ಹೊಸನಗರ

ಉತ್ತಮ ಮಳೆ-ಬೆಳೆಗಾಗಿ ರಂಭಾಪುರಿ ಶ್ರೀಗಳ ಇಷ್ಟಲಿಂಗ ಪೂಜೆಯಲ್ಲಿ ಪ್ರಾರ್ಥಿಸಿದ ಮಲೆನಾಡಿನ ಭಕ್ತರು

ಶ್ರಾವಣ ಮಾಸದ ಪ್ರಯುಕ್ತ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಶ್ರೀ 1008 ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಲಾಯಿತು.

InShot 20260907 184219165

ರಿಪ್ಪನ್‌ಪೇಟೆ : ಶ್ರಾವಣ ಮಾಸದ ಪ್ರಯುಕ್ತ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಶ್ರೀ 1008 ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಲಾಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಪುಣ್ಯ ಕಾರ್ಯದಲ್ಲಿ ಮಲೆನಾಡು ಭಾಗದ ಅನೇಕ ಭಕ್ತರು ಪಾಲ್ಗೊಂಡು, ನಾಡಿನಲ್ಲಿ ಉತ್ತಮ ಮಳೆಯಾಗಿ ರೈತರ ಬೆಳೆ ಸಮೃದ್ಧವಾಗಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುವ ಮೂಲಕ ಶ್ರೀಗಳ ದರ್ಶನ ಹಾಗೂ ಆಶೀರ್ವಾದ ಪಡೆದುಕೊಂಡರು.

ನಿತ್ಯವೂ ಶ್ರದ್ಧೆಯಿಂದ ಇಷ್ಟಲಿಂಗ ಪೂಜೆ ಹಾಗೂ ಶಿವನಾಮ ಸ್ಮರಣೆ ಮಾಡುವುದರಿಂದ ಮಾನಸಿಕ ಆತಂಕಗಳು ದೂರವಾಗಿ, ನೆಮ್ಮದಿ ಹಾಗೂ ಶಾಂತಿ ಲಭಿಸುತ್ತದೆ. ಇಂದಿನ ಯುವ ಪೀಳಿಗೆಗೆ ನಮ್ಮ ಧರ್ಮದ ಸಂಸ್ಕಾರ ಮತ್ತು ಆಚಾರ-ವಿಚಾರಗಳನ್ನು ತಿಳಿಸುವ ಜವಾಬ್ದಾರಿ ಮಠ-ಮಾನ್ಯಗಳ ಮೇಲಿದೆ. ಈ ಉದ್ದೇಶದಿಂದಲೇ ರಂಭಾಪುರಿ ಪೀಠವು ಪ್ರತಿ ವರ್ಷ ಶ್ರಾವಣ ಮಾಸದ ಪೂರ್ತಿ ಇಷ್ಟಲಿಂಗ ಪೂಜೆ ಹಾಗೂ ಧಾರ್ಮಿಕ ಪ್ರವಚನಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೈಂಕರ್ಯವನ್ನು ಮಾಡುತ್ತಾ ಬಂದಿದೆ ಎಂಬ ಸಂದೇಶವನ್ನು ಈ ವೇಳೆ ಸಾರಲಾಯಿತು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಈ ಭಕ್ತಿಪೂರ್ವಕ ಕಾರ್ಯಕ್ರಮದಲ್ಲಿ ಜಂಬಳ್ಳಿಯ ಜೆ.ಎಂ.ಶಾಂತಕುಮಾರ್, ಸಹನಾ ಶಾಂತಕುಮಾರ್, ವಸಂತಮ್ಮ ಶಿವಪ್ಪಗೌಡ, ಹುಗುಡಿಯ ಇಂದ್ರಮ್ಮ ವೇದಮೂರ್ತಿಗೌಡ, ನಾಗಾರ್ಜುನಪ್ಪಗೌಡ, ಕಗ್ಗಲಿಯ ಶಿವರಾಜ್‌ಪಾಟೀಲ್, ಬೆಳಕೋಡು ವೀರೇಶ್, ರಿಪ್ಪನ್‌ಪೇಟೆ ಕೆ.ಎಂ.ಬಸವರಾಜ್, ಕೊಳವಳ್ಳಿ ಮೋಹನ್, ಸಮಟಗಾರು ಧರ್ಮರಾಜ್, ಮಳವಳ್ಳಿ ಆದರ್ಶಗೌಡ, ಮುಡುಬದ ಎಂ.ಕೆ.ಸದಾನಂದಗೌಡ, ಪಾಲಾಕ್ಷಪ್ಪಗೌಡ, ಮಲ್ಲಂದೂರು ಗುಂಡ, ಆನಂದಪುರದ ಮುತ್ರಿ ಕುಟುಂಬಸ್ಥರು ಸೇರಿದಂತೆ ಹಲವಾರು ಭಕ್ತರು ಉಪಸ್ಥಿತರಿದ್ದು ಗುರುವಿನ ಕೃಪೆಗೆ ಪಾತ್ರರಾದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]