ಬಾಲಕನ ಪಾಲಿಗೆ ಉರುಳಾದ ಸೀರೆ ಜೋಕಾಲಿ !

0 647

ಸೀರೆ ಜೋಕಾಲಿ ಕುತ್ತಿಗೆಗೆ ಬಿಗಿದು ಬಾಲಕ ಸಾವು !

ಎನ್.ಆರ್.ಪುರ : ಆಟವಾಡುವ ವೇಳೆ ಸೀರೆ ಜೋಕಾಲಿ ಕುತ್ತಿಗೆಗೆ ಬಿಗಿದು ಬಾಲಕ ಸಾವನ್ನಪ್ಪಿದ ಘಟನೆ ತಾಲೂಕಿನ ಬಾಳೆಹೊನ್ನೂರು ಮೇಲ್ಪಾಲ್ ಸಮೀಪದ ಕರ್ಕೇಶ್ವರ ಕೈಮರದಲ್ಲಿ ಮಂಗಳವಾರ ನಡೆದಿದೆ.

ಸನ್ಮಯ್ (12) ಮೃತಪಟ್ಟ ಬಾಲಕ. ಮಂಗಳವಾರ ಸಂಜೆ ಸಹೋದರನೊಂದಿಗೆ ಮರಕ್ಕೆ ಸೀರೆ ಕಟ್ಟಿ ಜೋಕಾಲಿ ಮಾಡಿಕೊಂಡು ಆಟವಾಡುತ್ತಿದ್ದ ವೇಳೆ ಸೀರೆಯ ಜೋಕಾಲಿ ಬಾಲಕನ ಕುತ್ತಿಗೆಗೆ ಬಿಗಿದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಮನೆಯಲ್ಲಿದ್ದ ಮಕ್ಕಳು ಆಟವಾಡುವ ವೇಳೆ ದುರಂತ ಸಂಭವಿಸಿದೆ.

Leave A Reply

Your email address will not be published.

error: Content is protected !!