ಫೆ. 8 ಮತ್ತು 9ರಂದು ಹೊಸನಗರ ನೆಹರು ಮೈದಾನದಲ್ಲಿ ಅಂಬೇಡ್ಕರ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ

Written by malnadtimes.com

Published on:

ಹೊಸನಗರ ; ಫೆ. 8 ಮತ್ತು 9ರಂದು ಪಟ್ಟಣದ ನೆಹರು ಮೈದಾನದಲ್ಲಿ ಕೊರಗ ಹಾಗೂ ಕೊರರ್ ಸಮಾಜ ಭಾಂದವರಿಗಾಗಿ 90 ಗಜಗಳ ಟೆನ್ನಿಸ್ ಬಾಲ್ ‘ಅಂಬೇಡ್ಕರ್ ಟ್ರೋಫಿ’ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಹೊಸನಗರ ಪಟ್ಟಣ ಪಂಚಾಯತಿ ಪೌರ ನೌಕರ ಹಾಗೂ ಈ ಕ್ರಿಕೆಟ್ ಪಂದ್ಯಾವಳಿಯ ಆಯೋಜಕರ ಅಧ್ಯಕ್ಷ ಚಂದ್ರಪ್ಪ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸನಗರದ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ನಮ್ಮ ಸಮಾಜ ಭಾಂದವರಿಗಾಗಿ ಹಾಗೂ ನಮ್ಮ ಜನಾಂಗದವರು ಒಟ್ಟಿನಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.

ಅಂದು ಬೆಳಿಗ್ಗೆ 10 ಗಂಟೆಗೆ ನೆಹರು ಮೈದಾನದಲ್ಲಿ ಈ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಯನ್ನು ತೀರ್ಥಹಳ್ಳಿ-ಹೊಸನಗರ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರರವರು ಉದ್ಘಾಟಿಸಲಿದ್ದು ಪಟ್ಟಣ ಪಂಚಾಯತಿಯ ಎಲ್ಲ ಚುನಾಯಿತ ಅಧ್ಯಕ್ಷ, ಸದಸ್ಯರು ಆಗಮಿಸಲಿದ್ದಾರೆ ಇವರ ಜೊತೆಗೆ ಪಟ್ಟಣ ಪಂಚಾಯತಿಯ ನೌಕರರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಲಿದ್ದಾರೆ ಎಂದರು.

ಫೆ. 9ರ ಭಾನುವಾರ ಸಂಜೆ 5ಗಂಟೆಗೆ ಈ ಕ್ರಿಕೆಟ್ ಪಂದ್ಯಾವಳಿಯ ಮುಕ್ತಾಯ ಸಮಾರಂಭ ನಡೆಯಲಿದ್ದು ಹೊಸನಗರ-ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಗೆದ್ದ ತಂಡಕ್ಕೆ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ವಿತರಿಸಲಿದ್ದಾರೆ ಎಂದರು.

ಹೊಸನಗರ ತಾಲ್ಲೂಕಿನ ಎಲ್ಲ ರಾಜಕೀಯ ನಾಯಕರುಗಳು ಸಾರ್ವಜನಿಕರು ಹಾಗೂ ಜನಾಂಗದವರು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೇಳಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಉಮೇಶ್, ಅಣ್ಣಪ್ಪ, ಪೃಥ್ವಿ, ಹೊಸನಗರದ ಪೌರ ನೌಕರರಾದ ನಾಗರಾಜ್, ನಾಗಪ್ಪ, ಕಾರ್ತಿಕ, ಕಿರಣ, ಹರೀಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment