ನಾಟಿ ವೈದ್ಯೆ ಶತಾಯುಷಿ ಈರಮ್ಮ ಇನ್ನಿಲ್ಲ !
ಹೊಸನಗರ: ನಾಟಿ ಔಷಧ ನೀಡುವ ಮೂಲಕ ಸಾವಿರಾರು ಮಕ್ಕಳ ಆರೋಗ್ಯ ಕಾಪಾಡಿದ್ದ ತಾಲೂಕಿನ ಕಳೂರು ಗ್ರಾಮದ ಅಗಸರಕೊಪ್ಪದ ಶತಾಯುಷಿ, ನಾಟಿ ವೈದ್ಯೆ ಈರಮ್ಮ ಶನಿವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ.
ಮೃತರು ಅಗರಸಕೊಪ್ಪದ ಕಾಂಗ್ರೆಸ್ ಮುಖಂಡ ಶಂಕ್ರಪ್ಪ ಸೇರಿದಂತೆ ಹಲವು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಜಿ.ಪಂ.ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ತಾ.ಪಂ.ಸದಸ್ಯ ಎರಗಿ ಉಮೇಶ್ ಸೇರಿದಂತೆ ಹೊಸನಗರ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ತಾಲೂಕು ಆರ್ಯ ಈಡಿಗ ಸಮಾಜ ಬಾಂಧವರು ಶಾಂತಿ ಕೋರಿದ್ದಾರೆ.