RIPPONPETE | ಮಲೆನಾಡಿನಲ್ಲಿ ಬಿರುಸುಕೊಂಡ ಪುಷ್ಯ ಮಳೆಯಿಂದಾಗಿ ಸಮೀಪದ ಹೆದ್ದಾರಿಪುರ ಹಾಗೂ ಕಲ್ಲೂರು ನಡುವೆ ಸಂಪರ್ಕಕ್ಕೆ ಇರುವ ಕುಮದ್ವತಿ ನದಿಯ ಕಿರುಸೇತುವೆ ಮೇಲೆ ಶುಕ್ರವಾರ ಬೆಳಗಿನಿಂದ ಸುರಿದ ಭಾರಿ ಮಳೆಯಿಂದಾಗಿ ನದಿ ಉಕ್ಕಿ ಹರಿಯುತ್ತಿದ್ದು, ಅಕ್ಕಪಕ್ಕದ ಹಳ್ಳಿ ಜನರು ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜಮಾಯಿಸಿದ್ದು ಕಂಡು ಬಂತು.

ಈ ಭಾಗದಲ್ಲಿ ಕುಮುದ್ವತಿ ನದಿ ಉಕ್ಕಿ ಹರಿದಿದ್ದರಿಂದಾಗಿ ಅಕ್ಕಪಕ್ಕದ ಕೃಷಿ ಜಮೀನುಗಳು ಜಲಾವೃತಗೊಂಡಿದ್ದು, ಅಲ್ಲಿ ಸಂತಾನೋತ್ಪತ್ತಿಗಾಗಿ ಬರುತ್ತಿದ್ದ ಮೀನುಗಳನ್ನು ಬಲೆ ಬಿಟ್ಟು ಹಿಡಿಯುವುದರಲ್ಲಿ ಸ್ಥಳೀಯರು ನಿರತರಾಗಿದ್ದರು.
ವಾರದಿಂದೀಚೆಗೆ ಬಿರುಸು ಪಡೆದು ಎಡಬಿಡದೆ ಸುರಿಯುತ್ತಿರುವ ಪುಷ್ಯ ಮಳೆಯು, ಈ ಭಾಗದಲ್ಲಿ ಕೃಷಿ ಚಟುವಟಿಕೆ ಸ್ವಲ್ಪ ಹಿನ್ನಡೆಯನ್ನುಂಟು ಮಾಡಿದೆ. ಆದರೂ ಅಲ್ಲಲ್ಲಿ ಸಸಿಮಡಿಗಳಿಂದ ಸಸಿ ಕೀಳುವುದು ಸೇರಿದಂತೆ ಇತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬರುತ್ತಿದೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.