Categories: Soraba

ವೃಕ್ಷಾರೋಪಣ ಕಾರ್ಯಕ್ಕೆ ಸಾಗುವಳಿದಾರರ ವಿರೋಧ

ಸೊರಬ: ತಾಲ್ಲೂಕು ಉಳವಿ ಹೋಬಳಿ ಹಲಸಿನಕೊಪ್ಪ ಗ್ರಾಮದಲ್ಲಿ ಗ್ರಾಮದ ಸನಂ 4 ರಲ್ಲಿ ಸುಮಾರು 150 ಕ್ಕೂ ಹೆಚ್ಚು ಎಕರೆ ಗೋಮಾಳ ಪ್ರದೇಶದಲ್ಲಿದ್ದ ಅರಣ್ಯವನ್ಯ ಹಗಲು ರಾತ್ರಿ ಕಾದು ರಕ್ಷಿಸಿಕೊಂಡು ಬಂದಿದ್ದಾರೆ. ಇವರಿಗೆ ಅರಣ್ಯ ಇಲಾಖೆ ಸಿಪಿಟಿ ನಿರ್ಮಿಸಿ ಕೊಡುವ ಮೂಲಕ ಸಹಕರಿಸಿದೆ.

ಈಚೆಗೆ ಸಿಪಿಟಿ ಒಳಗೆ ಪ್ರವೇಶಿಸಿ ಗ್ರಾಮಸ್ಥರು ಕಾಯ್ದುಕೊಂಡು ಬಂದಿದ್ದ ಸುಮಾರು ಎರಡು ಎಕರೆ ಮರಗಿಡಗಳನ್ನು ಪಕ್ಕದ ಬೇಳೂರು ಗ್ರಾಮದ ಒಬ್ಬರು ದ್ವಂಸ ಮಾಡಿ ಅಡಿಕೆ ಬೆಳೆದಿದ್ದು ಜಿಲ್ಲಾಧಿಕಾರಿಗಳ ತನಕವೂ ದೂರು ಹೋಗಿತ್ತು. ಆ ವ್ಯಕ್ತಿಗೆ ಮಂಜೂರು ಮಾಡಿಕೊಟ್ಟಿರಲಿಲ್ಲ. ಆದಾಗ್ಯೂ ಪುನಃ ವೃಕ್ಷಾರೋಪಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮತ್ತೆ ಅಡಿಕೆ ಗಿಡ ನೆಟ್ಟಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿತ್ತು.

ತಾಲೂಕಿನ ಹಲಸಿನಕೊಪ್ಪ ಸಕಿಪ್ರಾ ಶಾಲಾ ಆವರಣದಲ್ಲಿ ವೃಕ್ಷಾರೋಪಣ ನೆರವೇರಿಸಿ ನಂತರ ಸನಂ 4 ರ ಗೋಮಾಳದ ತನಕ ವೃಕ್ಷಜಾತ ತೆರಳಲಾಯಿತು. ಜಾತಾಕ್ಕೆ ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತಹೆಗಡೆ ಅಶಿಸರ, ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್ ಅವರು ಚಾಲನೆ ನೀಡಿದರು.

