ರಿಪ್ಪನ್ಪೇಟೆ : ಜುಲೈ ತಿಂಗಳು ಕಳೆಯುತ್ತ ಬಂದರೂ ಸಕಾಲದಲ್ಲಿ ವಾಡಿಕೆ ಮಳೆಯಾಗದೆ
ರೈತರು ಬೀಜವನ್ನು ಬಿತ್ತಲಾಗದೆ ಬರಡು ಭೂಮಿಯಂತಾಗಿರುವ ಹೊಸನಗರ ತಾಲ್ಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಜನಪರ ಹೋರಾಟ ವೇದಿಕೆ ಅಧ್ಯಕ್ಷ, ರೈತ ಮುಖಂಡ ಆರ್.ಎನ್.ಮಂಜುನಾಥ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಪತ್ರ ಬರೆಯುವ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಡು ಮಲೆನಾಡಿನಲ್ಲಿ ಮಳೆಯಿಲ್ಲದೆ ರೈತಾಪಿ ವರ್ಗ ಭತ್ತ, ಮುಸುಕಿನಜೋಳ ಹಾಗೂ ಅಡಿಕೆ, ಕಾಳುಮೆಣಸು, ಶುಂಠಿ ಇನ್ನಿತರ ವಾಣಿಜ್ಯ ಬೆಳೆಗಳಿಗೂ ನೀರಿಲ್ಲದೆ ಒಣಗಿ ಹೋಗುತ್ತಿದ್ದು ಶುಂಠಿ ಬೆಳೆಗೆ ಮಾರಕ ರೋಗ ಬಾಧೆ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುವ ರೈತರ ಬವಣೆ ಕೇಳೋರಿಲ್ಲದಂತಾಗಿದೆ.
ರಾಷ್ಟ್ರೀಕೃತ ಕೆನರಾ ಬ್ಯಾಂಕ್ನಲ್ಲಿ ಬೆಳೆ ಸಾಲ ಪಡೆಯಲು ಹೋದರೆ ಅಧಿಕಾರಿಗಳಿಗೆ ಕನ್ನಡ ಭಾಷೆ ಬರುತ್ತಿಲ್ಲ. ಇನ್ನು ಬರುವ ಗ್ರಾಹಕರುಗಳು ಬ್ಯಾಂಕ್ಗಳಿಗೆ ಅಲೆಯುವಂತಾಗಿದೆ. ಇನ್ನೂ ಸಹಕಾರ ಸಂಘಗಳಲ್ಲಿ ಹೆಚ್ಚುವರಿ ಹೊಸ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೂ ಸಾಲ ಕೊಡುತ್ತಿಲ್ಲ ಎಂದು ಜನಪರ ಹೋರಾಟ ವೇದಿಕೆಯ ಅಧ್ಯಕ್ಷ ಆರ್.ಎನ್.ಮಂಜುನಾಥ ಮುಖ್ಯಮಂತ್ರಿಗಳಿಗೆ ಹಾಗೂ ಸಹಕಾರಿ ಸಚಿವರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

