ರಿಪ್ಪನ್ಪೇಟೆ : ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಜೊತೆಗೆ ಜಲ ಮೂಲಗಳಾದ ಕೆರೆ-ಕಟ್ಟೆ, ನದಿಗಳನ್ನು ರಕ್ಷಣೆ ಮಾಡಿ ಉತ್ತಮ ಪರಿಸರ ನಿರ್ಮಾಣವಾಗಲು ಸಹಕಾರ ನೀಡಬೇಕೆಂದು ಕೋಡೂರು ಉಪವಲಯ ಅರಣ್ಯಾಧಿಕಾರಿ ಹಾಲೇಶ ಅನೇವರಿ ಹೇಳಿದರು.
ಹಿರೇಜೇನಿ ಗ್ರಾಮದ ಕಾರೇಮಟ್ಟಿಯ ಅರವಿಂದಭಟ್ಟರ ಮನೆಯ ಬಳಿ ಪರಿಸರ ದಿನಾಚರಣೆ ಹಾಗೂ ಸಂರಕ್ಷಣೆ ಕುರಿತು ಅರಣ್ಯ ಇಲಾಖೆಯೊಂದಿಗೆ ಮತ್ತು ಶಿವಮೊಗ್ಗ ಓಪನ್ ಮೈಂಡ್ ಶಾಲಾ ಮಕ್ಕಳ ಹಾಗೂ ಸಿಬ್ಬಂದಿ ವರ್ಗದ ಸಹಕಾರದಿಂದ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಗಿಡ ನೆಡುವ ಮೂಲಕ ಮಾತನಾಡಿದ ಅವರು, ಪರಿಸರ ಮಹತ್ವದ ಬಗ್ಗೆ ಮಕ್ಕಳಿಗೆ ಚಿಕ್ಕನಿಂದಲ್ಲೆ ಜಾಗೃತಿ ಮೂಡಿಸಬೇಕು. ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಬಿಟ್ಟು ಪರಿಸರ ಸ್ನೇಹಿ ಬಟ್ಟೆ ಚೀಲಗಳನ್ನು ಬಳಕೆ ಮಾಡಬೇಕು. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಬಾಲಚಂದ್ರನಾಯ್ಡ್, ಗಸ್ತು ಅರಣ್ಯಾಧಿಕಾರಿ ಕೆ.ಎನ್.ಹರೀಶ್, ಮಲ್ಲಪ್ಪ, ಚೂಡಾಮಣಿ, ಅರಣ್ಯ ವೀಕ್ಷಕರು, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದರು.

