Categories: Thirthahalli

ಸಕಲ ಸರ್ಕಾರಿ ಗೌರವಗಳೊಂದಿಗೆ ಸುಂದರೇಶ್ ಅಂತ್ಯಕ್ರಿಯೆ ; ಇವರ ಬಾಲ್ಯ ಹೇಗಿತ್ತು ? ಸ್ನೇಹಿತರು ಏನೆನ್ನುತ್ತಾರೆ ? ಇಲ್ಲಿದೆ ನೋಡಿ

ತೀರ್ಥಹಳ್ಳಿ: ಸಕಲೇಶಪುರ ಕಾಡುಮನೆ ಬಳಿ ಗುರುವಾರ ರಕ್ಷಿತಾರಣ್ಯದಲ್ಲಿ ಬೆಂಕಿ ನಂದಿಸಲು ಹೋಗಿ ಗಾಯಗೊಂಡು, ಶನಿವಾರ ಮೃತಪಟ್ಟ ತಾಲ್ಲೂಕಿನ ತೆಂಗಿನಕೊಪ್ಪದ ಸಂಪಿಗೇಸರ ಮೂಲದ ಅರಣ್ಯರಕ್ಷಕ ಸುಂದರೇಶ್ ಎಸ್.ಜೆ. ಅವರಿಗೆ ಬಾಲ್ಯದಿಂದಲೂ ಕಾಡು ಎಂದರೆ ಪ್ರೀತಿ.

‘ಸುತ್ತಲು ನೋಡಿಕೊಂಡು ಬೆಳೆದ ಪರಿಸರದ ಬಗ್ಗೆ ಸೂಕ್ಷ್ಮ ಗ್ರಹಿಕೆ ಹೊಂದಿದ್ದರು. ಕಾಡಿನ ಬಗೆಗಿನ ವಾತ್ಸಲ್ಯದಿಂದ ಅರಣ್ಯ ರಕ್ಷಕನಾಗಿ ಸೇವೆಗೆ ಸೇರಿಕೊಂಡಿದ್ದ. ತಮಾಷೆಯ ಮುನುಷ್ಯನಾಗಿದ್ದ ಸುಂದರೇಶ್‌ ಸುತ್ತಮುತ್ತಲ ಗೆಳೆಯರಿಗೆ ಸದಾಕಾಲ ಸಂತೋಷ ನೀಡುತ್ತಿದ್ದರು. ಮಾತಿಗೆ ಇಳಿದರೆಂದರೆ ನಗುವಿನ ಹೊನಲಿನಲ್ಲಿ ತೇಲಿ ಬಿಡುತ್ತಿದ್ದರು. ಆತನ ಅಗಲಿಕೆಯಿಂದ ಅತೀವ ಬೇಸರ ತರಿಸಿದೆ’ ಎನ್ನುತ್ತಾರೆ ಸುಂದೇಶ್‌ ಅವರ ಗೆಳೆಯರಾದ ಸವಿತಾ, ವಿಕ್ಕಿ, ಪ್ರೇಮ್‌.

‘ಮುನ್ನುಗ್ಗುವ ಸ್ವಭಾವದಿಂದ ಸ್ನೇಹಿತರಿಗೆ ಧೈರ್ಯ ತುಂಬುತ್ತಿದ್ದ. ಆನೆ, ಹಾವು, ಕಾಡು ಪ್ರಾಣಿಗಳ ಕಿಂಚಿತ್ತೂ ಹೆದರಿಕೆ ಇಲ್ಲದೆ ಕೆಲಸ ಮಾಡುತ್ತಿದ್ದ. 4 ವರ್ಷಗಳ ಹಿಂದೆ ಆನೆ ಓಡಿಸಲು ಪಟಾಕಿಗಳನ್ನು ಸಿಡಿಸುವ ಸಂದರ್ಭ ತನ್ನ ಒಂದು ಬೆರಳನ್ನು ಕಳೆದುಕೊಂಡಿದ್ದ. ವಿಷಭರಿತ ಹಾವುಗಳನ್ನು ಸುರಕ್ಷತೆಯಿಂದ ಕಾಡಿಗೆ ತಲುಪಿಸುವ ಸಾಹಸಿಗ’ ಎಂದು ಅವರು ಸ್ಮರಿಸುತ್ತಾರೆ.

ಕೊಂಡ್ಲೂರಿನಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಮುಗಿಸಿದ ನಂತರ ಪಟ್ಟಣದ ತುಂಗಾ ಮಹಾವಿದ್ಯಾಲಯದಲ್ಲಿ ಸುಂದರೇಶ್‌ ಬಿಎ ಪದವಿ ಪಡೆದಿದ್ದರು. ರಕ್ಷಿತಾ ಬಿ.ಜೆ. ಅವರನ್ನು 7 ವರ್ಷಗಳ ಹಿಂದೆ ವರಿಸಿದ್ದರು. 4 ವರ್ಷದ ಪುತ್ರಿ ಶಾರ್ವರಿ ಎಸ್.ಎಸ್.‌ ಹಾಗೂ ತಂದೆ ಜಯಚಂದ್ರಗೌಡ ಇದ್ದಾರೆ. ತಾಯಿ ಶಾರದಾ ಎರಡು ವರ್ಷಗಳ ಹಿಂದೆ ಮಂಗನಕಾಯಿಲೆಯಿಂದ ಮೃತಪಟ್ಟಿದ್ದರು.

ಗಾರ್ಡ್ ಸುಂದರೇಶ್ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನಡೆಯಿತು. ಸುಂದರೇಶ್ ಮೂರು ಸುತ್ತು ಕುಶಾಲು ತೋಪು ಹಾರಿಸಿ ಅಂತಿಮ ನಮನ ಸಲ್ಲಿಸಲಾಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದರು.

Malnad Times

Recent Posts

ಏ.30 ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ ನಡ್ಡಾ ; ಬಿವೈಆರ್

ಶಿವಮೊಗ್ಗ : ಏ.30ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶಿವಮೊಗ್ಗ ಆಗಮಿಸಲಿದ್ದು ರಾಷ್ಟ್ರೀಯತೆಯ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು…

10 mins ago

10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರು ಬಿ.ವೈ.ರಾಘವೇಂದ್ರ ಗೆಲುವು ತಡೆಯಲು ಸಾಧ್ಯವಿಲ್ಲ

ರಿಪ್ಪನ್‌ಪೇಟೆ: ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ…

6 hours ago

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ..... ಶೃಂಗೇರಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ…

15 hours ago

Arecanut Today Price | ಏಪ್ರಿಲ್ 26ರ ಅಡಿಕೆ ರೇಟ್

ಹೊಸನಗರ : ಏ. 26 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

1 day ago

ಮೇ 02 ರಂದು ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಆಗಮನ

ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗೀತಾಶಿವರಾಜ್‍ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು…

1 day ago

ಲಕ್ಷಾಂತರ ಮತಗಳ ಅಂತರದಲ್ಲಿ ಗೆಲುವು ನನ್ನದೇ, 2ನೇ ಸ್ಥಾನಕ್ಕಾಗಿ ಬಿಜೆಪಿ, ಕಾಂಗ್ರೆಸ್ ಪೈಪೋಟಿ ಅಂದ್ರು ಈಶ್ವರಪ್ಪ

ರಿಪ್ಪನ್‌ಪೇಟೆ: ನನ್ನ ಪರವಾಗಿ ಹೋದ ಕಡೆಯಲೆಲ್ಲ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಪಕ್ಷದ ಸಾಕಷ್ಟು ಕಾರ್ಯಕರ್ತರು ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿದ್ದು…

1 day ago