ಹೊಸನಗರ: ತಾಲ್ಲೂಕಿನ ಎಲ್ಲ ಪಶು ವೈದ್ಯ ಆಸ್ಪತ್ರೆಗೆ ಸುಮಾರು 480 ಮೇವಿನ ಜೋಳದ ಬೀಜದ ಬ್ಯಾಗ್ ಸರ್ಕಾರ ವಿತರಿಸಿದೆ ಎಂದು ಹೊಸನಗರ ಪಶು ವೈದ್ಯಾಧಿಕಾರಿ ಮಲ್ಲಿಕಾರ್ಜುನ ಸ್ವಾಮಿಯವರು ಹೇಳಿದರು.
ಇಲ್ಲಿನ ಪಶು ವೈದ್ಯ ಆಸ್ಪತ್ರೆಯ ಆವರಣದಲ್ಲಿ ಗೋವಿಂದರಾಜು ಎಂಬುವವರಿಗೆ ಮೇವು ಜೋಳದ ಬೀಜದ ಬ್ಯಾಗ್ ವಿತರಣೆ ಮಾಡಿ ಮಾತನಾಡಿ, ಹೊಸನಗರ ಪಶು ವೈದ್ಯ ಇಲಾಖೆಗೆ ತಾಲೂಕಿನ ಎಲ್ಲ ಪಶು ಆಸ್ಪತ್ರೆಗಳಿಗೆ ಹಂಚಲು 5 ಕೆ.ಜಿ ತೂಕದ 480 ಚೀಲ ಮೇವಿನ ಬೀಜ ಸರ್ಕಾರ ನೀಡಿದ್ದು ಆಯಾಯ ಪಶು ಇಲಾಖೆಯ ದನ, ಎಮ್ಮೆಗಳ, ಸಾಕಾಣಿಕೆಯ ಅನುಗುಣವಾಗಿ ಚೀಲಗಳ ವಿತರಣೆ ನಡೆಸಲಾಗುವುದು ಎಂದರು.
ಗುರುತಿನ ಚೀಟಿ ಕಡ್ಡಾಯ:
ಮೇವು ಜೋಳದ ಬೀಜ ಪಡೆಯಲು ರೈತರ ಗುರುತಿನ ಚೀಟಿ ಕಡ್ಡಾಯವಾಗಿದ್ದು ಈ ವರ್ಷ ಬರಗಾಲ ಆವರಿಸಿರುವುದರಿಂದ ರೈತರು ತಮ್ಮ ಭತ್ತದ ಗದ್ದೆ ಕೊಯ್ಲು ಮುಗಿದ ನಂತರ ಗದ್ದೆಗಳಲ್ಲಿ ತೇವಾಂಶ ಇರುವ ಜಾಗದಲ್ಲಿ ಈ ಜೋಳದ ಬೀಜ ಬಿತ್ತನೆ ಮಾಡಿದರೆ ದನ-ಕರುಗಳಿಗೆ ಅಲ್ಪ-ಸ್ವಲ್ಪ ಮೇವುಗಳು ಸಿಕ್ಕಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ನಾಗರಾಜ್ ಹೆಚ್.ಎಸ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…