ರಿಪ್ಪನ್ಪೇಟೆ ; ರಂಭಾಪುರಿ ಪೀಠದಲ್ಲಿ ನಡೆಯುತ್ತಿರುವ ಜಗದ್ಗುರು ಡಾ.ವೀರಸೋಮೇಶ್ವರ ಭಗವತ್ಪಾದರುಗಳವರ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜೆಯಲ್ಲಿ ಮಲೆನಾಡಿನ ಮಸರೂರು, ಜಂಬಳ್ಳಿ, ರಿಪ್ಪನ್ಪೇಟೆ, ಹುಗುಡಿ ಭಕ್ತರು ಪಾಲ್ಗೊಂಡು ದರ್ಶನಾಶೀರ್ವಾದ ಪಡೆದರು.

ಮಲೆನಾಡಿನ ಭಕ್ತರ ಧರ್ಮ ಧಾರ್ಮಿಕ ಆಚರಣೆಯಲ್ಲಿ ಶ್ರದ್ದಾ ಭಕ್ತಿಯಿಂದ ಭಾಗವಹಿಸಿ ತಮ್ಮ ಭಕ್ತಿಯ ಪರಾಕಾಷ್ಟತೆಯನ್ನು ಜಗದಾದಿ ಜಗದ್ಗುರು ರೇಣುಕಾದಿ ಪಂಚಾಚಾರ್ಯರಲ್ಲಿ
ಸಮರ್ಪಿಸುತ್ತಾ ಬರುತ್ತಿರುವುದರ ಬಗ್ಗೆ ಹರ್ಷ ತಂದಿದೆ ಎಂದು ಶ್ರೀಗಳವರು ಭಕ್ತ ಸಮೂಹವನ್ನು ಆಶೀರ್ವದಿಸಿದರು.

ಮಲೆನಾಡಿನ ಭಕ್ತರಾದ ಹೆಚ್.ಎಂ.ವರ್ತೇಶಗೌಡ ಹುಗುಡಿ, ಜಂಬಳ್ಳಿ ಜೆ.ಎಂ.ಶಾಂತಕುಮಾರ್, ಎಂ.ಎಸ್.ಜಗದೀಶ್ ಮಸರೂರು, ಕೆ.ಬಿ.ರಮೇಶ್ ಕೊಳವಳ್ಳಿ, ಪತ್ರಕರ್ತ ಕೆ.ಎಂ.ಬಸವರಾಜ, ರಿಪ್ಪನ್ಪೇಟೆ, ಅನುಪಮ ಜಗದೀಶ, ರೂಪ ಭವನಚಂದ್ರ, ನಚೀಕೇತ್, ನಂದಕಿಶೋರ್ ಇನ್ನಿತರರು ಪಾಲ್ಗೊಂಡಿದ್ದರು.


ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.