ಸಾಗರ

ಜುಲೈ 14ರಂದು ಸಿಗಂದೂರು ಸೇತುವೆ ಉದ್ಘಾಟನೆ ಈ ಜಾಗದಲ್ಲಿ ನಡೆಯಲಿದೆ

ಸಾಗರ: ‌ಜುಲೈ 14ರಂದು ಸಿಗಂದೂರಿನ ಸೇತುವೆಯ ಭವ್ಯ ಉದ್ಘಾಟನೆ ನಡೆಯಲಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೇತುವೆಯನ್ನು ಲೋಕಾರ್ಪಣೆ ಮಾಡುವರು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮಧ್ಯಾಹ್ನ 12 ಗಂಟೆಗೆ ಸಾಗರದ ನೆಹರು ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದ್ದು, ಸಚಿವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಲವು ಯೋಜನೆಗಳ ಶಂಕುಸ್ಥಾಪನೆಯೂ ನಡೆಯಲಿದೆ.

ಪ್ರಮುಖ ಯೋಜನೆಗಳು:

  • ₹925 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ 369 ಇ – ಸಾಗರದಿಂದ ಮರುಕುಟಿಕದವರೆಗೆ, ಸಾಗರ ಪಟ್ಟಣದ ಬೈಪಾಸ್ ಸೇರಿ ದ್ವಿಪಥ ರಸ್ತೆ ನಿರ್ಮಾಣ.
  • ಈ ಮೂಲಕ ಒಟ್ಟು ₹2056 ಕೋಟಿ ಮೊತ್ತದ ಕಾಮಗಾರಿಗಳು ಜಿಲ್ಲೆಗೆ ಲಭ್ಯವಾಗಿವೆ ಹಾಗೂ ಚುರುಕಾಗಿ ನಡೆಯುತ್ತಿವೆ.

ಅಭಿವೃದ್ಧಿ ಯೋಜನೆಗಳು:

  • ಚಿತ್ರದುರ್ಗ–ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ (NH-13) ದ್ವಿಪಥ ರಸ್ತೆ ಬಾಕಿ ಭಾಗದ ನಿರ್ಮಾಣಕ್ಕೆ ₹518.93 ಕೋಟಿ.
  • ವಿದ್ಯಾನಗರ ರೈಲ್ವೆ ಅಂಡರ್‌ಪಾಸ್ – ₹48 ಕೋಟಿ ವೆಚ್ಚ.
  • ತೀರ್ಥಹಳ್ಳಿರಸ್ತೆ – ₹96 ಕೋಟಿ.
  • ತುಂಗ ಸೇತುವೆ, ಬೈಪಾಸ್ ರಸ್ತೆ, ಆಗೂಂಬೆ–ಮೇಗರವಳ್ಳಿ ದ್ವಿಪಥ ರಸ್ತೆ – ₹96 ಕೋಟಿ.
  • ಮೂರು ಕಿರು ಸೇತುವೆಗಳು ಹಾಗೂ ಇತರ 16 ಪ್ರಮುಖ ಕಾಮಗಾರಿಗಳು ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ನಡೆಯುತ್ತಿವೆ.

ಸಂಸದರು 2022–23ರಲ್ಲಿ ಮಂಜೂರಾದ ಮೂರು ಯೋಜನೆಗಳ ವಿವರ ನೀಡುತ್ತಾ, ಈಗಾಗಲೇ 2024–25 ಸಾಲಿನಲ್ಲಿ ಹಲವಾರು ಕಾಮಗಾರಿಗಳು ಅನುಷ್ಠಾನದಲ್ಲಿರುವುದಾಗಿ ತಿಳಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ತುಂಗಾ ನದಿಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಭವ್ಯವಾಗಿ ನಡೆಯಿತು. ಈ ವೇಳೆ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಗಣ್ಯರು ಭಾಗವಹಿಸಿ ನದಿಗೆ ಬಾಗಿನ ಅರ್ಪಿಸಿದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650