ಕೆಂಚನಾಲ ; ರೈಲ್ವೆ ಹಳಿ ದಾಟಲು ಪಾದಚಾರಿಗಳಿಗೆ ಅವಕಾಶಕ್ಕೆ ಆಗ್ರಹ

Written by Mahesha Hindlemane

Published on:

ರಿಪ್ಪನ್‌ಪೇಟೆ ; ತಾಳಗುಪ್ಪ-ಬೆಂಗಳೂರು ಸಂಪರ್ಕದ ಕೆಂಚನಾಲ ಬಳಿ ರೈಲ್ವೆ ಇಲಾಖೆಯವರು ಗ್ರಾಮಾಂತರ ಪ್ರದೇಶದ ಸಂಪರ್ಕ ರಸ್ತೆಯನ್ನು ಬಂದ್ ಮಾಡಲು ತಡೆಗೋಡೆ ನಿರ್ಮಿಸುತ್ತಿದ್ದು ಇದರಿಂದ ಶಾಲಾ ಮಕ್ಕಳು ಮತ್ತು ಸಾರ್ವನಿಕರು ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವ ಅನಿರ್ವಾತೆ ಎದುರಾಗುತ್ತದೆಂದು ರೈಲ್ವೆ ಇಲಾಖೆಯವರಿಗೆ ತಡೆಗೋಡೆ ಮಾಡುವ ಮಧ್ಯದಲ್ಲಿ ಸ್ಪಲ್ಪ ಜಾಗ ಪಾದಚಾರಿಗಳಿಗೆ ಓಡಾಡಲು ಬಿಡಿ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇವರ ಆಗ್ರಹಕ್ಕೆ ಮಣಿಯದೆ ಗುತ್ತಿಗೆದಾರ ಯಾವುದೇ ಕಾರಣಕ್ಕೂ ಜಾಗ ಬಿಡುವುದಿಲ್ಲ ಎಂದು ಹಠ ಹಿಡಿದಿದ್ದು ಆಗ ಖಾಸಗಿ ಕಾರ್ಯಕ್ರಮದ ನಿಮಿತ್ತ ಶಾಸಕ ಗೋಪಾಲಕೃಷ್ಣ ಬೇಳೂರು ಇದೇ ಮಾರ್ಗದಲ್ಲಿ ಬರುತ್ತಿದ್ದಾರೆಂಬ ಮಾಹಿತಿಯನ್ನಾದರಿಸಿ ಗ್ರಾಮಸ್ಥರು ಶಾಸಕರನ್ನು ತಡೆದು ಸ್ಥಳಕ್ಕೆ ಕರೆತಂದು ಇಲ್ಲಿ ಶಾಲೆ ಮತ್ತು ಗ್ರಾಮ ಪಂಚಾಯಿತಿ ಕಛೇರಿಗಳು ಇರುವುದರಿಂದ ತಡೆಗೋಡೆ ಮಾಡುವ ಸ್ಥಳದಲ್ಲಿ ಪಾದಚಾರಿಗಳು ಓಡಾಡಲು ಒಂದು ಅಥವಾ ಎರಡು ಅಡಿ ಜಾಗ ಬಿಡುವಂತೆ ಕೋರಿಕೊಂಡ ಮೇರೆಗೆ ತಕ್ಷಣ ರೈಲ್ವೆ ಇಲಾಖೆಯ ಗುತ್ತಿಗೆದಾರನಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರ ಮನವರಿಕೆ ಮಾಡಿದ ಮೇರೆಗೆ ಸ್ಪಂದಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಕೆಂಚನಾಲ ಗ್ರಾಮ ಪಂಚಾಯ್ತಿ ಸದಸ್ಯ ಉಬೇದುಲ್ಲಾ ಷರೀಫ್, ಇನ್ನಿತರರು, ನೂರಾರು ಗ್ರಾಮಸ್ಥರು ಹಾಜರಿದ್ದರು.

Leave a Comment