ಮೀಸಲು ಅರಣ್ಯ ಅಕ್ರಮ ಒತ್ತುವರಿ | ತೆರವಿಗೆ ಅರಣ್ಯ ಇಲಾಖೆ ಮೀನಾ-ಮೇಷ ; ಗಂಭೀರ ಆರೋಪ

Written by Mahesha Hindlemane

Updated on:

ಹೊಸನಗರ ; ಕಳೆದ ಎರಡ್ಮೂರು ವರ್ಷಗಳಿಂದ ನಿರಂತರವಾಗಿ ಕೆಲವು ವ್ಯಕ್ತಿಗಳು ತಾಲೂಕಿನ ಕಸಬಾ ಹೋಬಳಿ ಮುತ್ತೂರು ಗ್ರಾಮದ ಸರ್ವೆ ನಂಬರ್ 33ರ ಸುಮಾರು 15 ಎಕರೆಗೂ ಹೆಚ್ಚು ಮೀಸಲು ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದಾರೆ. ಈ ಕುರಿತು ಅರಣ್ಯ ಇಲಾಖೆಗೆ ಒತ್ತುವರಿ ತೆರವಿಗೆ ಮನವಿ ಸಲ್ಲಿಸಿದ್ದರೂ ಅಧಿಕಾರಿ ವರ್ಗ ಸೂಕ್ತ ಕ್ರಮಕ್ಕೆ ಮುಂದಾಗದೇ ಮೀನಾ-ಮೇಷ ಎಣಿಸುತ್ತಿದೆ ಎಂದು ಬ್ರಹ್ಮೇಶ್ವರ ಗ್ರಾಮದ ವಾಸಿ ಜನಸಂಗ್ರಾಮ ಪರಿಷತ್ತಿನ ಸದಸ್ಯ ಹರೀಶ್. ಸಿ ಗಂಭೀರ ಆರೋಪ ಮಾಡಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇದು ಕರ್ನಾಟಕ ಅರಣ್ಯ ಕಾಯ್ದೆ 1963 ನಿಯಮ 1969ರ ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಸೆಕ್ಷನ್ 17ರ ಅಂತಿಯ ಅಧಿಸೂಚನೆ ಅರಣ್ಯ ಭೂಮಿ ನಕ್ಷೆಯ ಪ್ರಕಾರ ಸಂಪೂರ್ಣ ಉಲ್ಲಂಘನೆ ಆಗಿದೆ. ಈ ಹಿಂದೆ 2016-17ರಲ್ಲಿ ಈ ಪ್ರದೇಶದಲ್ಲಿ ಭೂ ಒತ್ತುವರಿ ಕುರಿತು ದೂರಿ ನೀಡಲಾಗಿ, ಇಲಾಖೆಯು ಸುಮಾರು 800 ಮೀಟರ್ ಉದ್ದಕ್ಕೆ ಕಂದಕ ತೋಡಿಸಿತ್ತು. ಅಲ್ಲದೆ, 2023-24ರಲ್ಲಿ ಇಲಾಖೆ ವತಿಯಿಂದ 2.80 ಲಕ್ಷ ರೂ. ಹಣ ಖರ್ಚು ಮಾಡಿ ಕಾಡುಜಾತಿಯ ಗಿಡಗಳನ್ನು ನೆಟ್ಟಿತ್ತು. ಆದರೆ, ಒತ್ತುವರಿದಾರರು ಈ ಗಿಡಗಳನ್ನು ಏಕಾಏಕೀ ಕಿತ್ತು ತೆರವುಗೊಳಿಸಿ ಮೀಸಲು ಅರಣ್ಯವನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆ ಎಂದಿದ್ದಾರೆ.

ಮೇಲ್ನೋಟಕ್ಕೆ ಇಲಾಖೆಯ ಸಿಬ್ಬಂದಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿರುವ ಹರೀಶ್, ಒತ್ತುವರಿ ತೆರವಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ತಪ್ಪಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

Leave a Comment