ಸಾಲ ಬಾಧೆ ತಾಳಲಾರದೆ ನೇಣಿಗೆ ಶರಣಾದ ರೈತ !

0 509

ಎನ್.ಆರ್.ಪುರ: ಸಾಲ (Loan) ಬಾಧೆ ತಾಳಲಾರದೆ ಮನನೊಂದು ರೈತನೋರ್ವ (Farmer) ಆತ್ಮಹತ್ಯೆಗೆ (Suicide) ಶರಣಾದ ಘಟನೆ ತಾಲೂಕಿನ ಕೊನೋಡಿ ಗ್ರಾಮದ ಹಳ್ಳಿಬೈಲಿನಲ್ಲಿ ನಡೆದಿದೆ.

ಎಚ್‌.ಎಸ್.ವಿಜಯ (64) ಮೃತ ರೈತ. ಜಮೀನು ಅಭಿವೃದ್ದಿಗಾಗಿ ಬ್ಯಾಂಕ್, ಸೊಸೈಟಿ ಹಾಗೂ ಇತರ ಕಡೆಗಳಲ್ಲಿ ಲಕ್ಷಾಂತರ ರೂ. ಸಾಲ ಮಾಡಿದ್ದ ಈತ, ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ಮನೆಬಿಟ್ಟ ವಿಜಯ ಹಿಂತಿರುಗಿರಲಿಲ್ಲ. ಭಾನುವಾರ ಬೆಳಿಗ್ಗೆ ಅವರ ತೋಟದ ಪಕ್ಕದಲ್ಲಿ ಹರಿಯುವ ಹಳ್ಳದ ಸಮೀಪಕ್ಕೆ ಪಂಪ್‌ಸೆಟ್ ಆನ್ ಮಾಡಲು ಹೋಗಿದ್ದ ಗ್ರಾಮಸ್ಥರೊಬ್ಬರಿಗೆ ವಿಜಯ ಮರವೊಂದಕ್ಕೆ ನೇಣು ಬಿಗಿಕೊಂಡಿರುವ ಸ್ಥಿತಿಯಲ್ಲಿ ಕಂಡುಬಂದಿದೆ. ಕೂಡಲೇ ಮನೆಯವರಿಗೆ ವಿಷಯ ತಿಳಿಸಿದ್ದಾರೆ.

ಮೃತ ರೈತ ವಿಜಯ ಅವರ ಪುತ್ರ ಮಿಥುನ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ರೈತ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!