ಉತ್ತಮ ಸಮಾಜ ನಿರ್ಮಾಣಕ್ಕೆ ಕ್ರೀಡೆ ಅತ್ಯಗತ್ಯ ; ಹರತಾಳು ಹಾಲಪ್ಪ

Written by Mahesha Hindlemane

Updated on:

ರಿಪ್ಪನ್‌ಪೇಟೆ ; ಮೌಲ್ಯಾಧಾರಿತ ಶಿಕ್ಷಣದ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕ್ರೀಡೆ ಅತ್ಯುತ್ತಮವಾದ ವೇದಿಕೆಯಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳೀದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ವಿ.ಆರ್.ಸ್ಪೋರ್ಟ್ಸ್ ಹಾಗೂ ಕ್ರೀಡಾಲೋಕ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾದ ಹೊನಲು ಬೆಳಕಿನ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿ ಕ್ರೀಡಾ ಸ್ಪೂರ್ತಿ ಇದ್ದರಷ್ಟೆ ನಾವು ಸದಾ ಉಲ್ಲಾಸ, ಉತ್ಸಾಹದಿಂದ ಇರಲು ಸಾಧ್ಯ. ಜೀವನದಲ್ಲಿ ಏನನ್ನಾದರು ಸಾಧಿಸುವ ಛಲ ಆರಂಭಗೊಳುವುದೇ ನಮ್ಮೊಳಗಿರುವ ಸ್ಪರ್ಧೆಯ ಮೂಲಕ ಅದನ್ನು ಅಂಕಣಕ್ಕಿಳಿಸಿ ಕಾರ್ಯರೂಪಗೊಳಿಸಿದ್ದಾಗಲೇ ಕ್ರೀಡಾಪಟು ಉತ್ತಮವಾಗಿ ರೂಪುಗೊಳ್ಳಲು ಸಾಧ್ಯವೆಂದ ಅವರು, ಕ್ರೀಡೆ ಬರೀ ಆಟವಲ್ಲ ಅದು ವ್ಯಕ್ತಿಯನ್ನು ಮಾನಸಿಕವಾಗಿ ಬೌದ್ದಿಕವಾಗಿ ದೈಹಿಕವಾಗಿ ಸದೃಢಗೊಳಿಸುವುದರೊಂದಿಗೆ ಸ್ಪರ್ಧಾ ಮನೋಭಾವನೆ ಹೆಚ್ಚಿಸಲು ಸಾಧ್ಯವೆಂದರು.

ವಿ.ಆರ್.ಸ್ಪೋರ್ಟ್ಸ್ ಹಾಗೂ ಕ್ರೀಡಾಲೋಕ ಗೆಳೆಯರ ಬಳಗದ ಅಧ್ಯಕ್ಷ ಪಿ.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತ್ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಉದ್ಯಮಿ ಸಂತೋಷ ಆಶ್ರಿತಾ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಎನ್.ಸತೀಶ್, ಗ್ರಾಮ ಪಂಚಾಯಿತ್ ಮಾಜಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಆರ್.ಟಿ.ಗೋಪಾಲ, ಸುಂದರೇಶ ಕೆರೆಹಳ್ಳಿ, ಜಿ.ಡಿ.ಮಲ್ಲಿಕಾರ್ಜುನ, ಪಿ.ಸುಧೀರ್, ಭೀಮರಾಜ್, ಹೆಚ್‌ಎನ್. ಉಮೇಶ್, ಹೆಚ್.ಎನ್. ಜಯದೇವ, ಇನ್ನಿತರರು ಇದ್ದರು.

Leave a Comment