ಹೊಸನಗರದಲ್ಲಿ ಜ. 24ಕ್ಕೆ ಸರ್ಕಾರಿ ನೌಕರರ ಸಮ್ಮೇಳನ

0 490

ಹೊಸನಗರ: ರಾಜ್ಯ ಸರ್ಕಾರಿ ನೌಕರರ ಸಮ್ಮೇಳನವನ್ನು ಜನವರಿ 24ರ ಬುಧವಾರ ಏರ್ಪಡಿಸಲಾಗಿದೆ ಎಂದು ಹೊಸನಗರ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಬಸವಣ್ಯಪ್ಪನವರು ತಿಳಿಸಿದರು.

ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ಜ. 24ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಹೊಸನಗರ ಬಸ್ ಸ್ಟ್ಯಾಂಡ್ ಎದುರಿನಲ್ಲಿರುವ ಆರ್ಯ ಈಡಿಗರ ಸಭಾಭವನದಲ್ಲಿ ಕಾರ್ಯಕ್ರಮ ಆರಂಭವಾಗಲಿದ್ದು ಈ ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನೌಕರರನ್ನು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರರವರು ಸಾಧಕರಿಗೆ ಸನ್ಮಾನಿಸಲಿದ್ದು ಬಹುಮಾನ ವಿತರಣೆಯನ್ನು ಶಾಸಕ ಬೇಳೂರು ಗೋಪಾಲಕೃಷ್ಣರವರು ವಿತರಿಸಲಿದ್ದಾರೆ.
ಪ್ರತಿಭಾ ಪುರಸ್ಕಾರವನ್ನು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರವರು ನೇರವೇರಿಸಲಿದ್ದು ನಿವೃತ ತಾಲ್ಲೂಕು ಅಧ್ಯಕ್ಷರಿಗೆ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿಯವರು ಸನ್ಮಾನಿಸಲಿದ್ದಾರೆ. ಪ್ರಜಾಸ್ನೇಹಿ ಆಡಳಿತ ವಿಶೇಷ ಉಪನ್ಯಾಸವನ್ನು ಜಿ.ಎಸ್.ನಟೇಶ್ ಪ್ರವಚನ ನೀಡಲಿರುವರು.

ಈ ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ಸಂಘದ ಅಧ್ಯಕ್ಷರಾದ ಬಸವಣ್ಯಪ್ಪ ಎಂ ರವರು ವಹಿಸಲಿದ್ದು, ಮುಖ್ಯ ಅತಿಥಿಯಾಗಿ ತಹಶೀಲ್ದಾರ್ ರಶ್ಮಿ, ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ರಾಜ್ಯ ಉಪಾಧ್ಯಕ್ಷರಾದ ಮೋಹನ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಗೌರವಾಧ್ಯಕ್ಷ ಪಾಪಣ್ಣ, ಅರುಣ್ ಕುಮಾರ್, ಪ್ರಸನ್ನ ಹಾಗೂ ಜಿಲ್ಲಾವಾರು ತಾಲ್ಲೂಕು ಸಂಘಗಳ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರು ಆಗಮಿಸಲಿದ್ದು ಉಪಸ್ಥತಿ ಹಾಲಪ್ಪ ಸಂಕೂರು, ಹೆಚ್.ಆರ್ ಸುರೇಶ್, ರಂಗಸ್ವಾಮಿ, ರೇಣುಕೇಶ್, ಧನ್ಯಕುಮಾರ್, ಪೃಥ್ವಿರಾಜ್, ಯಶೋಧ ಹಾಗೂ ಹೊಸನಗರ ತಾಲ್ಲೂಕು ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಆಗಮಿಸಲಿದ್ದು ಈ ಸಮ್ಮೇಳನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವುದರ ಜೊತೆಗೆ ಹೊಸನಗರ ತಾಲ್ಲೂಕಿನ ಕೀರ್ತಿ ಪಾತಕೆಯನ್ನು ರಾಜ್ಯಕ್ಕೆ ತಲುಪಿಸುವ ಕಾರ್ಯ ಮಾಡಬೇಕೆಂದು ಈ ಮೂಲಕ ಕೇಳಿಕೊಂಡರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ, ಖಜಾಂಚಿ ಪ್ರಭಾಕರ್ ಆರ್, ಸುಧೀಂದ್ರಕುಮಾರ್, ಕೆ. ಜಗದೀಶ್ ಕಾಗಿನೆಲ್ಲಿ, ಸ್ವಾಮಿರಾವ್ ಹೆಚ್, ಸೋಮಶೇಕರ ಬಿ.ಪಿ, ವನಮಾಲ, ಪಂಡಿತಾರಾಧ್ಯ, ಪೃಥ್ವಿರಾಜ್, ಆರ್.ಪಿ ಸುರೇಶ್, ಮಾಲತೇಶ್, ಸಂತೋಷ್, ನಾಗರಾಜ್, ವೀರಭದ್ರ, ರಾಘವೇಂದ್ರ, ಚೇತನ, ಅಮೃತೇಶ್, ಸೂರತ್, ನಟರಾಜ್, ಯೋಗೇಂದ್ರ, ಅಭಿಷೇಕ್, ಡಾ|| ಸುರೇಶ್, ಮಲ್ಲಿಕಾರ್ಜುನ್, ಸಂಜಯ್, ರಮೇಶ್, ಮಾರುತಿ, ಎಂ.ಎಸ್ ದೊಡ್ಡಮನಿ, ಪದ್ಮಾವತಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!