ಹೊಸನಗರ ಬಿಜೆಪಿ ಮಂಡಲ ನೂತನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಜಯನಗರ ಪ್ರಹ್ಲಾದ್ !

ಹೊಸನಗರ : ಬಿಜೆಪಿ ಪಕ್ಷ ಯುವಕರಿಗೆ ರಾಜಕೀಯವಾಗಿ ಹೆಚ್ಚೆಚ್ಚು ಮಹತ್ವ ನೀಡುತ್ತ ಪಕ್ಷ ಸಂಘಟನೆ ಮುಂದಾಗುತ್ತಿದೆ ಎಂಬ ವಿಷಯದಲ್ಲಿ ನೂತ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ 2ನೇ ಬಾರಿಗೆ ಆಯ್ಕೆಯಾದ ಶಿವಮೊಗ್ಗ ಜಿಲ್ಲಾಧ್ಯಕ್ಷ ಟಿ.ಎಂ. ಮೇಘರಾಜ್ ಅವರೇ ನಮಗೆಲ್ಲಾ ಸಾಕ್ಷಿ ಅಂತಿದ್ದಾರೆ.

ಅತಿ ಶೀಘ್ರದಲ್ಲಿ ತಾಲೂಕುಗಳ ಪಕ್ಷದ ಮಂಡಲ ಅಧ್ಯಕ್ಷ ಸ್ಥಾನಗಳಿಗೂ ಸೂಕ್ತ ಸಾರಥಿಗಳ ನೇಮಕ ಕಾರ್ಯ ನಡೆಯಲಿದೆ. ಈ ಕಾರಣಕ್ಕೆ ಹೊಸನಗರ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸ್ಥಾನಕ್ಕೆ ಹಲವು ಆಕಾಂಕ್ಷಿಗಳ ಹೆಸರು ಕೇಳಿಬರುತ್ತಿವೆ. ಅವರಲ್ಲಿ ಜಯನಗರ ಪ್ರಹ್ಲಾದ್ ಕೂಡ ಓರ್ವ.

ತಾಲೂಕಿನ ಬಹುತೇಕ ಯುವ ಸಮೂಹಗಳಿಗೆ ಜಯನಗರ ಪ್ರಹ್ಲಾದ್ ಎಂಬ ಯುವಕನ ಪರಿಚಯ ಚಿರಪರಿಚಿತ. ಈತ ಉತ್ತಮ ಸಂಘಟನಕಾರ. ಸುಮಾರು ಮೂರು ದಶಕಗಳಿಂದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಕೂಡ. ವಿರೋಧಿಗಳಿಗೆ ಅವರದೇ ಶೈಲಿಯಲ್ಲಿ ತಕ್ಕ ಉತ್ತರ ನೀಡಬಲ್ಲ ಹೊಂದಾಣಿಕೆ ರಹಿತ ರಾಜಕಾರಣ ಇವರದ್ದು.
ಚಿಕ್ಕ ವಯಸ್ಸಿನಿಂದಲೇ ಅಕ್ರಮ ಗೋ ಸಾಗಾಣಿಕೆ, ಮತಾಂತರ ಕುರಿತಂತೆ ಹಲವರು ಬಾರಿ ಸಿಡಿದ್ದೆದ್ದು ಕೋರ್ಟ್ ಕಟ್ಟಳೆಗಳ ಅನುಭವ ಹೊಂದಿರುವ ಪ್ರಹ್ಲಾದ್ ತಾಲೂಕಿನ ಯುವಕರ ಕಣ್ಮಣಿ.

