ಹೊಸನಗರ : ಅಕ್ರಮ ಮರಳು ಸಂಗ್ರಹ ಹಾಗೂ ಸಾಗಾಣಿಕೆಗೆ ಕೊನೆಯೇ ಇಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತು ಆದಂತೆ ತೋರಿಬರುತ್ತಿದೆ.
ಹೌದು, ತಾಲೂಕಿನ ಈಚಲಕೊಪ್ಪ ಗ್ರಾಮದ ಮೂರು ಕೂಡಿಗೆ, ಹಲುಸಾಲೆ ಮಳವಳ್ಳಿ, ಹರಿದ್ರಾವತಿ, ತೋಟದಕೊಪ್ಪ, ಹಳೇ ಬಾಣಿಗ ಗ್ರಾಮದ ಜೋಡಿ ದೇವಸ್ಥಾನ ಸಮೀಪದ ಮುಡಬಾ ಹೊಳೆ, ವಿಜಾಪುರ, ಸಂಪಳ್ಳಿ ಮುಂತಾದ ಕಡೆಗಳಲ್ಲಿ ಪ್ರತಿ ರಾತ್ರಿ ಅಕ್ರಮ ಮರಳು ಸಂಗ್ರಹ ಹಾಗೂ ಸಾಗಾಟ ನಿರಂತರವಾಗಿ ನಡೆದಿದೆ. ಬೆಳಕಿನ ನದಿ ‘ಶರಾವತಿ’ ಹಿನ್ನೀರಿನಿಂದ ಮರಳು ಎತ್ತಲು ನೂರಾರು ಕೂಲಿ ಕಾರ್ಮಿಕರನ್ನು ದೂರದ ಉತ್ತರ ಪ್ರದೇಶ, ಒರಿಸ್ಸಾ ರಾಜ್ಯಗಳಿಂದ ಏಜೆಂಟರ ಮೂಲಕ ಕರೆಸಿಕೊಳ್ಳಲಾಗಿದೆ. ನದಿಯ ಹಿನ್ನೀರಿನಲ್ಲಿ ರಬ್ಬರ್ ಟ್ಯೂಬ್ಗಳನ್ನು ಬಳಸಿ, ಮರದ ತೆಪ್ಪದ ಮೂಲಕ ಮರಳನ್ನು ಮೇಲಕ್ಕೆತ್ತುವ ಕೂಲಿ ಕಾರ್ಮಿಕರ ಆರೋಗ್ಯದ ಮೇಲೆ ಮಾರಕ ದುಷ್ಪರಿಣಾಮ ಬೀರುವ ಅಕ್ರಮ ದಂಧೆ ಕಳೆದ ಹಲವು ತಿಂಗಳಿನಿಂದ ಈ ಭಾಗದಲ್ಲಿ ನಿರಾತಂಕವಾಗಿ ನಡೆದಿದೆ. ಅಕ್ರಮ ಮರಳು ಮಾಫಿಯ ತಡೆಯಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಚನೆಗೊಂಡಿರುವ ‘ಟಾಸ್ಕ್ ಫೋರ್ಸ್ ಸಮಿತಿ’ ನಿಶಬ್ದವಾಗಿದೆ ಎಂಬ ದೂರು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ತಾಲೂಕಿನ ಬಟ್ಟೆಮಲ್ಲಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿ 766ಸಿ ರಲ್ಲಿ ನಿರ್ಮಿಸಿರುವ ಅರಣ್ಯ ತಪಾಸಣಾ ಕೇಂದ್ರ ಮೂಲಕವೇ ಪ್ರತಿದಿನ ತಡರಾತ್ರಿ ಹಾಗೂ ಮುಂಜಾನೆಯ ವೇಳೆಯಲ್ಲಿ ನೂರಾರು ಸಂಖ್ಯೆಯಲ್ಲಿ ಅಕ್ರಮ ಮರಳು ಟಿಪ್ಪರ್ಗಳು ಸಂಚರಿಸುತ್ತಿವೆ. ಇಲ್ಲಿನ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು ಅಕ್ರಮದ ಪಾಲುದಾರರು ಎಂಬಂತೆ ತೋರಿಬರುತ್ತಿದ್ದು, ಈ ಅರಣ್ಯ ಗೇಟ್ ಮೂಲಕ ಹಾದು ಹೋಗುವ ಅಕ್ರಮ ಮರಳು ಲಾರಿಗಳು ಕುರಿತಂತೆ ಯಾವುದೇ ಮಾಹಿತಿ ದಾಖಲಾಗದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಈಚಲಕೊಪ್ಪ, ಹಲುಸಾಲೆ ಮಳ್ಳವಳ್ಳಿಯ ಶರಾವತಿ ನದಿ ಹಿನ್ನೀರು ಪ್ರದೇಶ ಸಂಪರ್ಕಿಸುವ ಅರಣ್ಯ ಪ್ರದೇಶದಲ್ಲಿ ನೂರಾರು ಲೋಡುಗಳಷ್ಟು ಅಕ್ರಮ ಮರಳು ಸಂಗ್ರಹಣೆ ನಡೆದಿದೆ ಎನ್ನಲಾಗಿದೆ. ಹಳೇ ಬಾಣಿಗಾದ ಜೋಡಿ ದೇವಸ್ಥಾನದ ಸಮೀಪ ಹರಿಯುವ ಮುಡುಬಾ ಉಪನದಿ ಪಾತ್ರವನ್ನೆ ಅಕ್ರಮ ಮರಳು ಸಂಗ್ರಹಕಾರರು ಸಂಪೂರ್ಣ ಹಾಳುಗೊಡವುತ್ತಿದ್ದಾರೆ ಎಂಬ ದೂರುಗಳಿವೆ.
ಕಳೆದ ನವೆಂಬರ್ ತಿಂಗಳ ಮೊದಲ ವಾರದಲ್ಲೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಸ್ಥಳೀಯ ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಪತ್ರ ಮುಖೇನ ಉತ್ತರ ಪ್ರದೇಶ, ಒರಿಸ್ಸಾ ರಾಜ್ಯದ ಕೂಲಿ ಕಾರ್ಮಿಕರನ್ನು ಕೂಡಲೇ ಗಡಿಪಾರು ಮಾಡುವಂತೆ ಸ್ಪಷ್ಟ ಸಂದೇಶ ರವಾನಿಸಿದ್ದರೂ ಈವರೆಗೂ ಅವರ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗದಿರುವುದು ಸ್ಥಳೀಯ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಮುಂಬರುವ ಬಿರಿ ಬೇಸಿಗೆ ಹಿನ್ನೆಲೆಯಲ್ಲಿ ಕೂಡಲೇ ಅಕ್ರಮ ಮರಳು ಮಾಫಿಯ ತಡೆಗೆ ಜಿಲ್ಲಾಡಳಿತ ಸೂಕ್ತವಾಗಿ ಸ್ಪಂದಿಸಲಿ ಎಂಬುದು ಸಾರ್ವಜನಿಕರ ಕೋರಿಕೆಯಾಗಿದೆ.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…