ಹೊಸನಗರ : ಪಟ್ಟಣದ ಬಸ್ ನಿಲ್ದಾಣ ಎದುರಿನ ಈಡಿಗರ ಸಭಾ ಭವನದಲ್ಲಿ ಇಂದು ಮದುವೆಯ ಆರತಕ್ಷತೆ ಸಮಾರಂಭವನ್ನು ಪಟ್ಟಣದ ವಕೀಲ ಕೆ.ಬಿ ಪ್ರಶಾಂತ್ ದಂಪತಿಗಳು ಸಭಾಭವನದ ಕೆಳದಿ ರಾಣಿ ಚೆನ್ನಮ್ಮ ಮಂಟಪದಲ್ಲಿ ತಮ್ಮಮಗನ ಆರತಕ್ಷತೆ ಸಮಾರಂಭವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಸಮಾರಂಭಕ್ಕೆ ಬಂದ ಅತಿಥಿ ಅಭ್ಯಾಗತರು ನವ ವಧು-ವರರ ಆರತಕ್ಷತೆ ವೇದಿಕೆಯ ಬಳಿ ತೆರಳುವ ದಾರಿಯಲ್ಲಿ ಗಂಡು, ಹೆಣ್ಣಿನ ಸಂಬಂಧ ವಿವಾಹದ ಕಾಯಿದೆಗಳನ್ನು ಬಿತ್ತರಿಸುವ ಫಲಕಗಳನ್ನು ಪ್ರದರ್ಶಿಸುವ ಮೂಲಕ ಹೊಸ ಇತಿಹಾಸಕ್ಕೆ ಚಾಲನೆ ನೀಡಿದರು.
ವಕೀಲರಾದ ಕೆ.ಬಿ ಪ್ರಶಾಂತ್ ಹಾಗೂ ಜ್ಯೋತಿ ದಂಪತಿಗಳ ಪುತ್ರ ಎಸ್.ಪಿ ನಿಶ್ಚಿತ್ ಹಾಗೂ ಹೊಸಪೇಟೆಯ ಬಿ. ಪರಮೇಶ್ವರ್ ಗೌಡ ಭುವನೇಶ್ವರಿ ದಂಪತಿಗಳ ಪುತ್ರಿ ಕೀರ್ತಿಯವರೊಂದಿಗೆ ಭಾನುವಾರ ಹೊಸಪೇಟೆಯಲ್ಲಿ ವಿವಾಹವಾಗಿದ್ದು ಇಂದು ಆರತಕ್ಷತೆ ಕಾರ್ಯಕ್ರಮ ಸಡಗರ ಸಂಭ್ರಮದಿಂದ ನಡೆಯಿತು.
ವಿವಾಹದ ಭೋಜನ ನಂತರ ತಾಂಬೂಲದೊಂದಿಗೆ ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ತಿನ ಭಾರತ ಭಾರತಿ ಪುಸ್ತಕ ಸಂಪದ ಪ್ರತಿಗಳನ್ನು ಬಂದವರಿಗೆ ವಿತರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಆರತಕ್ಷತೆ ಸಮಾರಂಭಕ್ಕೆ ಬಂದ ಗಣ್ಯಾತಿಗಣ್ಯರು ನೂತನ ವಧು-ವರರನ್ನು ಹಾರೈಸಿ ಪ್ರಶಾಂತ್ ದಂಪತಿಗಳಿಗೆ ಶುಭ ಕೋರಿದರು.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…