ಆಟವಾಡುತ್ತಾ ರಸ್ತೆಗೆ ಬಂದ ಬಾಲಕ ; ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಸಾವು !

Written by Mahesha Hindlemane

Updated on:

ತೀರ್ಥಹಳ್ಳಿ : ತಾಲೂಕಿನ ಗುಂಡುಗದ್ದೆ ಬಳಿ ಇಂದು ಹೃದಯಾವಿದ್ರಾವಕ ಘಟನೆಯೊಂದು ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೌದು, ತ್ರಯಂಬಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಪಾಲ್ ಸಮೀಪದ ಗುಂಡುಗದ್ದೆಯ ಪತ್ರಕರ್ತ ಪ್ರಗತ್‌.ಕೆ.ಆರ್‌ ಮತ್ತು ರಂಜನಾ ದಂಪತಿಯ 6 ವರ್ಷದ ಪುತ್ರ ಋಷ್ಯ ಎಂಬಾತನು ಆಟವಾಡುತ್ತಾ ರಸ್ತೆಗೆ ಬಂದಾಗ ಕಾರು ಡಿಕ್ಕಿ ಹೊಡೆದಿದೆ‌.

ಮನೆಯ ಪಕ್ಕದಲ್ಲಿ ಲಾರಿ ನಿಂತಿದ್ದರಿಂದ ಮಗು ರಸ್ತೆಯಲ್ಲಿ ಇರುವುದು ಕಾರು ಚಾಲಕನಿಗೆ ಗೋಚರಿಸದ ಪರಿಣಾಮ ಕಾರು ಡಿಕ್ಕಿ ಹೊಡೆದಿದೆ. ತಕ್ಷಣವೇ ಸ್ಥಳದಲ್ಲಿದ್ದ ಪೋಷಕರು ಮಗುವನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಘಟನೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Leave a Comment