ಶಿವಮೊಗ್ಗ

ತುಮಕೂರು ಮಾರ್ಗ ಕಾಮಗಾರಿ ಹಿನ್ನೆಲೆ: ಶಿವಮೊಗ್ಗ ಸೇರಿ 20ಕ್ಕೂ ಹೆಚ್ಚು ರೈಲು ಸಂಚಾರದಲ್ಲಿ ಬದಲಾವಣೆ

ಶಿವಮೊಗ್ಗ :ತುಮಕೂರು–ರಾಯದುರ್ಗ ನೂತನ ರೈಲು ಮಾರ್ಗ ಯೋಜನೆಯ ಅಂಗವಾಗಿ ತುಮಕೂರು ಹಾಗೂ ಊರುಕೆರೆ ವಿಭಾಗದಲ್ಲಿ ನಾನ್ ಇಂಟರ್‌ಲಾಕಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು South Western Railway ಪ್ರಕಟಿಸಿದೆ.

WhatsApp Group Join Now
Telegram Group Join Now
Instagram Group Join Now

ಈ ಹಿನ್ನೆಲೆಯಲ್ಲಿ ಕೆಲವು ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು, ಕೆಲವು ರೈಲುಗಳನ್ನು ಭಾಗಶಃ ರದ್ದು ಮಾಡಲಾಗಿದೆ. ಇನ್ನೂ ಕೆಲವು ರೈಲುಗಳ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ.


ಸಂಪೂರ್ಣವಾಗಿ ರದ್ದಾದ ರೈಲುಗಳು

ಮಾರ್ಚ್ 15

  • ರೈಲು ಸಂಖ್ಯೆ 56202 ಮೈಸೂರು–ಚಾಮರಾಜನಗರ ಪ್ಯಾಸೆಂಜರ್
  • 56281 ಚಾಮರಾಜನಗರ–ತುಮಕೂರು ಪ್ಯಾಸೆಂಜರ್
  • 16567 ತುಮಕೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್
  • 66569 ಯಶವಂತಪುರ–ತುಮಕೂರು ಮೆಮು

ಮಾರ್ಚ್ 16

  • 16568 ಶಿವಮೊಗ್ಗ ಟೌನ್–ತುಮಕೂರು ಎಕ್ಸ್‌ಪ್ರೆಸ್
  • 66570 ತುಮಕೂರು–ಯಶವಂತಪುರ ಮೆಮು
  • 66573 ಯಶವಂತಪುರ–ತುಮಕೂರು ಮೆಮು
  • 66574 ತುಮಕೂರು–ಯಶವಂತಪುರ ಮೆಮು

ಇದಲ್ಲದೆ 56282 ತುಮಕೂರು–ಚಾಮರಾಜನಗರ ಪ್ಯಾಸೆಂಜರ್ ರೈಲು ಮಾರ್ಚ್ 15 ಮತ್ತು 16 ರಂದು ರದ್ದಾಗಿದೆ.
56201 ಚಾಮರಾಜನಗರ–ಮೈಸೂರು ಪ್ಯಾಸೆಂಜರ್ ರೈಲು ಮಾರ್ಚ್ 16 ಮತ್ತು 17 ರಂದು ರದ್ದಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಭಾಗಶಃ ರದ್ದಾದ ರೈಲುಗಳು

