ರಿಪ್ಪನ್ಪೇಟೆ ; ಗರ್ತಿಕೆರೆಯ ಗುರುಕರುಣೆ ಆಟೋ ಚಾಲಕ ಚಂದ್ರಶೇಖರ ಎಂಬುವರ ಮನೆಯಲ್ಲಿ ಅಡಗಿದ್ದ ಸುಮಾರು ಆರು ಅಡಿ ಉದ್ದದ ನಾಗರಹಾವನ್ನು ರಿಪ್ಪನ್ಪೇಟೆಯ ಉರಗ ಸಂರಕ್ಷಕ ಗಂಗಾಧರ್ ಎಂಬುವರು ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಬಿಟ್ಟರು.
ರಾತ್ರಿ ವೇಳೆಯಲ್ಲಿ ಮನೆಯೊಳಗೆ ಶಬ್ದ ಮಾಡುವುದನ್ನು ಗಮನಿಸಿದ ಮನೆಯವರು ಹಾವು ಇರುವುದನ್ನು ಪತ್ತೆ ಹಚ್ಚಿದ್ದಾರೆ. ಕೂಡಲೇ ಗಂಗಾಧರನಿಗೆ ವಿಷಯ ತಿಳಿಸಿದ್ದು ಸ್ಥಳಕ್ಕಾಗಮಿಸಿದ ಗಂಗಾಧರ್ ಸುರಕ್ಷಿತವಾಗಿ ಹಾವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಈ ಮೂಲಕ ಮನೆಯವರು ನಿಟ್ಟುಸಿರು ಬಿಡುವಂತಾಯಿತು.
Malnad Times App ಡೌನ್ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

