Rain Alerts | ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ ಸಾಧ್ಯತೆ
ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾನುವಾರ ಇಂದು ಸಹ ಗುಡುಗು ಸಹಿತ ಮಳೆ (Rain) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿ ಭಾಗದಲ್ಲಿ ಭಾನುವಾರ ಗಾಳಿಯು ಪ್ರತಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಸೂಚನೆ ನೀಡಿದೆ.
ಏಪ್ರಿಲ್ 15 ಹಾಗೂ 16ರಂದು ರಾಜ್ಯಾದ್ಯಂತ ಒಣಹವೆ ಇರಲಿದೆ. ಏಪ್ರಿಲ್ 17ರಂದು ದಕ್ಷಿಣ ಕನ್ನಡ, ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಸೇರಿದಂತೆ 22 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಸೂಚನೆ ನೀಡಿದೆ.
ಕಳೆದ 24 ಗಂಟೆಗಳಲ್ಲಿ ಆಗುಂಬೆ 81, ಶಿವಮೊಗ್ಗ 79.5 ಉತ್ತರ ಕನ್ನಡ 68, ಕಲಬುರಗಿ 67,
ಉಡುಪಿ 64, ವಿಜಯಪುರ 57, ಯಾದಗಿರಿ 55, ಬಳ್ಳಾರಿ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ 54.5, ಧಾರವಾಡ 52.5, ರಾಯಚೂರು 45, ದ.ಕನ್ನಡ 38.5, ಹಾವೇರಿ 37, ದಾವಣಗೆರೆ 35.5 ಗದಗ 29, ಕೊಪ್ಪಳ 27 ಹಾಸನ 19.5 ಬಾಗಲಕೋಟೆ 18.5, ಬೆಳಗಾವಿ 18, ಬೀದರ್ 17.5 ಮಿ.ಮೀ. ಮಳೆಯಾಗಿದೆ.
ಇನ್ನೂ ಹಿರೇಜಂಬೂರ್ 79.5, ಚಾದವಳ್ಳಿ 68, ಬಳ್ಳೂರ್ಗಿ 67, ಮಾಲ 64, ಚಿತ್ತೂರು, ಶಿವಮೊಗ್ಗ 63, ಹರನಾಳ್ 57, ಮಳ್ಳ ಬಿ 55, ಸಾಸ್ವೇಹಳ್ಳಿ, ಬಳ್ಳಾರಿ 54.5 ಮತ್ತು ಬೆಡ್ಕಾನಿ ದ.ಕ. 53.5 ಮಿ.ಮೀ. ಅತೀ ಹೆಚ್ಚು ಮಳೆ ಸುರಿದಿದೆ.