ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ತಂಪೆರೆದ ವರುಣ
ಶಿವಮೊಗ್ಗ/ಚಿಕ್ಕಮಗಳೂರು : ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಮಲೆನಾಡಿನ ಜನತೆಗೆ ಮಳೆರಾಯ ಇಂದು ಕೊಂಚ ತಂಪೆರೆದಿದ್ದಾನೆ.
ಭದ್ರಾವತಿ ನಗರದಾದ್ಯಂತ ಇಂದು ಮೊದಲ ಮಳೆಯ ಸಿಂಚನವಾಗುತ್ತಿದ್ದಂತೆ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.
ಸುಮಾರು ಅರ್ಧ ಗಂಟೆಗಳ ಕಾಲ ಮಳೆ ಸುರಿದಿದ್ದು ಇದರಿಂದ ಬೆಚ್ಚಗಿದ್ದ ಇಳೆ ಕೊಂಚ ತಂಪಾಗಿದೆ, ಜೊತೆಗೆ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.
ಇನ್ನೂ ಕಾಫಿನಾಡಿನ ಹಲವೆಡೆ ಸಹ ಮಳೆಯಾದ ವರದಿಯಾಗಿದ್ದು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಶಿರಗೋಳ ಗ್ರಾಮದಲ್ಲಿ ಗುಡುಗು ಸಹಿತ ಜೋರು ಮಳೆ ಸುರಿದಿದೆ. ಕಡೂರು, ತರೀಕೆರೆ ತಾಲ್ಲೂಕಿನ ಕೆಲ ಭಾಗದಲ್ಲಿ ವರುಣರಾಯ ದರ್ಶನ ನೀಡಿದ್ದಾನೆ.