Hosanagara | ರಸ್ತೆ ಅಭಿವೃದ್ಧಿ ಹೆಸರಲ್ಲಿ ಗಿಡ, ಮರಗಳ ಮಾರಣಹೋಮ

ಹೊಸನಗರ: ಸುಮಾರು 150 ವರ್ಷಗಳ ಹಳೆಯ ನಾಗದೇವರಿಗೆ ನೆರಳಾಗಿ ನಿಂತ ಅರಳಿ ಮರವನ್ನೇ ರಸ್ತೆ ಅಭಿವೃದ್ಧಿ ಹೆಸರಲ್ಲಿ ನೆಲ ಸಮ ಮಾಡಿದ ನ್ಯಾಶನಲ್ ಕಂಪನಿಯವರು ಸಣ್ಣ-ಪುಟ್ಟ ಗಿಡ, ಮರಗಳನ್ನು ಬೀಡುವವರೇ?

ಪ್ರತಿ ವರ್ಷ ಹಸರೀಕರಣದ ಹೆಸರಿನಲ್ಲಿ ಜುಲೈ ತಿಂಗಳ ಪೂರ್ತಿ ಕೆಲವು ಸಂಘ ಸಂಸ್ಥೆಯವರು ಹಾಗೂ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪರಿಸರ ಪ್ರೇಮಿಗಳು ಗಿಡ ನೆಡುವಾಗ ಎಚ್ಚರ ವಹಿಸುವುದು ಸೂಕ್ತ.


ಹೌದು, ಹೊಸನಗರದ ಚೌಡಮ್ಮ ರಸ್ತೆಯಲ್ಲಿ ಜನರಿಗೆ ತಣ್ಣನೆ ಗಾಳಿ ಬೀಸಲಿ ಹಾಗೂ ಸಾರ್ವಜನಿಕರಿಗೆ ನೆರಳು ನೀಡಲಿ ಎಂಬ ಉದ್ದೇಶದಿಂದ ರಸ್ತೆಯ ಒಂದು ಭಾಗ ಗಿಡಗಳನ್ನು ನೆಟ್ಟ ಪರಿಸರ ಪ್ರೇಮಿ ರಾಧಾಕೃಷ್ಣ ಪೂಜಾರಿಯವರು ಬೆಳಗ್ಗೆ, ಸಂಜೆ ಗಿಡ-ಮರಗಳಿಗೆ ನೀರು ಹಾಕುತ್ತಿದ್ದರು. ಆದರೆ ರಸ್ತೆಗೆ ಅಡ್ಡಲಾಗಿ ಗಿಡ-ಮರಗಳು ಬೆಳೆದಿದೆ ಎಂದು ಪಟ್ಟಣ ಪಂಚಾಯತಿಯವರು ಮರದ ತಲೆ ಭಾಗಗಳನ್ನು ತೆಗೆದು ಪ್ರತಿ ದಿನ ನೀರುಣಿಸುತ್ತಿದ್ದ ರಾಧಾಕೃಷ್ಣ ಪೂಜಾರಿಯವರ ಹೊಟ್ಟೆ ಉರಿಯುವಂತೆ ಮಾಡಿದರು.

ಕುಂದಾಪುರ ರಸ್ತೆಯಲ್ಲಿ ಮರಗಳ ನೆಲಸಮ: ಹೊಸನಗರದಿಂದ ಜಯನಗರ – ಕುಂದಾಪುರಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು ನೂರಾರು ವರ್ಷಗಳ ಇತಿಹಾಸವಿರುವ ಅರಳಿ ಸೇರಿದಂತೆ ಇತ್ಯಾದಿ ಮರಗಳಿದ್ದು ಅವುಗಳ ಸಾರ್ವಜನಿಕರಿಗೆ ನೆರಳು ನೀಡುತ್ತಾ ಬರುತ್ತಿದ್ದು ಸುಮಾರು 15ರಿಂದ 20 ಮರಗಳು ನ್ಯಾಶನಲ್ ಕಂಪನಿಯವರು ಈ ಮರಗಳನ್ನು ನೆಲಸಮ ಮಾಡಿ ಆ ರಸ್ತೆಯಲ್ಲಿ ಸಾರ್ವಜನಿಕರಿಗೆ ದನ-ಕರುಗಳಿಗೆ ನೆರಳಿಲ್ಲದಂತೆ ಮಾಡಿದ್ದಾರೆ.

ಹೊಸನಗರ ಪಟ್ಟಣದ ಸುತ್ತ-ಮುತ್ತ ಎಲ್ಲಿಯೂ ನೆರಳಿಲ್ಲದಂತೆ ಗಿಡಮರಗಳು ನೆಲಸಮವಾಗುತ್ತಿದ್ದು ಮುಂದೊಂದು ದಿನ ಮಲೆನಾಡು ಪ್ರದೇಶ ಬಯಲುಸೀಮೆಯಾಗುವುದರಲ್ಲಿ ಅನುಮಾನವಿಲ್ಲ. ಹೊಸನಗರ ಪಟ್ಟಣ ಅಭಿವೃದ್ಧಿ ಮಾಡುವ ಉದ್ದೇಶದಿಂದ ಹೊಸನಗರ ಪಟ್ಟಣದ ಮೂಲೆ-ಮೂಲೆ ಮರಗಳು ಒಂದು ಕಡೆಯಾದರೂ ಕೆಲವು ಹಿತಾಸಕ್ತಿಗಳು ಕಾಡುಗಳನ್ನು ಕಡಿದು ಜಾಗ ಒತ್ತುವರಿ ಮಾಡಲು ಹೊರಟಿದ್ದಾರೆ. ಇನ್ನೂ ಐದಾರು ವರ್ಷಗಳಲ್ಲಿ ಮಲೆನಾಡು ಎಂಬ ಹೆಸರು ಮಾಯವಾಗಿ ಬಯಲುಸೀಮೆಯಾಗುವುದರಲ್ಲಿ ಯಾವುದೇ ಸಂಶಯ ಬೇಡ.

ವರದಿ : ಹೆಚ್.ಎಸ್. ನಾಗರಾಜ್

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

9 hours ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

13 hours ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

13 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

15 hours ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

16 hours ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

23 hours ago