94ಸಿ ಹಕ್ಕುಪತ್ರ ವಿತರಿಸಿದ ಶಾಸಕ ಆರಗ ಜ್ಞಾನೇಂದ್ರ
ಹೊಸನಗರ : ತಾಲೂಕಿನ ನಗರ ಹೋಬಳಿ ಅರಮನೆಕೊಪ್ಪ ಗ್ರಾಮದ 12 ಫಲಾನುಭವಿಗಳಿಗೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ 94ಸಿ ಹಕ್ಕುಪತ್ರ ವಿತರಿಸಿದರು.
ನಂತರ ಮಾತನಾಡಿದ ಅವರು, ಅನಧಿಕೃತವಾಗಿ ವಾಸಿಸುತ್ತಿರುವ ಮನೆಗಳ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ಸೂಕ್ತ ಸರ್ಕಾರಿ ದಾಖಲೆ ಆಗಲಿದೆ. ಇದು ಫಲಾನುಭವಿಯಲ್ಲಿ ಆತ್ಮಾಭಿಮಾನ, ವಿಶ್ವಾಸ ಹೆಚ್ಚಳಕ್ಕೆ ಕಾರಣವೂ ಆಗಲಿದೆ. ಫಲಾನುಭವಿಗಳ ಕುಟುಂಬದ ಶ್ರೇಯೋಭಿವೃದ್ದಿಗೆ 94ಸಿ ಹಕ್ಕುಪತ್ರ ಸಹಕಾರಿ ಆಗಲಿ ಎಂದು ಆಶಿಸಿದರು.
ಈ ವೇಳೆ ತಹಶೀಲ್ದಾರ್ ರಶ್ಮಿ ಹಾಲೇಶ್, ತಾಲೂಕು ಪಂಚಾಯತಿ ಇಒ ನರೇಂದ್ರ ಕುಮಾರ್, ಕಂದಾಯ ನಿರೀಕ್ಷಕ ರೇಣುಕೇಶ್, ಸಿಬ್ಬಂದಿ ಶಿವಪ್ಪ, ಪ್ರಮುಖರಾದ ಎ.ವಿ.ಮಲ್ಲಿಕಾರ್ಜುನ, ನಗರ ನಿತೀನ್, ಚಿಕ್ಕಮಣತಿ ಅಭಿಲಾಶ್, ಪ.ಪಂ. ಸದಸ್ಯ ಗುರುರಾಜ್, ಸೊನಲೆ ಗ್ರಾಮ ಪಂಚಾಯತಿ ಸದಸ್ಯ ಸತೀಶ್ ಮೊದಲಾದವರು ಇದ್ದರು.