1995ರಲ್ಲಿ ತೀರ್ಥಹಳ್ಳಿ ತಾಲೂಕು ಬಿಜೆಪಿ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ಹೊತ್ತು ರಾಜಕೀಯ ರಂಗ ಪ್ರವೇಶಿಸಿದ ಇವರು, ನಂತರ ಜಿಲ್ಲಾ ಬಿಜೆಪಿ ಯುವ ಮೋರ್ಚ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.
ಬದಲಾದ ಸನ್ನಿವೇಶದಲ್ಲಿ ಜೀವನೋಪಯಾಕ್ಕಾಗಿ ಕುಟುಂಬದ ಹಿರಿಯರ ನಿರ್ಣಯದಂತೆ ಹೊಸನಗರ ಪಟ್ಟಣಕ್ಕೆ ಸಮೀಪ ಇವರು ಜಯನಗರ ಗ್ರಾಮದಲ್ಲಿ ನೆಲೆಕಂಡರು. ಅಲ್ಲದೆ, ದಶಕಗಳ ಕಾಲ ಹೊಸನಗರ ತಾಲೂಕು ಬಿಜೆಪಿ ಯುವ ಮೋರ್ಚ ಅಧ್ಯಕ್ಷನಾಗಿ ನೇಮಕಗೊಂಡು ತಮ್ಮದೇ ಗಟ್ಟಿಯಾದ ಬೆಂಬಲಿಗರ ತಂಡ ಕಟ್ಟಿ ಪಕ್ಷ ಸಂಘಟನೆಗೆ ಮುಂದಾದ ಕೀರ್ತಿ ಇವರಿಗೆ ಸಲ್ಲುತ್ತದೆ.

ಪ್ರಸಕ್ತ ಜಯನಗರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪ್ರಹ್ಲಾದ್, ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ಮಾಜಿ ಗೃಹ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ ಅವರ ಅತ್ಯಾಪ್ತರ ಬಳಗದಲ್ಲಿ ಗುರುತಿಸಿ ಕೊಂಡವರು. ಸಂಸದ ಬಿ.ವೈ ರಾಘವೇಂದ್ರ ಅವರೊಂದಿಗೂ ಸಹ ಉತ್ತಮ ರಾಜಕೀಯ ಬಾಂಧವ್ಯ ಹೊಂದಿವರು ಇವರ ಕಾರ್ಯಕ್ಷೇತ್ರವು ತೀರ್ಥಹಳ್ಳಿ ಹಾಗೂ ಹೊಸನಗರ ವಿಧಾನಸಭಾ ಕ್ಷೇತ್ರಗಳ ಕೊಂಡಿ ಅಂತಿರುವ ಗ್ರಾಮ ಜಯನಗರ. ನೇರ ನಡೆ, ನಿಷ್ಠುರವಾದಿ, ಪಕ್ಷ ನಿಷ್ಟೆ ಹೊಂದಿರುವ ಜಯನಗರ ಪ್ರಹ್ಲಾದ್ ಈ ಬಾರಿ ಹೊಸನಗರ ಬಿಜೆಪಿ ಮಂಡಲ ನೂತನ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬುದು ಈ ಬಾರಿಯ ವಿಶೇಷ.

ಪಕ್ಷಕ್ಕಾಗಿ ದುಡಿದ ಈವರೆಗಿನ ನನ್ನ ಕಾರ್ಯ ಚಟುವಟಿಕೆಯನ್ನು ಗುರುತಿಸಿ ಪಕ್ಷದ ವರೀಕ್ಷಟರು ನನಗೆ ಮಂಡಲ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದಲ್ಲಿ ಸೂಕ್ತವಾಗಿ ನಿರ್ವಹಿಸುವೆ ಎನ್ನುವ ಪ್ರಹ್ಲಾದ್, ಪಕ್ಷ ಕೈಗೊಳ್ಳುವ ಯಾವುದೇ ತರಹದ ತೀರ್ಮಾನಕ್ಕೆ ನಾನು ಮುಂದೆಯೂ ಬದ್ದ ಎನ್ನುವ ಮಾತನ್ನು ಹೇಳಲು ಕಡೆಗೂ ಅವರು ಮರೆಯಲಿಲ್ಲ.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

10 hours ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

14 hours ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

14 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

16 hours ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

17 hours ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

24 hours ago