ರಿಪ್ಪನ್ಪೇಟೆ : ಇಲ್ಲಿನ ರೋಟರಿ ಕ್ಲಬ್ನಿಂದ ರೈತ ಮಿತ್ರ ಕಾರ್ಯಕ್ರಮದಡಿ ರೈತರಿಗೆ ಕೃಷಿ ಸಲಕರಣೆಗಳನ್ನು ವಿತರಿಸಿ ಭತ್ತದ ಗದ್ದೆಯಲ್ಲಿ ರೋಟರಿ ಕ್ಲಬ್ ಪದಾಧಿಕಾರಿಗಳು ಸಮೂಹ ನಾಟಿ ಕಾರ್ಯದಲ್ಲಿ ತೊಡಗಿಕೊಳ್ಳುವುದರೊಂದಿಗೆ ವಿನೂತನ ಕಾರ್ಯಕ್ರಮದೊಂದಿಗೆ ಜನಮೆಚ್ಚುಗೆ ಪಡೆದರು.

ಬಡವ ಶ್ರೀಮಂತ ಎಂಬ ಭೇದ ಭಾವನೆ ಬೆಳೆಸದೆ ಎಲ್ಲೂರು ಒಂದೇ ಎಂಬ ತತ್ವದಂತೆ ಸೇವಾ ಮನೋಭಾವನೆಯ ರೋಟರಿ ಕ್ಲಬ್ನ ಧ್ಯೇಯವಾಕ್ಯವಾಗಿದ್ದು ಅದರನ್ವಯ ಇಲ್ಲಿನ ರೋಟರಿ ಕ್ಲಬ್ ರೈತರಿಗೆ ಕೃಷಿ ಸಲಕರಣೆಗಳನ್ನು ನೀಡುವುದರೊಂದಿಗೆ ತಮ್ಮ ಸೇವಾ ಗುಣವನ್ನು ಬೆಳಸುತ್ತಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ಬಲ್ಲಾಳ್ ಕರೆ ನೀಡಿದರು.

ರೈತ ಮಿತ್ರ ಕಾರ್ಯಕ್ರಮಕ್ಕೆ ಕೃಷಿ ಸಲಕರಣೆಗಳನ್ನು ಗಣೇಶ್ ಎನ್.ಕಾಮತ್ ಹಾಗೂ ಹೆಚ್.ಎಸ್. ಸುಧೀಂದ್ರ ಹೆಬ್ಬಾರ್ ನೀಡಿದರು.

ಈ ಸಂದರ್ಭದಲ್ಲಿ ಅಮಿತ ರವೀಂದ್ರ ಬಲ್ಲಾಳ್, ರಾಮೇಶ್ ಎಸ್.ಹೆಬ್ಬಾರ್ (ರಾಮು), ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎಂ.ಬಿ.ಲಕ್ಷ್ಮಣಗೌಡ, ಹೆಚ್.ಎಂ. ವರ್ತೇಶ್ಗೌಡ, ಡಾಕಪ್ಪ, ರಾಧಾಕೃಷ್ಣ, ರಾಮಚಂದ್ರ ಕೆರೆಹಳ್ಳಿ, ತಾ.ನಾ.ರಾಮಜೀ, ಸವಿತಾ ರಾಧಾಕೃಷ್ಣ, ಇನ್ನಿತರರು ಪಾಲ್ಗೊಂಡಿದ್ದರು.