  • 66571 ಕೆಎಸ್‌ಆರ್ ಬೆಂಗಳೂರು–ತುಮಕೂರು ಮೆಮು (ಮಾರ್ಚ್ 15): ಹಿರೇಹಳ್ಳಿ–ತುಮಕೂರು ನಡುವೆ ರದ್ದು
  • 66568 ತುಮಕೂರು–ಕೆಎಸ್‌ಆರ್ ಬೆಂಗಳೂರು ಮೆಮು: ಹಿರೇಹಳ್ಳಿ ನಿಲ್ದಾಣದಿಂದ ಆರಂಭ
  • 16568 ಶಿವಮೊಗ್ಗ ಟೌನ್–ತುಮಕೂರು ಎಕ್ಸ್‌ಪ್ರೆಸ್ (ಮಾರ್ಚ್ 15): ಅರಸೀಕೆರೆವರೆಗೆ ಮಾತ್ರ ಸಂಚಾರ
  • 66567 ಕೆಎಸ್‌ಆರ್ ಬೆಂಗಳೂರು–ತುಮಕೂರು ಮೆಮು (ಮಾರ್ಚ್ 15,16): ಹಿರೇಹಳ್ಳಿವರೆಗೆ ಮಾತ್ರ
  • 66572 ತುಮಕೂರು–ಕೆಎಸ್‌ಆರ್ ಬೆಂಗಳೂರು ಮೆಮು: ಹಿರೇಹಳ್ಳಿಯಿಂದ ಆರಂಭ

ಮಾರ್ಚ್ 16

  • 20652 ತಾಳಗುಪ್ಪ–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್: ಅರಸೀಕೆರೆವರೆಗೆ ಮಾತ್ರ
  • 12725 ಕೆಎಸ್‌ಆರ್ ಬೆಂಗಳೂರು–ಧಾರವಾಡ ಎಕ್ಸ್‌ಪ್ರೆಸ್: ಅರಸೀಕೆರೆಯಿಂದ ಆರಂಭ
  • 66565 ಬಾಣಸವಾಡಿ–ತುಮಕೂರು ಮೆಮು: ಹಿರೇಹಳ್ಳಿವರೆಗೆ ಮಾತ್ರ
  • 66561 ತುಮಕೂರು–ಯಶವಂತಪುರ ಮೆಮು: ಹಿರೇಹಳ್ಳಿಯಿಂದ ಆರಂಭ

ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ

  • 20689 ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (ಮಾರ್ಚ್ 16): 75 ನಿಮಿಷ ತಡವಾಗಿ ಹೊರಡಲಿದೆ
  • 16217 ಮೈಸೂರು–ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್: 105 ನಿಮಿಷ ತಡವಾಗಿ ಸಂಚರಿಸಲಿದೆ

ಮಾರ್ಗಮಧ್ಯೆ ನಿಯಂತ್ರಣ

ಕೆಲವು ರೈಲುಗಳನ್ನು ಮಾರ್ಗ ಮಧ್ಯೆ ತಾತ್ಕಾಲಿಕವಾಗಿ ತಡೆಹಿಡಿಯಲಾಗುವುದು.

  • 12650 ಹಜರತ್ ನಿಜಾಮುದ್ದೀನ್–ಯಶವಂತಪುರ ಎಕ್ಸ್‌ಪ್ರೆಸ್ – 15 ನಿಮಿಷ (ಮಾರ್ಚ್ 12)
  • 17392 ಸಿಂಧನೂರು–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ – 45 ನಿಮಿಷ (ಮಾರ್ಚ್ 13)
  • 16228 ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ – 15 ನಿಮಿಷ (ಮಾರ್ಚ್ 13)
  • 17310 ವಾಸ್ಕೋ ಡ ಗಾಮಾ–ಯಶವಂತಪುರ ಎಕ್ಸ್‌ಪ್ರೆಸ್ – 20 ನಿಮಿಷ (ಮಾರ್ಚ್ 15)
  • 20676 ಮೈಸೂರು–ಬೆಳಗಾವಿ ಎಕ್ಸ್‌ಪ್ರೆಸ್ – 15 ನಿಮಿಷ (ಮಾರ್ಚ್ 16)

ರೈಲು ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆಗೆ ಅನುಗುಣವಾಗಿ ರೈಲುಗಳ ವೇಳಾಪಟ್ಟಿ ಪರಿಶೀಲಿಸಿ ಪ್ರಯಾಣ ಮಾಡಲು ರೈಲ್ವೆ ಇಲಾಖೆ ಮನವಿ ಮಾಡಿದೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650