ಹೊಸನಗರದಲ್ಲೊಂದು ವಿಶಿಷ್ಟ ಮದುವೆ ಆರತಕ್ಷತೆ ಸಮಾರಂಭ

0 3,496

ಹೊಸನಗರ : ಪಟ್ಟಣದ ಬಸ್ ನಿಲ್ದಾಣ ಎದುರಿನ ಈಡಿಗರ ಸಭಾ ಭವನದಲ್ಲಿ ಇಂದು ಮದುವೆಯ ಆರತಕ್ಷತೆ ಸಮಾರಂಭವನ್ನು ಪಟ್ಟಣದ ವಕೀಲ ಕೆ.ಬಿ ಪ್ರಶಾಂತ್ ದಂಪತಿಗಳು ಸಭಾಭವನದ ಕೆಳದಿ ರಾಣಿ ಚೆನ್ನಮ್ಮ ಮಂಟಪದಲ್ಲಿ ತಮ್ಮಮಗನ ಆರತಕ್ಷತೆ ಸಮಾರಂಭವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದರು.

ಸಮಾರಂಭಕ್ಕೆ ಬಂದ ಅತಿಥಿ ಅಭ್ಯಾಗತರು ನವ ವಧು-ವರರ ಆರತಕ್ಷತೆ ವೇದಿಕೆಯ ಬಳಿ ತೆರಳುವ ದಾರಿಯಲ್ಲಿ ಗಂಡು, ಹೆಣ್ಣಿನ ಸಂಬಂಧ ವಿವಾಹದ ಕಾಯಿದೆಗಳನ್ನು ಬಿತ್ತರಿಸುವ ಫಲಕಗಳನ್ನು ಪ್ರದರ್ಶಿಸುವ ಮೂಲಕ ಹೊಸ ಇತಿಹಾಸಕ್ಕೆ ಚಾಲನೆ ನೀಡಿದರು.

ವಕೀಲರಾದ ಕೆ.ಬಿ ಪ್ರಶಾಂತ್ ಹಾಗೂ ಜ್ಯೋತಿ ದಂಪತಿಗಳ ಪುತ್ರ ಎಸ್.ಪಿ ನಿಶ್ಚಿತ್ ಹಾಗೂ ಹೊಸಪೇಟೆಯ ಬಿ. ಪರಮೇಶ್ವರ್ ಗೌಡ ಭುವನೇಶ್ವರಿ ದಂಪತಿಗಳ ಪುತ್ರಿ ಕೀರ್ತಿಯವರೊಂದಿಗೆ ಭಾನುವಾರ ಹೊಸಪೇಟೆಯಲ್ಲಿ ವಿವಾಹವಾಗಿದ್ದು ಇಂದು ಆರತಕ್ಷತೆ ಕಾರ್ಯಕ್ರಮ ಸಡಗರ ಸಂಭ್ರಮದಿಂದ ನಡೆಯಿತು.

ವಿವಾಹದ ಭೋಜನ ನಂತರ ತಾಂಬೂಲದೊಂದಿಗೆ ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ತಿನ ಭಾರತ ಭಾರತಿ ಪುಸ್ತಕ ಸಂಪದ ಪ್ರತಿಗಳನ್ನು ಬಂದವರಿಗೆ ವಿತರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.

ಆರತಕ್ಷತೆ ಸಮಾರಂಭಕ್ಕೆ ಬಂದ ಗಣ್ಯಾತಿಗಣ್ಯರು ನೂತನ ವಧು-ವರರನ್ನು ಹಾರೈಸಿ ಪ್ರಶಾಂತ್ ದಂಪತಿಗಳಿಗೆ ಶುಭ ಕೋರಿದರು.

Leave A Reply

Your email address will not be published.

error: Content is protected !!