, ಕಾಲ ಬದಲಾದಂತೆ ನಾವು ತಿನ್ನುವ ಆಹಾರ ಸೇವನೆ ಮತ್ತು ಕುಡಿಯುವ ಚಟದಿಂದ ನಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ ನಮ್ಮಲ್ಲಿ ಯಾವುದೇ ಚಟಗಳಿದ್ದರೂ ಅವುಗಳನ್ನು ನಿಯಂತ್ರಿಸಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳದೇ ತಮ್ಮ ಜೀವನವನ್ನು ಯಾವುದೇ ಕಾಯಿಲೆಗಳಿಗೆ ಗುರಿಯಾಗದಂತೆ ಕಾಪಾಡಿಕೊಂಡು ಸುಖ ಜೀವನ ನಡೆಸಬೇಕೆಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಫೋಟ್ಸ್ ಕ್ಲಬ್ ಅಧ್ಯಕ್ಷ ಗುಬ್ಬಿಗಾ ಆನಂತರಾವ್ ಮನುಷ್ಯರಿಗೆ ಕಾಯಿಲೆ ಬರುವುದು ಸಹಜ ಅದನ್ನು ಮೊದಲ ಹಂತದಲ್ಲಿಯೇ ಡಾಕ್ಟರ್‌ಗಳಿಗೆ ತೋರಿಸುವುದರಿಂದ ಕಾಯಿಲೆಯನ್ನು ನಿಯಂತ್ರಣ ಮಾಡಬಹುದು ಕಾಯಿಲೆ ದ್ವಿಗುಣವಾದಲ್ಲಿ ಗುಣಪಡಿಸುವುದು ಕಷ್ಟಕರವಾಗುತ್ತದೆ ಹಾಗೂ ಅಧಿಕ ಹಣ ವ್ಯಯ ಮಾಡಬೇಕಾಗುತ್ತದೆ ನಾವು ಮಾಡುವ ಇಂತಹ ಉಚಿತ ಶಿಬಿರಗಳಿಂದ ಬಡವರಿಗೆ ಮಧ್ಯಮ ವರ್ಗದವರಿಗೆ ಅನುಕೂಲವಾಗಲೆಂದು ನಮ್ಮ ಸಂಸ್ಥೆ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದ್ದು ಈ ಉಚಿತ ಶಿಬಿರದಲ್ಲಿ ಪ್ರತಿಯೊಬ್ಬರು ಭಾಗವಹಿಸುವುದರಿಂದ ತಮ್ಮ ಆರೋಗ್ಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆಂದರು.

ಸುಮಾರು 350 ಜನರು ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರ ಜೊತೆಗೆ ಉಚಿತವಾಗಿ ಔಷಧಿಗಳನ್ನು ನೀಡಲಾಯಿತು.
ರೋಗಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಸ್ಫೋಟ್ಸ್ ಕ್ಲಬ್‌ ವತಿಯಿಂದ ಏರ್ಪಡಿಸಲಾಗಿತ್ತು.

ಹೊಸನಗರ ಇತಿಹಾಸದಲ್ಲಿಯೇ ಇಂಥಹ ಶಿಬಿರ ಏರ್ಪಡಿಸಿರುವುದು ಇದು ಪ್ರಪ್ರಥಮವಾಗಿದ್ದು ಈ ಶಿಬಿರಾದಲ್ಲಿ ರಕ್ತ ಪರೀಕ್ಷೆ, ಬಿ.ಪಿ, ಪರೀಕ್ಷೆ, ಶೂಗರ್ ಪರೀಕ್ಷೆ, ಇ.ಸಿ.ಜಿ ಪರೀಕ್ಷೆ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು‌‌.

ಈ ತಪಾಸಣಾ ಶಿಬಿರದಲ್ಲಿ ಎಂಬಿಬಿಎಸ್ ಜನರಲ್ ಸರ್ಜನ್ ಡಾ. ಜಿ.ಡಿ ನಾರಾಯಣಪ್ಪ, ಅರವಳಿಕೆ ತಜ್ಞರಾದ ಡಾ. ಸುರೇಶ ಕೆ.ಎಂ, ಚರ್ಮರೋಗ ತಜ್ಞರಾದ ಡಾ. ಆಶಾ, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ. ಅಮೃತಾಂಶು, ಕೀಲು ಮತ್ತು ಮೂಳೆ ರೋಗ ತಜ್ಞರಾದ ಡಾ. ವಿನಯ್ ಕೆ.ವೈ ಹಾಗೂ ಫ್ಯಾಮಿಲಿ ಮೆಡಿಸಿನ್ ಡಾ. ಮಂಜುನಾಥ್ ಹಾಗೂ ದಂತ ರೋಗ ತಜ್ಞರಾದ ಡಾ. ಅನಿತಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ತಪಾಸಣೆಯಲ್ಲಿ ಗೌರವಾಧ್ಯಕ್ಷರಾದ ಪರಮೇಶ್ವರರಾವ್, ಅಧ್ಯಕ್ಷರಾದ ಗುಬ್ಬಿಗಾ ಅನಂತರಾವ್, ಉಪಾಧ್ಯಕ್ಷರಾದ ಪ್ರಭಾಕರ್, ಕಾರ್ಯದರ್ಶಿ ಬ್ಯಾಂಕ್ ಶ್ರೀಧರ, ಬಿ.ಎಸ್ ಸುರೇಶ, ಎಂ.ಪಿ ಸುರೇಶ, ಎಂ.ವಿ ಸುರೇಶ, ಕಲ್ಯಾಣಪ್ಪ ಗೌಡ, ಸತ್ಯನಾರಾಯಣ, ಕೆ.ಬಿ ಸತೀಶ, ಮಹೇಂದ್ರ, ಮಳಲಿ ಶ್ರೀಕಾಂತ, ವ್ಯವಸ್ಥಾಪಕರಾದ ಕಟ್ಟೆ ಸುರೇಶ, ಕೃಷ್ಣಮೂರ್ತಿ, ಜೆಸಿಐ ಅಧ್ಯಕ್ಷರಾದ ವಿನಯ್‌ಕುಮಾರ್, ರಾಧಾಕೃಷ್ಣ ಪೂಜಾರಿ, ದ್ಯಾವರ್ಸ ನಾಗೇಶ, ಸ್ವಾಮಿ ಹಾಗೂ ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

12 hours ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

16 hours ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

16 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

18 hours ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

19 hours ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

1 day ago