ರಿಪ್ಪನ್ಪೇಟೆ ; ಇಲ್ಲಿನ ಯುವಕರು ಹೋಳಿ ಹಬ್ಬವನ್ನು ಸಂಭ್ರಮ ಸಡಗರದೊಂದಿಗೆ ಸಂಭ್ರಮಿಸಿದರು.
ಪ್ರೀತಿ ಸ್ನೇಹ ಹಂಚುತ್ತಾ ಹೋಳಿ ಹಬ್ಬದ ಆಚರಣೆ ನಡೆಸುತ್ತಿದ್ದು ಹೋಳಿ ಹಬ್ಬವು ಕೆಟ್ಟದನ್ನು ದಹಿಸಿ ಒಳ್ಳೆಯದನ್ನು ಅಳವಡಿಸಿಕೊಳ್ಳುವ ಒಂದು ಆಚರಣೆಯಾಗಿದೆ.
ಆ ಕಾರಣ ಇಂದು ರಿಪ್ಪನ್ಪೇಟೆಯಲ್ಲಿ ರಾಜಸ್ಥಾನಿ ಯುವಕರು ಹೋಳಿಯನ್ನು ಪರಸ್ಪರ ಬಣ್ಣದೋಕಳಿಯನ್ನು ಆಡುವುದರ ಮೂಲಕ ಸಂಭ್ರಮಿಸಿದ ದೃಶ್ಯ ಕಾಣಬಹುದಾಗಿತ್ತು.
ರಸ್ತೆ ಅಪಘಾತ ಬೈಕ್ ಸವಾರ ಸಾವು !
ರಿಪ್ಪನ್ಪೇಟೆ ; ಇಲ್ಲಿನ ಸಾಗರ ರಸ್ತೆಯ ಮೆಸ್ಕಾಂ ಕಛೇರಿ ಮುಂಭಾಗದ ಸಾಗರ-ತೀರ್ಥಹಳ್ಳಿ ರಾಜ್ಯಯಲ್ಲಿ ಬೈಕ್ಗೆ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಸವಾರ ಡಿಕ್ಕಿ ಹೊಡೆದು ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮೃತ ಬೈಕ್ ಸವಾರ ಕೆರೆಹಳ್ಳಿ ನಿವಾಸಿ ಮಂಜುನಾಥ (35) ಎಂದು ಗುರುತಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಬೈಕ್ ಸವಾರನನ್ನು ತುರ್ತು 108 ವಾಹನದಲ್ಲಿ ಶಿವಮೊಗ್ಗ ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದೊಯ್ಯುವಾಗ ಮಾರ್ಗ ಮಧ್ಯ ಸಾವನ್ನಪ್ಪಿದ್ದು ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

