Ripponpete

ರಿಪ್ಪನ್‌ಪೇಟೆ ಜಿ.ಎಸ್.ಬಿ. ಸಮಾಜದಲ್ಲಿ ಶ್ರೀರಾಮನಾಮ ತಾರಕ ಮಂತ್ರ ಪಠಣ ಕೋಟಿ ಸಂಭ್ರಮ ಕಾರ್ಯಕ್ರಮ

ರಿಪ್ಪನ್‌ಪೇಟೆ ; ಗೋಕರ್ಣ ಪರ್ತಗಾಳಿ ಮಠ ಸಂಸ್ಥಾಪನೆಯಾಗಿ 550 ವರ್ಷಗಳಿಂದ ಕಳೆದಿದ್ದು ಈ ಶುಭ ಸಂದರ್ಭದಲ್ಲಿ ಮಠಾಧೀಶರಾದ ಶ್ರೀವಿದ್ಯಾದೀಶ ತೀರ್ಥ ಸ್ವಾಮಿಜಿವರ ಅಶಯದಂತೆ 550 ದಿನಗಳ ಕಾಲ 550 ಕೋಟಿ ರಾಮನಾಮ ಜಪ ಪಠಣ ಸಂಕಲ್ಪದಂತೆ ರಿಪ್ಪನ್‌ಪೇಟೆಯ ಜಿ.ಎಸ್.ಬಿ. ಸಮಾಜ ಬಾಂಧವರು ತಮ್ಮ ಗುರಿಯಾದ ಒಂದು ಕೋಟಿ ಶ್ರೀರಾಮನಾಮ ಜಪ ಪಠಣ ಪೂರೈಸಿ ಶ್ರೀರಾಮನಾಮ ತಾರಕ ಮಂತ್ರ ಪಠಣ ಕೋಟಿ ಸಂಭ್ರಮಹಾಗೂ ಸಮಾಜದ ಮಹಿಳಾ ಮಂಡಳಿಯವರಿಂದ ಶ್ರಾವಣ ಮಾಸದ ಸಾಮೂಹಿಕ ಚೂಡಿ ಪೂಜನ ಕಾರ್ಯಕ್ರಮವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇದೇ ಸಂದರ್ಭದಲ್ಲಿ ಮಹಿಳೆಯರು ಪರಸ್ಪರ ಚೂಡಿ ವಿನಿಮಯ ಮಾಡಿಕೊಂಡು ಹಿರಿಯರಿಂದ ಆಶೀರ್ವಾದವನ್ನು ಪಡೆದರು.
ಜಿ.ಎಸ್.ಬಿ.ಸಮಾಜದ ಆಧ್ಯಕ್ಷ ಗಣೇಶ್ ಎನ್.ಕಾಮತ್,ಮಠದ ಪರಂಪರೆಯ ವಿಚಾರವನ್ನು ಪ್ರಸ್ತಾಪಿಸಿ ಸಮಾಜದ ಇಂದಿನ ಯುವ ಪೀಳಿಗಗೆ ಪರಿಚಯಿಸಿದರು.

ಎಂ.ಆರ್.ಭಟ್ ಇವರ ನೇತೃತ್ವದಲ್ಲಿ ಶ್ರೀರಾಮನಾಮ ತಾರಕ ಮಂತ್ರ ಫಠಣ ಕಾರ್ಯಕ್ರಮ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಿಸಿದರು.

ಈ ಸಂದರ್ಭದಲ್ಲಿ ಜಿ.ಎಸ್.ಬಿ.ಸಮಾಜದ ಮುಖಂಡರಾದ ಜೆ.ರಾಧಾಕೃಷ್ಣ, ಹರೀಶ್‌ಶಂಕರ್ ಶರಾಫ್, ಹರೀಶ್ ಪ್ರಭು, ಉಪೇಂದ್ರ ಬಾಳಿಗಾ, ರಾಧಿಕಾ ನಾಯಕ್, ಯಶೋಧ ಶೆ.ನೈ, ಸಂಧ್ಯಾಕಾಮತ್, ಇನ್ನಿತರ ಸಮಾಜ ಬಾಂಧವರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>