ಹೊಸನಗರ : ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮದ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಪೋಷಕರ ಸಭೆಯಲ್ಲಿ ಪ್ರಾಂಶುಪಾಲ ಕೆ. ಉಮೇಶ್ ಮಾತಮಾಡಿ, ಪ್ರಾಧ್ಯಾಪಕರ ಜೊತೆಯಲ್ಲಿ ಪೋಷಕರು ಕೈ ಜೋಡಿಸಿದಲ್ಲಿ ಮಾತ್ರವೇ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ ಮೂರೂವರೆ ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಈ ಕಾಲೇಜು ಶಿಕ್ಷಣ ದಾರಿದೀಪವಾಗಿದೆ ಎಂದರು.
ಪೋಷಕರ ಸಂಘದ ಸಂಚಾಲಕ ಡಾ. ಕೆ. ಶ್ರೀಪತಿ ಹಳಗುಂದ ಮಾತನಾಡಿ, ತಮ್ಮ ಮಕ್ಕಳು ಶಿಕ್ಷಣ ನಿರತ ವಿದ್ಯಾ ಸಂಸ್ಥೆಯೊಂದಿಗೆ ಪೋಷಕರ ಸದಾ ನಿಕಟ ಸಂಪರ್ಕ ಹೊಂದುವ ಮೂಲಕ ಅಗತ್ಯ ಸಲಹೆ, ಸೂಚನೆ ನೀಡಬೇಕೆಂದರು.
ಸಭೆಯಲ್ಲಿ ಪ್ರೊ. ರವಿ, ಪ್ರೊ. ದೊಡ್ಡಯ್ಯ, ಪ್ರೊ. ಲೋಕೇಶಪ್ಪ ಉಪಸ್ಥಿತರಿದ್ದರು.
ಪೋಷಕರ ನೂತನ ಕಾರ್ಯಕಾರಿ ಸಮಿತಿ ರಚನೆ
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವಂತೆ ಪೋಷಕರ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು.
ಮೇಲಿನಬೆಸಿಗೆ ಧರ್ಮರಾವ್ (ಅಧ್ಯಕ್ಷ), ಪ್ರಮೀಳಾ (ಉಪಾಧ್ಯಕ್ಷೆ), ಸಂತೋಷ ಆಚಾರ್ (ಪ್ರಧಾನ ಕಾರ್ಯದರ್ಶಿ), ವಾಣಿ ಶುಭಕರ್ ಪೂಜಾರಿ ಮತ್ತು ವಿಶ್ವನಾಥ್ (ಕಾರ್ಯದರ್ಶಿ) ಸಾವಿತ್ರಿ ಹಾಗೂ ಬಸವರಾಜ್ (ಸಹ ಕಾರ್ಯದರ್ಶಿ) ಸುವರ್ಣ(ಖಜಾಂಚಿ) ಆಯ್ಕೆಯಾದರು.
ಕು|| ವಿಭಾ ಪ್ರಾರ್ಥಿಸಿ, ಪ್ರೊ. ಪ್ರತಿಮಾ ವಂದಿಸಿದರು.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…