ವೃಕ್ಷಾರೋಪಣ ವೇಳೆ ತಹಶೀಲ್ದಾರ್ ಹುಸೇನ್ ಸರಕಾವಸ್ ಹಾಜರಿದ್ದರು. ಅತಿಕ್ರಮಣ ಜಾಗದಲ್ಲಿ ಗ್ರಾಮಸ್ಥರು ಕಾಡು ಗಿಡಗಳನ್ನು ನೆಡುವ ಮೂಲಕ ಅರಣ್ಯ ಪುನಶ್ಚೇತನಕ್ಕೆ ಮುಂದಾದರು. ಈ ವೇಳೆ ಅತಿಕ್ರಮಣ ಮಾಡಿದವರಿಗೂ ಗ್ರಾಮದವರಿಗೂ ಮಾತಿನ ಚಕಮಕಿ ನಡೆಯಿತು. ಗ್ರಾಮದ ಮಹಿಳೆಯರು ನಾವು ಇಲ್ಲಿಯವರೆಗೆ ಉಳಿಸಿಕೊಂಡು ಬಂದಿದ್ದ ಅರಣ್ಯವನ್ನು ಹೊಸಕಿ ಹಾಕಿದ್ದಾರೆ. ಪುನಃ ಇಲ್ಲಿ ಅವರು ಕಾಲಿಟ್ಟರೆ ನಾವು ಸುಮ್ಮನಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ತಹಶೀಲ್ದಾರ್ ಸ್ಥಳ, ದಾಖಲೆ ಪರಿಶೀಲನೆ ನಡೆಸಿ, ಅಕ್ರಮದಾರರಿಗೆ ಬಗರ್ ಹುಕುಂ ಸಮಿತಿ ಭೂ ಮಂಜೂರಾತಿಯನ್ನು ವಜಾ ಮಾಡಿದ್ದು ಪ್ರಸ್ತುತ ಸರ್ಕಾರಿ ಸ್ವಾಮ್ಯದಲ್ಲಿ ಈ ಜಾಗವಿದೆ. ಇಲ್ಲಿ ಯಾವುದೇ ಸಾಗುವಳಿ, ಕಡಿತಲೆ ಇತ್ಯಾದಿ ಚಟುವಟಿಕೆಯನ್ನು ಯಾರೂ ನಡೆಸುವಂತಿಲ್ಲ. ಈಗಿರುವ ಸ್ಥಿತಿಯನ್ನು ಉಳಿಸಿಕೊಳ್ಳಬೇಕು. ಉಲ್ಲಂಘನೆ ನಡೆದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ವೃಕ್ಷಲಕ್ಷ ಆಂದೋಲನದ ಅನಂತಹೆಗಡೆ ಅಶಿಸರ ಮಾತನಾಡಿ, ರಾಜ್ಯಕ್ಕೆ ಮಾದರಿಯಾಗಬೇಕಾದ ಹಲಸಿನಕೊಪ್ಪ ಕಾನು ಅತಿಕ್ರಮಣ ತೆರವಿಗೆ ಇಲಾಖೆಗಳು ಮೀನಾಮೇಷ ಎಣಿಸುತ್ತಿರುವುದು ಬೇಸರದ ಸಂಗತಿ. ಇಲ್ಲಿ ಹಲವು ಪರಿಸರ ಕಾಯ್ದೆಗಳ ಉಲ್ಲಂಘನೆ ಆಗಿದ್ದು, ಕೂಡಲೆ ಜಾಗ ತೆರವುಗೊಳಿಸಿ ಮರು ಅರಣ್ಯೀಕರಣಕ್ಕೆ ಕಂದಾಯ, ಅರಣ್ಯ ಇಲಾಖೆ ಜಂಟಿಯಾಗಿ ಮುಂದಾಗಬೇಕು. ಗ್ರಾಮಸ್ಥರ ತಾಳ್ಮೆಯನ್ನು ಪರೀಕ್ಷಿಸಕೂಡದು ಎಂದರು.

ಜೀವವೈವಿಧ್ಯ ಸಮಿತಿ, ಗ್ರಾಪಂ, ತಾಪಂ, ಕಂದಾಯ, ಅರಣ್ಯ ಇಲಾಖೆ ಈ ಕಾನು ಪ್ರದೇಶಕ್ಕೆ ರಕ್ಷಿತ ಜೇನು ಕಾನು ಎಂದು ಈ ವೇಳೆ ಘೋಷಿಸಿ ನಾಮಫಲಕವನ್ನು ಅಳವಡಿಸಿತು.

ತಾಲ್ಲೂಕು ಜೀವವೈವಿಧ್ಯ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಪ್ರಾಸ್ತಾವಿಕ ಮಾತನಾಡಿದರು.
ಶಿವಮೊಗ್ಗ ಪರಿಸರ ಸಂಘಟನೆಯ ಪ್ರೊ.ಬಿ.ಎಂ.ಕುಮಾರಸ್ವಾಮಿ, ಬಾಲಕೃಷ್ಣ ನಾಯ್ಡು, ತಡಸ ಭೀಮರಾವ್, ಎಸ್.ಬಿ.ಅಶೋಕ್ ಕುಮಾರ್, ರಾಜ್ಯ ಜೀವವೈವಿಧ್ಯ ಮಂಡಳಿ ತಜ್ಞ ಪ್ರೀತಂ, ಕಾರ್ತೀಕ್, ತಾಪಂ ಅಧಿಕಾರಿ ಸೀಮಾ, ಗ್ರಾಪಂ ಅಧ್ಯಕ್ಷೆ ತುಳಸಿ, ಪಿಡಿಒ ನಾಗರಾಜ್, ಸಾಮಾಜಿಕ ಅರಣ್ಯ ಆರ್ ಎಫ್ ಒ ಸಂಜಯ್, ಪೊಲೀಸ್ ಅಧಿಕಾರಿ ನಾಗರಾಜ್, ಪಜಾ ಟ್ರಸ್ಟ್ ಕಾರ್ಯದರ್ಶಿ ಸಿ.ಪಿ.ಈರೇಶಗೌಡ, ಕಂದಾಯ, ಅರಣ್ಯ, ತಾಪಂ ಗ್ರಾಪಂ ಅಧಿಕಾರಿಗಳು ಸಿಬ್ಬಂದಿ, ಗ್ರಾಮ ಪ್ರಮುಖರಾದ ರಮೇಶ್, ರಾಜಾರಾಂ, ಗ್ರಾಮಾಧ್ಯಕ್ಷ ಪರಶುರಾಮ ಹಾಗೂ ರಾಜ್ಯ ಜೀವವೈವಿಧ್ಯ ಮಂಡಳಿ ಮಾಜಿ ಸದಸ್ಯ ಕೆ.ವೆಂಕಟೇಶ್ ಪಾಲ್ಗೊಂಡಿದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

3 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

3 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

3 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

3 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

3 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

3 days ago