ಅಪಘಾತದಲ್ಲಿ ಗಾಯಗೊಂಡ ಯುವಕನ ಚಿಕಿತ್ಸೆಗೆ ನೆರವಾಗಿ

Written by malnadtimes.com

Published on:

HOSANAGARA ; ರಂಜನ್ ಆಚಾರ್ಯ (ಮಾಣಿ) ಎಂಬ 24 ವರ್ಷದ ಕಾರ್ಪೆಂಟರ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾರುತಿಪುರದಲ್ಲಿ ತಾಯಿಯೊಂದಿಗೆ ವಾಸವಾಗಿದ್ದ ಯುವಕ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ‌.

WhatsApp Group Join Now
Telegram Group Join Now
Instagram Group Join Now

ಈತನಿಗೆ ಯಾವುದೇ ರೀತಿಯ ಜಮೀನು ಆದಾಯ ಇರುವುದಿಲ್ಲ. ಪ್ರತಿನಿತ್ಯದಂತೆ ಕೆಲಸ ಮುಗಿಸಿ ಮನೆಗೆ ಊಟಕ್ಕೆಂದು ಹಿಂತಿರುಗುವಾಗ ಬೈಕ್ ಹಾಗೂ ಬಸ್ ನಡುವೆ ಭೀಕರ ಅಪಘಾತದಲ್ಲಿ ಈತನ ತಲೆ ಹಾಗೂ ಎದೆ ಭಾಗಕ್ಕೆ ಅತಿಯಾದ ಹೊಡೆತ ಬಿದ್ದು ಸರ್ಜರಿ ಮಾಡಲು ಶಿವಮೊಗ್ಗ ನಾರಾಯಣ ಹೃದಯಾಲಯದಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅತೀ ಕಡು ಬಡತನದಿಂದ ಬಂದ ಈ ಯುವಕನ ಬಾಳಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡುವ ಸನ್ನಿವೇಶ ಎದುರಾಗಿದೆ.

ಈತನೆ ತನ್ನ ತಾಯಿಗೆ ನೆರವು ಕೂಡ. ಈ ಹಿಂದೆ ತನ್ನ ಅಕ್ಕನ ಗಂಡ (ಭಾವ) ಕೂಡ ಬೇರೊಂದು ಕಾಯಿಲೆಯಿಂದ ಮಣಿಪಾಲ ಆಸ್ಪತ್ರೆಯಲ್ಲಿ ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಸರಿ ಸುಮಾರು 2-3 ಲಕ್ಷ ರೂ. ಅಂದಾಜು ಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ ಎಂದು ತಿಳಿಸಿದ್ದು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಲು ಈ ಮೂಲಕ ಕೋರುಲಾಗಿದೆ‌.

Account number : 4835101002804
Bank : Canara bank
IFSC code : CNRB0004835
Phone pay & google pay number : 9606235341 Ganesh D Achari

Leave a Comment